ಬಾಬರ್ ಅಜಮ್-ಮೈಕ್ ಹೆಸ್ಸನ್ 
ಕ್ರಿಕೆಟ್

ತಾಕತ್ ಇಲ್ಲ, ಹೀಗಾಗಿ 4ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ: ಬಾಬರ್ ಅಜಮ್ ಮಾನ ಕಳೆದ ಪಾಕ್ ಕೋಚ್ ಮೈಕ್ ಹೆಸ್ಸನ್!

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿವಾದಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಬಾಬರ್ ಅಜಮ್ ಅವರ ಬ್ಯಾಟಿಂಗ್ ಮತ್ತು ಅವರ ಪಾತ್ರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿವಾದಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಬಾಬರ್ ಅಜಮ್ ಅವರ ಬ್ಯಾಟಿಂಗ್ ಮತ್ತು ಅವರ ಪಾತ್ರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಬರ್ ಪವರ್‌ಪ್ಲೇ ಅಥವಾ ಅಂತಿಮ ಓವರ್‌ಗಳಿಗೆ ಸೂಕ್ತವಲ್ಲ ಎಂದು ಕೋಚ್ ಹೇಳಿದ್ದಾರೆ. ಬಾಬರ್ ಮೊದಲ ಆರು ಓವರ್‌ಗಳಲ್ಲಿ ಅವರಿಗೆ ಸ್ಫೋಟಕ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಟ್ರೈಕ್ ರೇಟ್ 100ಕ್ಕಿಂತ ಕಡಿಮೆಯಿದೆ. ಹೀಗಾಗಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ ಎಂದು ಮೈಕ್ ಹೆಸ್ಸನ್ ಹೇಳಿದರು. ಇನ್ನು 10ನೇ ಓವರ್ ನಂತರವೂ ಆಡಲು ಸಾಧ್ಯವಾಗದಿದ್ದರೆ, ಅವರು ತಂಡದಲ್ಲಿ ಏಕೆ ಆಡುತ್ತಿದ್ದಾರೆ? ಎಂದು ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

ನಾಯಕ ಸಲ್ಮಾನ್ ಅಲಿ ಅಘಾ ನೇತೃತ್ವದಲ್ಲಿ, ಬಾಬರ್ ಅಜಮ್ ಅವರನ್ನು 2026ರ ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟಿಂಗ್ ಸ್ಥಾನದಿಂದ 4ನೇ ಸ್ಥಾನಕ್ಕೆ ಇಳಿಸಲಾಗಿದೆ. ಅವರ ಗುಂಪು ಹಂತದ ಪ್ರದರ್ಶನ ನಿರಾಶಾದಾಯಕವಾಗಿತ್ತು. ನೆದರ್ಲ್ಯಾಂಡ್ ಮತ್ತು ಭಾರತ ವಿರುದ್ಧ ವಿಫಲವಾಗಿದ್ದರೂ ಅಮೆರಿಕ ವಿರುದ್ಧ ಆಡಿ ಕಷ್ಟದ ಸಮಯದಲ್ಲಿ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದ ಬಾಬರ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ ಎಂದು ಕೋಚ್ ಹೆಸ್ಸನ್ ವಾದಿಸಿದರು.

ತಂಡ ಸಂಕಷ್ಟದಲ್ಲಿದ್ದಾಗ ಮಧ್ಯಮ ಓವರ್‌ಗಳಲ್ಲಿ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಲು ಬಾಬರ್ ಅಜಮ್ ಸೂಕ್ತ ಆಟಗಾರ. ಆದರೆ ಬಾಬರ್ ಪವರ್ ಹಿಟ್ಟರ್ ಅಲ್ಲ ಎಂಬುದು ಸತ್ಯ. ಪಂದ್ಯದ 12ನೇ ಓವರ್ ನಂತರ ಬಾಬರ್ ಅಜಮ್ ಕ್ರೀಸ್‌ಗೆ ಬರುವುದು ತಂಡಕ್ಕೆ ಅಷ್ಟೊಂದು ಲಾಭದಾಯಕವಲ್ಲ. ಆ ಸಮಯದಲ್ಲಿ ಅವರಿಗಿಂತ ವೇಗವಾಗಿ ರನ್ ಗಳಿಸುವ ಪವರ್ ಹಿಟ್ಟರ್‌ಗಳು ತಂಡಕ್ಕೆ ಅಗತ್ಯ ಎಂದು ಹೆಸ್ಸನ್ ಹೇಳಿದರು.

ಆದಾಗ್ಯೂ, ಪತ್ರಿಕಾಗೋಷ್ಠಿಯಲ್ಲೇ ಕೋಚ್‌ ಇಂತಹ ಹೇಳಿಕೆ ನೀಡಿರುವುದು ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬನೆಂದು ಪರಿಗಣಿಸಲಾದ ಬಾಬರ್ ಅಜಮ್ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯಗಳಲ್ಲಿ ಬಾಬಾರ್ ಅಜಮ್ ನೆದರ್ಲ್ಯಾಂಡ್ಸ್ ವಿರುದ್ಧ 18 ಎಸೆತಗಳಲ್ಲಿ 15 ಮತ್ತು ಭಾರತ ವಿರುದ್ಧ 7 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸರ್ವಾಧಿಕಾರಿ ಖಮೇನಿ ವಿರುದ್ಧ ಮತ್ತೆ ಭುಗಿಲೆದ್ದ ಪ್ರತಿಭಟನೆ: ಇರಾನ್ ಬೀದಿಗಿಳಿದ ವಿದ್ಯಾರ್ಥಿಗಳು, ಟ್ರಂಪ್ ದಾಳಿಗೆ ಮುಹೂರ್ತ ಫಿಕ್ಸ್?

'ಕೆಂಗಲ್ ಹನುಮಂತಯ್ಯ ಸೇರಿ SM ಕೃಷ್ಣವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ': ಸಿದ್ದರಾಮಯ್ಯ

ಭಾರತದಲ್ಲಿ ದಾಳಿಗೆ ಸಂಚು: ಪಾಕ್‌ನ ISI ಬಾಂಗ್ಲಾದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಬಂಧನ

Jubilee Hills: ತೆಲುಗು ನಟ ಬಾಲಕೃಷ್ಣ ಮನೆ ಮುಂದೆ ಭೀಕರ ಅಪಘಾತ; ವೇಗವಾಗಿ ಬಂದ ಫೆರಾರಿ ಕಾರು ಹಲವು ವಾಹನಗಳಿಗೆ ಢಿಕ್ಕಿ!

ಗುಜರಾತ್ ಕರಾವಳಿಯಲ್ಲಿ 5 ಕೋಟಿ ರೂಪಾಯಿ ಮೌಲ್ಯದ ಸಿಗರೇಟ್ ಹೊಂದಿದ್ದ ಇರಾನ್ ಸಿಬ್ಬಂದಿ ಬಂಧನ

SCROLL FOR NEXT