ರಿಷಬ್ ಪಂತ್  
ಕ್ರಿಕೆಟ್

Cricket: ‘ಕಾಮನ್ ಸೆನ್ಸ್ ಇಲ್ವಾ?’; ಲಂಕಾ ವಿರುದ್ಧ Rishabh Pant ಔಟ್‌ಗೆ ಮೊಹಮ್ಮದ್ ಕೈಫ್ ಗರಂ

81ನೇ ಓವರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಪಂತ್, ಕ್ರಿಸ್‌ನಿಂದ ಮುಂದೆ ಬಂದು ಚೆಂಡನ್ನು ಹೊಡೆಯಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು, ಅವರು ಸರಿಯಾಗಿ ಟೈಮ್ ಮಾಡಲು ಸಾಧ್ಯವಾಗಲಿಲ್ಲ.

ಗಾಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಔಟಾದ ಪರಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅವರ ಹೊಡೆತದ ಆಯ್ಕೆಯನ್ನು ಮಾಜಿ ಭಾರತ ಬ್ಯಾಟರ್ ಮೊಹಮ್ಮದ್ ಕೈಫ್ ಪ್ರಶ್ನಿಸಿದ್ದಾರೆ.

ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಪಂತ್ 62 ಎಸೆತಗಳಲ್ಲಿ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಮತ್ತೊಮ್ಮೆ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು.

81ನೇ ಓವರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಪಂತ್, ಕ್ರಿಸ್‌ನಿಂದ ಮುಂದೆ ಬಂದು ಚೆಂಡನ್ನು ಹೊಡೆಯಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು, ಅವರು ಸರಿಯಾಗಿ ಟೈಮ್ ಮಾಡಲು ಸಾಧ್ಯವಾಗಲಿಲ್ಲ. ಪರಿಣಾಮ ಮಿಡ್‌ಆಫ್‌ನಲ್ಲಿ ಕ್ಯಾಚ್ ನೀಡಿ ಔಟಾದರು.

ಕೈಫ್ ಗರಂ

ಶ್ರೀಲಂಕಾ ಹೊಸ ಚೆಂಡನ್ನು ತೆಗೆದುಕೊಂಡಿದ್ದ ಅದೇ ಓವರ್‌ನಲ್ಲಿ ಪಂತ್ ವಿಕೆಟ್ ಕಳೆದುಕೊಂಡಿರುವುದನ್ನು ಕೈಫ್ ಪ್ರಶ್ನಿಸಿದ್ದಾರೆ. ಹೊಸ ಚೆಂಡಿನ ಅಪಾಯವನ್ನು ಕೆಲವು ಓವರ್‌ಗಳ ಕಾಲ ಎದುರಿಸಿ ಬಳಿಕ ಬೌಲರ್‌ಗಳ ಮೇಲೆ ದಾಳಿ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಸೋನಿ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಅವರು, 'ರಿಷಭ್ ಪಂತ್ ಔಟಾದ ರೀತಿಯ ಬಗ್ಗೆ ನನಗೆ ಯಾವುದೇ ದೂರು ಇಲ್ಲ. ಅವರು ಆ ರೀತಿಯಲ್ಲೇ ಆಡುತ್ತಾರೆ. ಆದರೆ ಇಲ್ಲಿ ಪ್ರಶ್ನೆ ಇರುವುದು ಕಾಮನ್ ಸೆನ್ಸ್ ಬಗ್ಗೆ. ಹೊಸ ಚೆಂಡಿನೊಂದಿಗೆ ಅದು ಮೊದಲ ಓವರ್ ಆಗಿತ್ತು.

ಆ ಓವರ್‌ನಲ್ಲಿ ಅವರು ಮೂರು ಬಾರಿ ಮುಂದೆ ಬಂದರು. ಕಾಮನ್ ಸೆನ್ಸ್ ಎಂದರೆ ಕಟ್ ಶಾಟ್ ಆಡಬೇಕು. ಐದಾರು ಓವರ್‌ಗಳ ಕಾಲ ಹೊಸ ಚೆಂಡನ್ನು ಎದುರಿಸಬೇಕು. ಇದು ಟೆಸ್ಟ್ ಕ್ರಿಕೆಟ್‌ನ ಸಂಪ್ರದಾಯ. ಅವರ ರೀತಿಯಲ್ಲಿ ಆಡುವ ಆಟಗಾರರೂ ಕೂಡ ಕಾಮನ್ ಸೆನ್ಸ್ ಬಳಸುತ್ತಾರೆ' ಎಂದು ಕೈಫ್ ತಿಳಿಸಿದ್ದಾರೆ.

ಇತರರೇ ಉತ್ತಮ

ಭಾರತದ ವಿಕೆಟ್‌ಕೀಪರ್-ಬ್ಯಾಟರ್‌ಗಿಂತ ಇತರ ಬ್ಯಾಟರ್‌ಗಳು ಉತ್ತಮ ‘ಕ್ರಿಕೆಟ್ ಲಾಜಿಕ್’ ಪ್ರದರ್ಶಿಸುತ್ತಾರೆ ಎಂದೂ ಕೈಫ್ ಹೇಳಿದ್ದಾರೆ. “ಆ ಓವರ್‌ನ ಮೊದಲ ಎಸೆತದಲ್ಲೇ ಅವರು ಮುಂದೆ ಬಂದಿದ್ದು ನನಗೆ ಆಶ್ಚರ್ಯವಾಯಿತು. ಸ್ವಲ್ಪ ಲೆಕ್ಕಾಚಾರ ಮಾಡಬೇಕಾಗುತ್ತದೆ.

ಬ್ಯಾಟರ್ 150 ರನ್ ಗಳಿಸಿದ್ದರೂ ಹೊಸ ಚೆಂಡು ಬಂದಾಗ ಕೆಲವು ಎಸೆತಗಳನ್ನು ಎಚ್ಚರಿಕೆಯಿಂದ ಆಡುತ್ತಾರೆ. ಈ ವಿಚಾರದಲ್ಲಿ ನಾನು ಪಂತ್‌ಗೆ ಕೆಲವು ಅಂಕಗಳನ್ನು ಕಡಿತಗೊಳಿಸುತ್ತೇನೆ. ಲಾಜಿಕ್ ಮತ್ತು ಕ್ರಿಕೆಟ್‌ ಪ್ರಜ್ಞೆಯ ವಿಚಾರದಲ್ಲಿ ಅವರು ಬಹಳ ಹಿಂದೆ ಉಳಿದರು,” ಎಂದು ಕೈಫ್ ಹೇಳಿದ್ದಾರೆ.

ಪಂತ್ ಅವರನ್ನು ಕೇಶರ ನುವಾಂಥ ಔಟ್ ಮಾಡಿದರು. ದಿನದಾಟದ ಅಂತ್ಯಕ್ಕೆ ನುವಾಂಥ 175 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಎರಡು ವಿಕೆಟ್‌ಗೆ 288 ರನ್‌ಗಳಿಂದ ದಿನದಾಟ ಮುಂದುವರಿಸಿದ ಭಾರತ, ಪಂತ್ ಅವರನ್ನು 39 ರನ್‌ಗೆ ಮತ್ತು ಕೆ.ಎಲ್. ರಾಹುಲ್ ಅವರನ್ನು 82 ರನ್‌ಗೆ ಕಳೆದುಕೊಂಡಿತು. ಬಳಿಕ ದೇವದತ್ ಪಡಿಕ್ಕಲ್ 167 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು.

ನಂತರ ಧ್ರುವ್ ಜುರೆಲ್ 51 ರನ್‌ಗಳ ಉತ್ತಮ ಕೊಡುಗೆ ನೀಡಿದರೆ, ಮಾನವ್ ಸುತಾರ್ 24 ರನ್ ಗಳಿಸಿದರು. ಆದರೆ ಅಂತಿಮ ಅವಧಿಯಲ್ಲಿ ಶ್ರೀಲಂಕಾ ಬೌಲರ್‌ಗಳು ಬಲವಾಗಿ ತಿರುಗೇಟು ನೀಡಿದರು. ಪ್ರಭಾತ್ ಜಯಸೂರ್ಯ 109 ರನ್ ನೀಡಿ 4 ವಿಕೆಟ್ ಪಡೆದು ಬೌಲರ್‌ಗಳಲ್ಲಿ ಮಿಂಚಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ H1N1 ಫ್ಲೂ ಆತಂಕ: ಇಬ್ಬರಲ್ಲಿ ಸೋಂಕು ದೃಢ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಕಬಾಬ್ ಅಂಗಡಿಗಳ ತೆರವಿಗೆ ಆಗ್ರಹ!

'ನಾನು ನಲ್ಸಾರ್ ಆಹ್ವಾನವನ್ನೇ ಸ್ವೀಕರಿಸಿಲ್ಲ; ಅಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ': CJI ಸೂರ್ಯಕಾಂತ್ ಸ್ಪಷ್ಟನೆ

ಚಾಮರಾಜನಗರ ಶೂಟೌಟ್‌ ಕೇಸ್: ‘ಮೃತರು ರೈತರೇ ಹೊರತು ಬೇಟೆಗಾರರಲ್ಲ’; ಮೂವರು ತಮಿಳರ ಹತ್ಯೆಗೆ ಸಿಎಂ ವಿಜಯ್ ತೀವ್ರ ಖಂಡನೆ, ಉನ್ನತ ಮಟ್ಟದ ತನಿಖೆಗೆ ಆಗ್ರಹ..!

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ