ಇಂಗ್ಲೆಂಡ್ ಸರಣಿಯು ಯೋಜಿಸಿದಂತೆ ನಡೆಯದೇ ಇರಬಹುದು, ಆದರೆ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ T20I ಸರಣಿಯಲ್ಲಿ ವೈಭವ್ ಸೂರ್ಯವಂಶಿ ನಿಜವಾಗಿಯೂ ತಮ್ಮ ಸಾಮರ್ಥ್ಯ ಏನೆಂಬುದನ್ನು ಪ್ರದರ್ಶಿಸಿದ್ದಾರೆ. 15 ವರ್ಷದ ಸೂರ್ಯವಂಶಿ ಮೂರು ಪಂದ್ಯಗಳಲ್ಲಿ 50.33 ಸರಾಸರಿ ಮತ್ತು 196.10 ಸ್ಟ್ರೈಕ್-ರೇಟ್ನೊಂದಿಗೆ 151 ರನ್ ಗಳಿಸುವ ಮೂಲಕ ಸರಣಿಯನ್ನು ಅಗ್ರ ರನ್-ಗೆಟರ್ ಆಗಿ ಮುಗಿಸಿದ್ದಾರೆ. ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ವೈಭವ್ ಸೂರ್ಯವಂಶಿಗಾಗಿ ತಂಡದಿಂದ ಹೊರಗುಳಿದಿರುವ ಆಟಗಾರ ಮತ್ತೆ ತಂಡಕ್ಕೆ ಮರಳುವ ಸೂಚನೆ ಇಲ್ಲ ಎಂದಿದ್ದಾರೆ.
ಜಿಂಬಾಬ್ವೆಯಲ್ಲಿನ ಸ್ಫೋಟಕ ಆದರೆ ಪ್ರಬುದ್ಧ ಪ್ರದರ್ಶನಕ್ಕಾಗಿ ಯುವ ಬ್ಯಾಟಿಂಗ್ ಸೆನ್ಸೇಷನ್ ಆದ ಆರಂಭಿಕ ಆಟಗಾರನನ್ನು ಶ್ಲಾಘಿಸಿದ ಇರ್ಫಾನ್, ಸೂರ್ಯವಂಶಿ ಭಾರತದ T20I ತಂಡದಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿರಬಹುದು. ಬ್ಯಾಟಿಂಗ್ನಲ್ಲಿ ಅವರ ಪ್ರತಿಭೆಯು ಅವರ ಸ್ಥಾನವನ್ನು ಭದ್ರಪಡಿಸಿದೆ. ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ - ಮತ್ತೆ ತಂಡಕ್ಕೆ ಮರಳುವುದನ್ನು ಇನ್ನಷ್ಟು ಕಷ್ಟಕರವಾಗಿಸಿದೆ ಎಂದು ಹೇಳಿದರು.
'ಜಿಸ್ಕಿ ಭಿ ಜಗಹ್ ಲೆಗಾ ಯೇ ಬಚ್ಚಾ ಉಸ್ ವಾಪಿಸ್ ನಹೀ ಆನೆ ದೇಗಾ... (ಈ ಮಗು ಯಾರದ್ದಾದರೂ ಸ್ಥಾನದಲ್ಲಿ ಆಡಿದರೆ, ಆ ಆಟಗಾರ ಮತ್ತೆ ತಂಡಕ್ಕೆ ಹಿಂತಿರುಗಲು ಅವಕಾಶ ನೀಡುವುದಿಲ್ಲ) ಈ ವೈಭವ್ ಸೂರ್ಯವಂಶಿ ಎಷ್ಟು ವಿಶೇಷ??' ಎಂದು ಇರ್ಫಾನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಿಂಬಾಬ್ವೆ ವಿರುದ್ಧ ಭಾನುವಾರ ನಡೆದ 3ನೇ ಟಿ20ಐ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಕೋಚ್ ವಿವಿಎಸ್ ಲಕ್ಷ್ಮಣ್, ಸೂರ್ಯವಂಶಿ ಇನ್ನೂ ಟೀನೇಜರ್ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದಾರೆ. ಏಕೆಂದರೆ ಅವರಿಗೆ ಕೇವಲ 15 ವರ್ಷ. ಆದರೆ, ಅವರ ಪ್ರಬುದ್ಧತೆ ಅದ್ಭುತ ಎಂದಿದ್ದಾರೆ.
'ಒಬ್ಬ ವ್ಯಕ್ತಿಯಾಗಿ ಅವರು ವಿಕಸನಗೊಂಡ ರೀತಿ ನಿಜಕ್ಕೂ ಪ್ರಭಾವಶಾಲಿಯಾಗಿದೆ. ಕಳೆದ ಆರು ತಿಂಗಳುಗಳಲ್ಲಿ ಅವರ ಪ್ರಬುದ್ಧತೆಯ ಮಟ್ಟ, ತಿಳಿವಳಿಕೆ ಮತ್ತು ಅರಿವು ನಿಜವಾಗಿಯೂ ಗಗನಕ್ಕೇರಿದೆ. ಅದಕ್ಕಾಗಿಯೇ ಅವರು ಕಠಿಣ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಾಯಿತು. ಅವರು ಅಂಡರ್-19 ವಿಶ್ವಕಪ್ ಆಡಿದರು ಮತ್ತು ನಾಲ್ಕರಿಂದ ಐದು ತಿಂಗಳುಗಳಲ್ಲಿ ಅವರು ಐಪಿಎಲ್ನಲ್ಲಿ ಪ್ರಾಬಲ್ಯ ಸಾಧಿಸಿದರು. ಐಪಿಎಲ್ ಸ್ಪರ್ಧೆ ಎಷ್ಟು ಕಠಿಣವಾಗಿರುತ್ತದೆ ಎಂದು ನಮಗೆ ತಿಳಿದಿದೆ' ಎಂದು ಲಕ್ಷ್ಮಣ್ ಪಂದ್ಯದ ನಂತರ ಹೇಳಿದರು.
'ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅತ್ಯುತ್ತಮ ಬೌಲರ್ಗಳನ್ನು, ಅವರು ವಿಕಸನಗೊಂಡ ರೀತಿ, ಅಂತರರಾಷ್ಟ್ರೀಯ ಕ್ರಿಕೆಟಿಗರಾಗಿ ಅವರು ಮುಂದುವರೆದ ರೀತಿ ಮತ್ತು ಅವರು ಯಾವ ರೀತಿಯ ಸಾಮರ್ಥ್ಯ, ಕ್ಲಾಸ್ ಮತ್ತು ಪ್ರತಿಭೆಯನ್ನು ಹೊಂದಿದ್ದಾರೆ ಎಂಬುದನ್ನು ತೋರಿಸಿದರು' ಎಂದು ಸರಣಿಗೆ ಭಾರತದ ಮುಖ್ಯ ತರಬೇತುದಾರರಾಗಿ ಗೌತಮ್ ಗಂಭೀರ್ ಅವರ ಸ್ಥಾನವನ್ನು ತುಂಬಿದ ಲಕ್ಷ್ಮಣ್ ಹೇಳಿದರು.