ಮುಂಬೈ ಕ್ರಿಕೆಟ್ ಮಂಡಳಿ 
ಕ್ರಿಕೆಟ್

MCAಗೆ FDA ಶಾಕ್: ಕ್ರಿಕೆಟ್ ಮಂಡಳಿಯ 5 ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು

ಅಭಿಯಾನದ ವೇಳೆ 45 ಹೋಟೆಲ್‌, ರೆಸ್ಟೋರೆಂಟ್‌, ಆಹಾರ ಮಳಿಗೆ ಹಾಗೂ ಧಾಬಾಗಳನ್ನು ಪರಿಶೀಲಿಸಲಾಗಿದ್ದು, 33 ಸಂಸ್ಥೆಗಳಿಗೆ ಸುಧಾರಣಾ ನೋಟಿಸ್ ನೀಡಲಾಗಿದೆ.

ಮುಂಬೈ: ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA), ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ (MCA) ಆವರಣದಲ್ಲಿರುವ ಐದು ಆಹಾರ ಮಳಿಗೆಗಳ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿದೆ.

ಮಹಾರಾಷ್ಟ್ರ ರಾಜ್ಯಾದ್ಯಂತ ನಡೆಯುತ್ತಿರುವ ಆಹಾರ ಸುರಕ್ಷತಾ ತಪಾಸಣಾ ಅಭಿಯಾನದ ಭಾಗವಾಗಿ ಒಟ್ಟು 11 ಆಹಾರ ಸಂಸ್ಥೆಗಳ ಲೈಸೆನ್ಸ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು FDA ಸೋಮವಾರ ತಿಳಿಸಿದೆ.

ಅಭಿಯಾನದ ವೇಳೆ 45 ಹೋಟೆಲ್‌, ರೆಸ್ಟೋರೆಂಟ್‌, ಆಹಾರ ಮಳಿಗೆ ಹಾಗೂ ಧಾಬಾಗಳನ್ನು ಪರಿಶೀಲಿಸಲಾಗಿದ್ದು, 33 ಸಂಸ್ಥೆಗಳಿಗೆ ಸುಧಾರಣಾ ನೋಟಿಸ್ ನೀಡಲಾಗಿದೆ. ಅಲ್ಲದೆ, 25 ಕಡೆ ದಾಳಿ ನಡೆಸಲಾಗಿದೆ ಎಂದು FDA ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

MCA ಆವರಣದಲ್ಲಿರುವ ಪರ್ಮಿಟ್ ರೂಮ್, ಪೆವಿಲಿಯನ್, ಮೆಡಿಟರೇನಿಯನ್, ಓರಿಯೆಂಟಲ್ ಸ್ವಿಂಗ್ ಹಾಗೂ ಕ್ಲಬ್‌ವೇ ಮತ್ತು ಪೇಸ್ಟ್ರಿ ಕೌಂಟರ್ ಸೇರಿದಂತೆ ಒಟ್ಟು 5 ಐದು ಮಳಿಗೆಗಳ ವಿರುದ್ಧ ಈ ಕಠಿಣ ಕ್ರಮ ಜರುಗಿಸಲಾಗಿದೆ.

ಆಗಸ್ಟ್ 20ರಂದು ನಡೆಸಿದ ತಪಾಸಣೆಯಲ್ಲಿ ಈ ಮಳಿಗೆಗಳಲ್ಲಿ ಸ್ವಚ್ಛತೆ, ಆಹಾರ ನಿರ್ವಹಣೆ, ಸಂಗ್ರಹಣೆ, ಶೈತ್ಯೀಕರಣ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಹಲವು ಲೋಪಗಳು ಪತ್ತೆಯಾಗಿದ್ದವು.

ಕೊಳಗಾಗಿದ್ದ ಅಡುಗೆ ಮನೆ

ಪರ್ಮಿಟ್ ರೂಮ್‌ನಲ್ಲಿ ಅಡುಗೆಮನೆಯ ರೆಫ್ರಿಜರೇಟರ್‌ನಲ್ಲಿ ಹೆಚ್ಚಿನ ಪ್ರಮಾಣದ ಮಂಜು ಜಮೆಯಾಗಿರುವುದು, ಅಡುಗೆಮನೆ ಪ್ರವೇಶದ್ವಾರದ ಬಳಿ ನೆಲವು ಕೊಳಕಾಗಿದ್ದು ಜಾರುವಂತಿರುವುದು, ಆಹಾರದ ತಾಪಮಾನ ನಿಯಂತ್ರಣದಲ್ಲಿ ಕೊರತೆ, ಹಾಳಾಗಿದ್ದ ಕಚ್ಚಾ ವಸ್ತುಗಳು ಹಾಗೂ ಆಹಾರ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆಗಳು ಕಂಡುಬಂದಿವೆ.

ಇದಲ್ಲದೆ, ಆಹಾರದ ಸಂಪರ್ಕಕ್ಕೆ ಬರುವ ಪ್ಯಾಕೇಜಿಂಗ್ ವಸ್ತುಗಳಿಗೆ ಫುಡ್-ಗ್ರೇಡ್ ಅನುಸರಣಾ ಪ್ರಮಾಣಪತ್ರ ಇರಲಿಲ್ಲ. ಅಡುಗೆಯಲ್ಲಿ ಬಳಸುವ ಎಣ್ಣೆಯ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವ ವ್ಯವಸ್ಥೆಯೂ ಇರಲಿಲ್ಲ ಎಂದು FDA ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ: JDS ಶಾಸಕ ಹೆಚ್ ಡಿ ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Video