ದಿನೇಶ್ ಚಾಂಡಿಮಲ್ ಗೆ ಗಾಯ 
ಕ್ರಿಕೆಟ್

ಗಾಲೆ ಟೆಸ್ಟ್: KL Rahul ಬಾರಿಸಿದ ಚೆಂಡು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ ಶ್ರೀಲಂಕಾ ಕ್ರಿಕೆಟಿಗ!

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಲ್ ಗಾಯಗೊಂಡಿದ್ದು ಆತಿಥೇಯರು ದೊಡ್ಡ ಹಿನ್ನಡೆ ಅನುಭವಿಸಿದರು.

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಲ್ ಗಾಯಗೊಂಡಿದ್ದು ಆತಿಥೇಯರು ದೊಡ್ಡ ಹಿನ್ನಡೆ ಅನುಭವಿಸಿದರು. ಚಂಡಿಮಲ್ ಬೌಂಡರಿ ತಡೆಯಲು ಡೈವ್ ಮಾಡಿದರು. ಈ ವೇಳೆ ಅವರ ಬಲ ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿದ್ದು, ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು ಮತ್ತು ಮುನ್ನೆಚ್ಚರಿಕೆ ಸ್ಕ್ಯಾನ್‌ಗಳಿಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಯಿತು.

ಭಾರತದ ಎರಡನೇ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನ ಕೊನೆಯಲ್ಲಿ ಈ ಘಟನೆ ಸಂಭವಿಸಿತ್ತು. ಶ್ರೀಲಂಕಾ ಆಟಗಾರರು ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಲು ಮತ್ತು ರನ್ ವೇಗವನ್ನು ನಿಧಾನಗೊಳಿಸಲು ಪ್ರಯತ್ನಿಸುತ್ತಿದ್ದರು. ಕೆಎಲ್ ರಾಹುಲ್ ಅವರ ಬ್ಯಾಟ್‌ನಿಂದ ಪ್ರಬಲವಾದ ಶಾಟ್ ಡೀಪ್ ಮಿಡ್‌ವಿಕೆಟ್ ಕಡೆಗೆ ಹೋಗುತ್ತಿತ್ತು. ಡೀಪ್ ಸ್ಕ್ವೇರ್ ಲೆಗ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ 36 ವರ್ಷದ ಚಾಂಡಿಮಲ್, ಚೆಂಡನ್ನು ಬೌಂಡರಿ ತಲುಪದಂತೆ ತಡೆಯಲು ತಮ್ಮ ಎಲ್ಲಾ ಶಕ್ತಿಯಿಂದ ಪ್ರಯತ್ನಿಸಿದರು.

ಚಂಡಿಮಲ್ ವೇಗವಾಗಿ ಓಡಿ ಬೌಂಡರಿ ಬಳಿ ಡೈವ್ ಮಾಡಿ ಚೆಂಡನ್ನು ನಿಲ್ಲಿಸಿದರು. ಅವರ ಪ್ರಯತ್ನವು ಶ್ರೀಲಂಕಾ ತಂಡಕ್ಕೆ ಎರಡು ನಿರ್ಣಾಯಕ ರನ್‌ಗಳನ್ನು ಉಳಿಸಿತು. ಆದರೆ ಚೆಂಡನ್ನು ನಿಲ್ಲಿಸಿದ ನಂತರ ಅವರ ವೇಗ ಕಡಿಮೆಯಾಗಲಿಲ್ಲ. ಅವರ ದೇಹವು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿತು. ಪರಿಣಾಮ ಅವರ ದೇಹದ ಮೇಲೆ ತೀವ್ರ ಒತ್ತಡ ಬಿದ್ದಿತ್ತು. ತಕ್ಷಣ ಚಾಂಡಿಮಲ್ ನೋವಿನಿಂದ ಬಳಲುತ್ತಿದ್ದರು. ಅವರು ಕೆಲಕಾಲ ನೆಲದ ಮೇಲೆಯೇ ಇದ್ದರು, ತಲೆ, ಕುತ್ತಿಗೆ ಮತ್ತು ಬಲ ಭುಜವನ್ನು ಹಿಡಿದಿರುವಂತೆ ಕಂಡುಬಂದಿತು. ಅವರ ಸ್ಥಿತಿಯನ್ನು ನೋಡಿದ ಶ್ರೀಲಂಕಾದ ವೈದ್ಯಕೀಯ ಸಿಬ್ಬಂದಿ ಮತ್ತು ತಂಡದ ಭೌತಚಿಕಿತ್ಸಕರು ತಕ್ಷಣ ಸಹಾಯಕ್ಕೆ ಧಾವಿಸಿದರು.

ಮೈದಾನದಲ್ಲಿ ಚಾಂಡಿಮಲ್ ಅವರನ್ನು ಪರೀಕ್ಷಿಸಲಾಯಿತು. ನಂತರ ಅವರನ್ನು ನಿಧಾನವಾಗಿ ಮೇಲಕ್ಕೆತ್ತಿ ನೋವಿನಿಂದ ಮೈದಾನದಿಂದ ಹೊರನಡೆದರು. ಶ್ರೀಲಂಕಾ ಈ ಟೆಸ್ಟ್‌ನಲ್ಲಿ ಈಗಾಗಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಚಾಂಡಿಮಲ್‌ಗೆ ಈ ಗಾಯವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 4 ರನ್‌ಗಳಿಗೆ ಔಟಾದರು. ಈಗ, ಶ್ರೀಲಂಕಾ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು 372 ರನ್ ಗಳಿಸಬೇಕಾಗಿದೆ. ಪ್ರಸ್ತುತ ಶ್ರೀಲಂಕಾ 69 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ಮೀನುಗಾರನ ಮುಖಕ್ಕೆ ಅಂಟಿಕೊಂಡ ಅಕ್ಟೋಪಸ್! ಪ್ರಾಣ ಉಳಿಸಿಕೊಳ್ಳಲು ಯುವಕನ ಹರಸಾಹಸ, ಭಯಾನಕ Video ವೈರಲ್

‘ಸರ್ಕಾರ ನಮ್ಮದು…’: BJP ನೇತೃತ್ವದ NDA ಸೇರುವಂತೆ ಅಭಿಜೀತ್ ದೀಪ್ಕೆಗೆ ಕೇಂದ್ರ ಸಚಿವರಿಂದ ಬಿಗ್ ಆಫರ್!

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ