ಅರ್ಶ್‌ದೀಪ್ ಸಿಂಗ್‌ 
ಕ್ರಿಕೆಟ್

T20 World Cup 2026: ದಕ್ಷಿಣ ಆಫ್ರಿಕಾಕ್ಕೆ ಅರ್ಶದೀಪ್ ಸಿಂಗ್ ಧನ್ಯವಾದ; ತಂದೆಯ 'ಶಾಪ'ದ ಕಥೆ ಹಂಚಿಕೊಂಡ ಸ್ಟಾರ್ ಬೌಲರ್!

ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳ ನೆರವಿನಿಂದ ಭಾರತವು ಜಿಂಬಾಬ್ವೆ ವಿರುದ್ಧ 4 ವಿಕೆಟ್ ನಷ್ಟಕ್ಕೆ 258 ರನ್ ಕಲೆಹಾಕಿತು. ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಪಡೆದು ಜಿಂಬಾಬ್ವೆಯನ್ನು ಹಿಮ್ಮೆಟ್ಟಿಸಿದರು.

ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಕಹಿಯನ್ನು ಮರೆತು, ಪಂದ್ಯಾವಳಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ತನ್ನ ಕನಸನ್ನು ಜೀವಂತವಾಗಿಟ್ಟಿದೆ. ಇದೀಗ ಸೆಮಿಫೈನಲ್‌ನಲ್ಲಿ ಅರ್ಹತೆ ಪಡೆಯಲು ಭಾರತ ಮುಂಬರುವ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತಂಡ ಮೈದಾನಕ್ಕೆ ಇಳಿಯುವ ಮೊದಲೇ ಎಲ್ಲರ ಚಿತ್ತ ಅಹಮದಾಬಾದ್‌ನತ್ತ ನೆಟ್ಟಿದ್ದವು. ಅಲ್ಲಿ ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ ನಡುವಿನ ಮತ್ತೊಂದು ಸೂಪರ್ 8 ಫಲಿತಾಂಶಕ್ಕಾಗಿ ಹಲವರು ಮುಖ್ಯವಾಗಿ ಭಾರತದ ಅಭಿಮಾನಿಗಳು ಕಾಯುತ್ತಿದ್ದರು. ಹೋಟೆಲ್ ಕೋಣೆಯಿಂದಲೇ ಆತಂಕದಿಂದ ವೀಕ್ಷಿಸುತ್ತಿದ್ದವರಲ್ಲಿ ಅರ್ಶದೀಪ್ ಸಿಂಗ್ ಮತ್ತು ಅವರ ತಂದೆ ದರ್ಶನ್ ಕೂಡ ಸೇರಿದ್ದರು.

ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಅರ್ಶದೀಪ್ ಸಿಂಗ್ ತಂದೆಯ ಶಾಪ

ಭಾರತದ ಭರ್ಜರಿ ಗೆಲುವಿನ ನಂತರ ಮಾತನಾಡಿದ ಅರ್ಶದೀಪ್, 'ನಾವು ಇಡೀ ಪಂದ್ಯವನ್ನು ವೀಕ್ಷಿಸಲಿಲ್ಲ. ಆದರೆ, ಅದು ಖಂಡಿತವಾಗಿಯೂ ನಾವು ನೋಡಲೇಬೇಕಾಗಿದ್ದ ಸಂಗತಿಯಾಗಿತ್ತು. ನನ್ನ ಕುಟುಂಬವು ಹೋಟೆಲ್ ಕೋಣೆಯಲ್ಲಿ ನನ್ನೊಂದಿಗೆ ಇತ್ತು ಮತ್ತು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಬಾರಿಸಿದಾಗಲೆಲ್ಲ, ನನ್ನ ತಂದೆ 'ಭೂಮಿ ಮೇಲೆ ನೀವು ಏನು ಮಾಡುತ್ತಿದ್ದೀರಿ?' ಎಂದು ಕೂಗಲು ಪ್ರಾರಂಭಿಸಿದರು. ಅವರು ಅವರನ್ನು ಶಪಿಸುತ್ತಿದ್ದರು. ನಾನು ಅವರನ್ನು ಸಮಾಧಾನಪಡಿಸಿ, ಹೆಚ್ಚು ಭಾವುಕರಾಗಬೇಡಿ ಎಂದು ಹೇಳಬೇಕಾಯಿತು. ನಾನು ಅವರಿಗೆ ಕ್ರಿಕೆಟ್ ಅನ್ನು ಆನಂದಿಸಿ ಮತ್ತು ದಕ್ಷಿಣ ಆಫ್ರಿಕಾದ ಗೆಲುವಿಗಾಗಿ ಪ್ರಾರ್ಥಿಸುತ್ತಾ ಇರಿ ಎಂದು ಹೇಳಿದೆ' ಎಂದರು.

ಮುಂಬೈನಲ್ಲಿ ಜಿಂಬಾಬ್ವೆ ವಿರುದ್ಧ 254 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 63/5 ಮತ್ತು ನಂತರ 83/7 ಕ್ಕೆ ಕುಸಿಯಿತು. ನಂತರ ಜೇಸನ್ ಹೋಲ್ಡರ್ ಮತ್ತು ರೊಮಾರಿಯೊ ಶೆಫರ್ಡ್ ನಡುವಿನ 89 ರನ್‌ಗಳ ಜೊತೆಯಾಟವು ತಂಡವನ್ನು 176/8ಕ್ಕೆ ಏರಿಸಿತು.

ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಐಡೆನ್ ಮಾರ್ಕ್ರಾಮ್ ಅವರ 46 ಎಸೆತಗಳಲ್ಲಿ 82 ರನ್, ಕ್ವಿಂಟನ್ ಡಿ ಕಾಕ್ ಅವರ 24 ಎಸೆತಗಳಲ್ಲಿ 47 ರನ್ ಮತ್ತು ರಯಾನ್ ರಿಕಲ್ಟನ್ ಅವರ 45 ರನ್ ನೆರವಿನಿಂದ 16.1 ಓವರ್‌ಗಳಲ್ಲಿಯೇ ಗುರಿ ಮುಟ್ಟಿತು. ಈ ಗೆಲುವಿನ ಮೂಲಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಅರ್ಶ್‌ದೀಪ್ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಮಾಡಿದ ಉಪಕಾರವನ್ನು ಒಪ್ಪಿಕೊಂಡರು ಮತ್ತು ಪ್ರೋಟಿಯಸ್‌ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಧನ್ಯವಾದ ಹೇಳಿದರು.

'ದಕ್ಷಿಣ ಆಫ್ರಿಕಾ ಅದ್ಭುತವಾಗಿ ಆಡಿತು. ನಾವು ಕೃತಜ್ಞರಾಗಿರುತ್ತೇವೆ; ಅವರು ನಮ್ಮ ಭವಿಷ್ಯವನ್ನು ನಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಅವಕಾಶವನ್ನು ನಮಗೆ ನೀಡಿದ್ದಾರೆ. ವೀಕ್ಷಿಸಲು ಇದು ತುಂಬಾ ಖುಷಿಯಾಗಿತ್ತು - ಸರಿಯಾದ ಕ್ರಿಕೆಟ್ ಆಗಿತ್ತು. ಆದಾಗ್ಯೂ, ನಾವು ಫೈನಲ್‌ನಲ್ಲಿ ಭೇಟಿಯಾದರೆ ನಾವು ಖಂಡಿತವಾಗಿಯೂ ಅವರನ್ನು ಸೋಲಿಸಲು ಪ್ರಯತ್ನಿಸುತ್ತೇವೆ!' ಎಂದರು.

ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳ ನೆರವಿನಿಂದ ಭಾರತವು ಜಿಂಬಾಬ್ವೆ ವಿರುದ್ಧ 4 ವಿಕೆಟ್ ನಷ್ಟಕ್ಕೆ 258 ರನ್ ಕಲೆಹಾಕಿತು. ಬ್ರಿಯಾನ್ ಬೆನೆಟ್ ಅವರ ಅಜೇಯ 97 ರನ್‌ಗಳ ಹೊರತಾಗಿಯೂ ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಪಡೆದು ಜಿಂಬಾಬ್ವೆಯನ್ನು ಹಿಮ್ಮೆಟ್ಟಿಸಿದರು. ಅಂತಿಮವಾಗಿ ಭಾರತವು 72 ರನ್‌ ಅಂತರದ ಗೆಲುವು ಸಾಧಿಸಿತು.

ಭಾನುವಾರ ಈಡನ್ ಗಾರ್ಡನ್ಸ್‌ನಲ್ಲಿ ಭಾರತ vs ವೆಸ್ಟ್ ಇಂಡೀಸ್ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆಲ್ಲುವ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ವಿಂಡೀಸ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇದುವರೆಗೆ ಒಂದೇ ಒಂದು ಟಿ20ಐ ಅನ್ನು ಸೋತಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್

ಅರ್ಶದೀಪ್ ಸಿಂಗ್ - 35

ಜಸ್ಪ್ರೀತ್ ಬುಮ್ರಾ - 33

ರವಿ ಅಶ್ವಿನ್ - 32

ಹಾರ್ದಿಕ್ ಪಾಂಡ್ಯ - 29

ರವೀಂದ್ರ ಜಡೇಜಾ - 22

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು ಆದೇಶಕ್ಕೆ ಸುಪ್ರೀಂ ತಡೆ!

ಬೆಂಗಳೂರಿನಲ್ಲಿ ಸುಡು ಬಿಸಿಲು: 30 ಡಿಗ್ರಿ ಸೆ.ಗಿಂತ ಹೆಚ್ಚಿನ ಉಷ್ಣಾಂಶ ದಾಖಲು! ಆರೋಗ್ಯ ತಜ್ಞರು ಏನಂತಾರೆ?

'ನಾನು ಭ್ರಷ್ಟನಲ್ಲ': ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಅರವಿಂದ್ ಕೇಜ್ರಿವಾಲ್-Video

Delhi excise policy case: ಅರವಿಂದ್ ಕೇಜ್ರಿವಾಲ್-ಮನೀಶ್ ಸಿಸೋಡಿಯಾ ವಿರುದ್ಧ ಕೇಸು ಖುಲಾಸೆ-Video

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಿಗ್ ರಿಲೀಫ್: ಶಾಸಕ ವಿನಯ್‌ ಕುಲಕರ್ಣಿಗೆ 'ಸುಪ್ರೀಂ' ಜಾಮೀನು!

SCROLL FOR NEXT