ಮೊಹಮ್ಮದ್ ಶಮಿ 
ಕ್ರಿಕೆಟ್

Ranji Trophy: ಬೆಂಗಾಲ್ ಪರ 8 ವಿಕೆಟ್‌ ಪಡೆದು ಮೊಹಮ್ಮದ್ ಶಮಿ ಅಮೋಘ ಪ್ರದರ್ಶನ; ಬಿಸಿಸಿಐ ಆಯ್ಕೆದಾರರಿಗೆ ಸಂದೇಶ!

ರಣಜಿ ಟ್ರೋಫಿ ಫೈನಲ್‌ಗೆ ಸ್ಥಾನ ಪಡೆಯಲು ಬಂಗಾಳ ತಂಡ ಎದುರು ನೋಡುತ್ತಿರುವಾಗ, ಮೊಹಮ್ಮದ್ ಶಮಿ ಅವರ ಉತ್ತಮ ಪ್ರದರ್ಶನ ತಂಡಕ್ಕೆ ನೆರವಾಗಿದೆ.

ಮಂಗಳವಾರ ನಡೆದ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಎಂಟು ವಿಕೆಟ್‌ಗಳನ್ನು (8/90) ಪಡೆಯುವ ಮೂಲಕ ಟೀಂ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಲ್ಯಾಣಿಯ ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಬಂಗಾಳ ಪರ ಆಡಿದ ಶಮಿ, ತಮ್ಮ ಫಿಟ್‌ನೆಸ್ ಮತ್ತು ರಿದಮ್ ಮತ್ತೆ ಅತ್ಯುತ್ತಮವಾಗಿದೆ ಎಂದು ಸಾಬೀತುಪಡಿಸಿದರು. ಅವರ ಸ್ಪೆಲ್‌ಗಳು ನಿರಂತರ ನಿಖರತೆ, ಲೇಟ್ ಸ್ವಿಂಗ್ ಮತ್ತು ಟ್ರೇಡ್‌ಮಾರ್ಕ್ ಸೀಮ್ ಪ್ರಸ್ತುತಿಯ ಸಂಯೋಜನೆಯಾಗಿದ್ದು, ಅದು ಅವರನ್ನು ವಿಶ್ವದ ಅತ್ಯಂತ ಭಯಭೀತ ರೆಡ್-ಬಾಲ್ ಬೌಲರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ.

ಬಂಗಾಳ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಸುದೀಪ್ ಕುಮಾರ್ ಘರಾಮಿ ಅವರ ಆಕರ್ಷಕ 146 ರನ್‌ಗಳ ನೆರವಿನಿಂದ 328 ರನ್‌ಗಳ ಬಲವಾದ ಮೊತ್ತವನ್ನು ಗಳಿಸಿತು. 2ನೇ ದಿನದಂದು, ಬಂಗಾಳ ತಂಡ ಆರಂಭದಲ್ಲೇ ಕೇವಲ 13 ರನ್‌ಗಳಿದ್ದಾಗ ಮೂರು ವಿಕೆಟ್ ಪಡೆಯುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪ್ರಾಬಲ್ಯ ಸಾಧಿಸಿತು. 3ನೇ ದಿನದಂದು, ಹಿರಿಯ ಆಟಗಾರ ಶಮಿ ಜಮ್ಮು ಮತ್ತು ಕಾಶ್ಮೀರದ ಉಳಿದ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದು ಮಿಂಚಿದರು. ಶಮಿ ನೀಡಿರುವ ಈ ಪ್ರದರ್ಶನವು ಇದೀಗ ರಾಷ್ಟ್ರೀಯ ತಂಡಕ್ಕೆ ಅವರ ಸಂಭಾವ್ಯ ಮರಳುವಿಕೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಜಮ್ಮು ಮತ್ತು ಕಾಶ್ಮೀರದ ಅಬ್ದುಲ್ ಸಮದ್ (82) ಮತ್ತು ನಾಯಕ ಪರಾಸ್ ಡೋಗ್ರಾ (58) ನೇತೃತ್ವದ ಮಧ್ಯಮ ಕ್ರಮಾಂಕವು ಆರಂಭದಲ್ಲಿ ಹೋರಾಟ ನೀಡಿದಂತೆ ಕಂಡರೂ, ಮೊದಮ್ಮದ್ ಶಮಿ ಬೆಂಗಾಲ್ ತಂಡಕ್ಕೆ ನಿರ್ಣಾಯಕ ಪ್ರಗತಿಯನ್ನು ಒದಗಿಸಿದರು.

ಬಿಸಿಸಿಐ ಆಯ್ಕೆದಾರರು ಗಮನಿಸುತ್ತಿದ್ದಾರಾ?

2023ರ ಏಕದಿನ ವಿಶ್ವಕಪ್ ಮುಗಿದ ನಂತರ ಗಾಯ ಮತ್ತು ಫಿಟ್ನೆಸ್ ಸಮಸ್ಯೆಗಳಿಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದ ಶಮಿ, ದೇಶೀಯ ಸರ್ಕ್ಯೂಟ್‌ಗೆ ಮರಳಿದರು. ಈ ಆವೃತ್ತಿಯ ಆರಂಭದಲ್ಲಿ, ಅವರು ಗುಜರಾತ್ ಮತ್ತು ಸರ್ವಿಸಸ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದಿದ್ದರು. ಇದೀಗ 8 ವಿಕೆಟ್ ಗೊಂಚಲು ಪಡೆಯುವ ಮೂಲಕ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ಸಂದೇಶ ಕಳುಹಿಸಿದ್ದಾರೆ.

2026 ರಲ್ಲಿ ಭಾರತದ ಅಂತರರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಸೇರಿದಂತೆ ಹೆಚ್ಚಿನ ಟೆಸ್ಟ್ ಸರಣಿಗಳಿದ್ದು, ಶಮಿ ಮತ್ತೆ ಫಾರ್ಮ್‌ಗೆ ಮರಳಿರುವುದು ಭಾರತೀಯ ತಂಡದ ಆಯ್ಕೆದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಹೆಚ್ಚಿನ ತೀವ್ರತೆಯಲ್ಲಿ ದೀರ್ಘ ಸ್ಪೆಲ್‌ಗಳನ್ನು ಬೌಲಿಂಗ್ ಮಾಡುವ, ಸ್ಥಿರವಾದ ವೇಗವನ್ನು ಕಾಯ್ದುಕೊಳ್ಳುವ ಮತ್ತು ದೇಶೀಯ ಡೆಕ್‌ನಲ್ಲಿ ಬೌನ್ಸ್ ಪಡೆಯುವ ಅವರ ಸಾಮರ್ಥ್ಯವು, ಐದು ದಿನಗಳ ಕ್ರಿಕೆಟ್‌ನ ಕಠಿಣತೆಗೆ ಅವರು ಮತ್ತೊಮ್ಮೆ ಸಿದ್ಧರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ.

ರಣಜಿ ಟ್ರೋಫಿ ಫೈನಲ್‌ಗೆ ಸ್ಥಾನ ಪಡೆಯಲು ಬಂಗಾಳ ತಂಡ ಎದುರು ನೋಡುತ್ತಿರುವಾಗ, ಮೊಹಮ್ಮದ್ ಶಮಿ ಅವರ ಪ್ರದರ್ಶನ ತಂಡಕ್ಕೆ ನೆರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಭೇಟಿ ನೀಡುವಂತೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಆಹ್ವಾನ!

AI ಇಂಪ್ಯಾಕ್ಟ್ ಶೃಂಗಸಭೆ ಟಾರ್ಗೆಟ್: ವಿದೇಶಿಗರಿಂದ ದಾಳಿ ಸಾಧ್ಯತೆ, ಗುಪ್ತಚರ ವರದಿ ಬೆನ್ನಲ್ಲೇ G20 ಗ್ರೇಡ್ ಸೈಬರ್ ಭದ್ರತಾ ವ್ಯವಸ್ಥೆ!

T20 World Cup 2026: ಸ್ಕಾಟ್ಲೆಂಡ್ ವಿರುದ್ಧ ನೇಪಾಳಕ್ಕೆ 7 ವಿಕೆಟ್ ಗಳ ಭರ್ಜರಿ ಜಯ!

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ: ಅಶ್ವಿನಿ ವೈಷ್ಣವ್

'ಕರಾವಳಿ' ಹೂಡಿಕೆ ವಿವಾದ: ಪ್ರಿಯಾಂಕ್ ಖರ್ಗೆ ಸಹಜವಾಗಿ ಹೇಳಿದ್ದಾರೆ, ಆದರೆ ದಕ್ಷಿಣ ಕನ್ನಡ ಬದಲಾಗುತ್ತಿದೆ; ಪರಮೇಶ್ವರ್

SCROLL FOR NEXT