ಪಾಕ್ ಆಟಗಾರರು 
ಕ್ರಿಕೆಟ್

'ನಿಮ್ಮ ಜೊತೆ ನಮ್ಮನ್ನೇಕೆ ಮುಳುಗಿಸುತ್ತಿದ್ದೀರಿ': ಪಾಕ್ ಕ್ರಿಕೆಟ್ ಮುಖ್ಯವಾಗುವುದು ಚೆನ್ನಾಗಿ ಆಡುತ್ತಾರೆ ಎಂದಲ್ಲ- ಮಾಜಿ ಆಟಗಾರ

ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವು ಇದೀಗ 20 ತಂಡಗಳನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.

ಫೆಬ್ರುವರಿ 15 ರಂದು ನಡೆಯಲಿರುವ ಭಾರತ ವಿರುದ್ಧದ ಟಿ20 ವಿಶ್ವಕಪ್ 2026ರ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವ ಭೀತಿ ಎದುರಾಗಿದ್ದು, 14 ವರ್ಷಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಸ್ಪರ್ಧೆಯು ಇದೇ ಮೊದಲ ಬಾರಿಗೆ ನಿಲ್ಲುವ ಸಾಧ್ಯತೆ ಇದೆ. ಈ ಮೂಲಕ ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನಿಂತ ಮೊದಲ ಪ್ರಮುಖ ಐಸಿಸಿ ಪಂದ್ಯಾವಳಿ ಇದಾಗಲಿದೆ. ಟಿ20 ವಿಶ್ವಕಪ್ ಪಂದ್ಯಾವಳಿಯು ಫೆಬ್ರುವರಿ 7ರಂದು ಆರಂಭವಾಗಲಿದ್ದು, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ನಡೆಯಲಿದೆ.

ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವು ಇದೀಗ 20 ತಂಡಗಳನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಈಗಾಗಲೇ ಪಾಕಿಸ್ತಾನ ಸರ್ಕಾರವು ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದು, ಸೆಮಿಫೈನಲ್ ಅಥವಾ ಫೈನಲ್‌ನಲ್ಲಿಯೂ ಇವೆರಡು ಪಂದ್ಯಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ. ಆದರೆ, ಆಗಲೂ ಬಹಿಷ್ಕಾರ ಮುಂದುವರಿಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪಂದ್ಯ ನಡೆಯದಿದ್ದರೆ ಪ್ರಸಾರಕರು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಹಣವನ್ನು ಹೇಗೆ ಮರುಪಡೆಯುತ್ತದೆ ಎಂಬುದರ ಕುರಿತು ಭಾರತದ ಮಾಜಿ ತಾರೆ ಆಕಾಶ್ ಚೋಪ್ರಾ ಆಸಕ್ತಿದಾಯಕ ಉತ್ತರ ನೀಡಿದ್ದಾರೆ.

'ಮೊದಲನೆಯದಾಗಿ, ಇದು ಸ್ವಲ್ಪ ಒರಟು ಲೆಕ್ಕಾಚಾರ. ಒಂದು ನಿರ್ದಿಷ್ಟ ಆಟದಿಂದ ನೀವು ಎಷ್ಟು ಗಳಿಸುತ್ತೀರಿ ಎಂದು ಎಲ್ಲಿಯೂ ಬರೆದಿಲ್ಲ. ಈ ಸಮಯದಲ್ಲಿ ವದಂತಿ ಮಾರುಕಟ್ಟೆ ಬಿಸಿಯಾಗಿದೆ. ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಹೇಳುತ್ತಿದ್ದಾರೆ. ಆದ್ದರಿಂದ ಇದರಿಂದ ನೀವು ಕಾಲು ಬಿಲಿಯನ್ ಡಾಲರ್ ಗಳಿಸುತ್ತೀರಿ ಎಂದು ಹೇಳಲು ಸಾಧ್ಯವಿಲ್ಲ' ಎಂದು ಚೋಪ್ರಾ ಹೇಳಿದರು.

'ಸಾಕಷ್ಟು ವಿಷಯಗಳು ಸಂಭವಿಸಬಹುದು. ಒಂದು ದೇಶ/ತಂಡ ವಿಫಲವಾಗುತ್ತಿದ್ದರೆ ಅಥವಾ ತೊಂದರೆಯಲ್ಲಿದ್ದರೆ, ಇತರರು 'ನೀವು ಹೇಗೂ ಮುಳುಗುತ್ತಿದ್ದೀರಿ, ಹಾಗಾದರೆ ನಮ್ಮನ್ನೂ ಏಕೆ ನಿಮ್ಮೊಂದಿಗೆ ಮುಳುಗಿಸುತ್ತಿದ್ದೀರಿ? ಎಂದು ಕೇಳುತ್ತಾರೆ. ಇದರ ಪರಿಣಾಮವಾಗಿ, ಅವರು ಆ ದೇಶ/ತಂಡವನ್ನು ಪ್ರತ್ಯೇಕಿಸಲು ಬಯಸುತ್ತಾರೆ. ಅವರು ಅವರನ್ನು ಟೂರ್ನಮೆಂಟ್‌ನಲ್ಲಿ ಸೇರಿಸಿಕೊಳ್ಳಲು ನಿರಾಕರಿಸಬಹುದು. ಅವರು ಏನನ್ನೂ ಕೊಡುಗೆ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಟೀಕಿಸಬಹುದು. ಅಲ್ಲದೆ, ಆಟಗಾರರಿಗೆ NOC ನಿರಾಕರಿಸಬಹುದು ಮತ್ತು ಅವರೊಂದಿಗೆ ಯಾವುದೇ ದ್ವಿಪಕ್ಷೀಯ ಒಪ್ಪಂದಗಳು ಅಥವಾ ಸಹಕಾರವನ್ನು ನಿಲ್ಲಿಸಬಹುದು' ಎಂದರು.

'ಪಾಕಿಸ್ತಾನದ ಕ್ರಿಕೆಟ್ ಮುಖ್ಯವಾಗುವುದು ಅವರು ಚೆನ್ನಾಗಿ ಆಡುತ್ತಾರೆ ಎಂಬ ಕಾರಣಕ್ಕಾಗಿ ಅಲ್ಲ. ಏಕೆಂದರೆ, ಅವರು ಚೆನ್ನಾಗಿ ಆಡುವುದಿಲ್ಲ. ಕಳೆದ 10 ವರ್ಷಗಳಲ್ಲಿ ಅವರು ಐಸಿಸಿ ಈವೆಂಟ್‌ನ ಫೈನಲ್‌ಗೆ ಕೇವಲ ಎರಡು ಬಾರಿ ತಲುಪಿದ್ದಾರೆ. ಅವರು ಕೊನೆಯ ಬಾರಿಗೆ 2017 ರಲ್ಲಿ ಗೆದ್ದಿದ್ದರು ಮತ್ತು 2022 ರಲ್ಲಿ ಫೈನಲ್ ತಲುಪಿದ್ದರು. ಇದರರ್ಥ ಅವರು ಅದ್ಭುತ ಕ್ರಿಕೆಟ್ ತಂಡ ಎಂದಲ್ಲ' ಎಂದು ಚೋಪ್ರಾ ಹೇಳಿದರು.

'ಭಾರತ-ಪಾಕಿಸ್ತಾನ ಪೈಪೋಟಿ ಜೀವಂತವಾಗಿರುವುದರಿಂದಲೇ ಪಾಕಿಸ್ತಾನ ಮುಖ್ಯವಾಗಿದೆ. ನೀವು ಆ ಪೈಪೋಟಿಯನ್ನು ಕೊಂದ ದಿನ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆಟವಾಡುವುದನ್ನು ನಿಲ್ಲಿಸಿದ ದಿನ, ಭಾರತವು ತಮ್ಮ ಉಲ್ಲಾಸದ ಹಾದಿಯಲ್ಲಿ ಮುಂದುವರಿಯುತ್ತದೆ. ಆದರೆ, ಪಾಕಿಸ್ತಾನವು ಸಂಕಷ್ಟಕ್ಕೆ ಸಿಲುಕುತ್ತದೆ ಮತ್ತು ಅದರ ಮೌಲ್ಯವು ಸಂಪೂರ್ಣವಾಗಿ ಕಡಿಮೆಯಾಗುತ್ತದೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿಂದಿನ ತಪ್ಪುಗಳನ್ನು ಸರಿಪಡಿಸಲು ನಮ್ಮ ಎನರ್ಜಿ ವ್ಯಯ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ; ಪ್ರತಿಪಕ್ಷಗಳಿಂದ ಸಭಾತ್ಯಾಗ

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಿಂದ ಪ್ರಧಾನಿ ಮೋದಿ ವಿರುದ್ಧ 'ಅನಿರೀಕ್ಷಿತ ಕೃತ್ಯ'ದ ಬಗ್ಗೆ ಮಾಹಿತಿ ಇತ್ತು: ಸ್ಪೀಕರ್ ಸ್ಫೋಟಕ ಆರೋಪ

T20 ವಿಶ್ವಕಪ್: ಭಾರತ ವಿರುದ್ಧದ ಪಂದ್ಯ ಆಡಲು ಪಾಕ್ ನಕಾರ, ಸೂರ್ಯ ಕುಮಾರ್ ಯಾದವ್ ಸ್ಪಷ್ಟ ನಿಲುವು!

ಪಶ್ಚಿಮ ಬಂಗಾಳ ಬಜೆಟ್: ವಿಧಾನಸಭಾ ಚುನಾವಣೆ ಮೇಲೆ ಕಣ್ಣು; ಮಹಿಳೆಯರ ಮಾಸಿಕ ಭತ್ಯೆ 1,500 ರೂ.ಗೆ ಹೆಚ್ಚಳ

ಮೇಘಾಲಯ: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ; ಕನಿಷ್ಠ 16 ಕಾರ್ಮಿಕರು ಸಾವು

SCROLL FOR NEXT