ರಜತ್ ಪಾಟೀದಾರ್ 
ಕ್ರಿಕೆಟ್

RCB ತಂಡವನ್ನು ಮುನ್ನಡೆಸುವುದು ಸುಲಭವಲ್ಲ; ಭಾರತದ T20I ನಾಯಕತ್ವಕ್ಕೆ ರಜತ್ ಪಾಟೀದಾರ್ ಸೂಕ್ತ: ಮಾಜಿ ಕ್ರಿಕೆಟಿಗ ಸಬಾ ಕರೀಮ್

'ವಿಶ್ವಕಪ್‌ನಲ್ಲೂ ಸೂರ್ಯಕುಮಾರ್ ಅವರ ಫಾರ್ಮ್ ಕುಸಿದಿತ್ತು ಮತ್ತು ಅದು ಐಪಿಎಲ್‌ನಲ್ಲೂ ಮುಂದುವರೆದಿದೆ. ಆಯ್ಕೆದಾರರು (ಈಗ) ಮುಂದೆ ನೋಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

ನವದೆಹಲಿ: ಆಯ್ಕೆದಾರರು ಈಗ 2028ರ ಟಿ20 ವಿಶ್ವಕಪ್ ಮೇಲೆ ಕೇಂದ್ರೀಕರಿಸಲಿದ್ದು, ಸೂರ್ಯಕುಮಾರ್ ಯಾದವ್ ಅವರ ದೀರ್ಘಕಾಲದ ಕಳಪೆ ಫಾರ್ಮ್ ಅವರು ತಂಡದಲ್ಲಿ ಸ್ಥಾನ ಪಡೆಯಲು ಅರ್ಹವಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಗುರುವಾರ ಹೇಳಿದ್ದಾರೆ.

35 ವರ್ಷದ ಸೂರ್ಯಕುಮಾರ್ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಅರ್ಧಶತಕಗಳನ್ನು ಬಾರಿಸಿದರು ಮತ್ತು ಯುಎಸ್ಎ ವಿರುದ್ಧದ ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಶತಕ ಗಳಿಸಿದರು. ಆದರೆ, ಬ್ಯಾಟಿಂಗ್‌ನಲ್ಲಿ ತಮ್ಮ ಫಾರ್ಮ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಭಾರತದ ಹಾಲಿ ಟಿ20 ನಾಯಕ ಐಪಿಎಲ್‌ನಲ್ಲೂ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆಡಿರುವವ 13 ಪಂದ್ಯಗಳಲ್ಲಿ 147.54ರ ಸ್ಟ್ರೈಕ್ ರೇಟ್ ಮತ್ತು ಎರಡು ಅರ್ಧಶತಕಗಳೊಂದಿಗೆ ಕೇವಲ 270 ರನ್ ಗಳಿಸಿದ್ದಾರೆ.

'ಸದ್ಯದ ಫಾರ್ಮ್‌ನಲ್ಲಿ, ಆಯ್ಕೆ ಸಮಿತಿಯ ದೃಷ್ಟಿಕೋನದಲ್ಲಿ ಈ ತಂಡವನ್ನು ಮುಂದೆ ಕೊಂಡೊಯ್ಯುವ ಪಟ್ಟಿಯಲ್ಲಿ ಸೂರ್ಯಕುಮಾರ್ ಇಲ್ಲದಿರಬಹುದು. ನಾವು ಹಿಂದೆಯೂ ಅದನ್ನು ನೋಡಿದ್ದೇವೆ; ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಕೈಬಿಟ್ಟು ಹೊಸ ಆಟಗಾರರನ್ನು ಆಯ್ಕೆ ಮಾಡಿತು. ಆದ್ದರಿಂದ, 2028ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಇದೇ ರೀತಿ ಸಂಭವಿಸಬಹುದು' ಎಂದು ಕರೀಮ್ ಸುದ್ದಿಸಂಸ್ಥೆ ಪಿಟಿಐ ಜೊತೆಗಿನ ವಿಶೇಷ ಸಂವಾದದಲ್ಲಿ ಹೇಳಿದರು.

'ವಿಶ್ವಕಪ್‌ನಲ್ಲೂ ಸೂರ್ಯಕುಮಾರ್ ಅವರ ಫಾರ್ಮ್ ಕುಸಿದಿತ್ತು ಮತ್ತು ಅದು ಐಪಿಎಲ್‌ನಲ್ಲೂ ಮುಂದುವರೆದಿದೆ. ಆಯ್ಕೆದಾರರು (ಈಗ) ಮುಂದೆ ನೋಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡನೇ ಬಾರಿಗೆ ಪ್ರಶಸ್ತಿಗೆ ಮುನ್ನಡೆಸಿದ ನಾಯಕ ರಜತ್ ಪಾಟೀದಾರ್ ಭಾರತವನ್ನು ಮುನ್ನಡೆಸುವ ಅಭ್ಯರ್ಥಿಗಳಲ್ಲಿ ಒಬ್ಬರು ಎಂದು ಕರೀಮ್ ಹೇಳಿದರು. 33 ವರ್ಷದ ಪಾಟೀದಾರ್ ಇನ್ನೂ ಭಾರತದ ಪರ ಟಿ20ಐಗೆ ಪದಾರ್ಪಣೆ ಮಾಡಿಲ್ಲ.

'ನಾಯಕತ್ವದ ಸ್ಪರ್ಧಿಯಾಗಿ ರಜತ್ ಪಾಟೀದಾರ್ ಅವರ ಹೆಸರನ್ನು ನಾನು ಸೇರಿಸಲು ಬಯಸುತ್ತೇನೆ. ಸತತ ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲುವುದು ತುಂಬಾ ಕಠಿಣ ಕೆಲಸ ಮತ್ತು ಅವರು ಅದನ್ನು ತುಂಬಾ ಶಾಂತ ಮತ್ತು ಅತ್ಯಂತ ಆತ್ಮವಿಶ್ವಾಸದ ರೀತಿಯಲ್ಲಿ ಮಾಡಿದ್ದಾರೆ. ತಂಡದೊಳಗೆ ಸ್ಟಾರ್ ಆಟಗಾರರು ಮತ್ತು ವಿದೇಶಿ ಆಟಗಾರರು ಇದ್ದರೂ ಅತ್ಯಂತ ಸಮರ್ಥವಾಗಿ ತಂಡವನ್ನು ಮುನ್ನಡೆಸಿದ್ದಾರೆ' ಎಂದರು.

ಹಲವಾರು ದಂತಕಥೆಗಳು ಮತ್ತು ಅನುಭವದ ಮಿಶ್ರಣವನ್ನು ಹೊಂದಿರುವ ತಂಡವನ್ನು ಮುನ್ನಡೆಸುವುದು ತುಂಬಾ ಕಷ್ಟಕರವಾದ ಕೆಲಸ ಮತ್ತು ಅವರು ಅದನ್ನು ಸಾಧಿಸಿದ್ದಾರೆ. ಆದಾಗ್ಯೂ, ಶ್ರೇಯಸ್ ಅಯ್ಯರ್ ಕೂಡ ಆ ಅಭ್ಯರ್ಥಿಗಳಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ನನಗೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕೂಡ ಇದ್ದಾರೆ. ನಾಯಕತ್ವ ವಹಿಸಿಕೊಳ್ಳಲು ಇಬ್ಬರು ಅಥವಾ ಮೂವರು ಪ್ರಬಲ ಸ್ಪರ್ಧಿಗಳು ಇರುತ್ತಾರೆ. ಆದರೆ, ಆಯ್ಕೆದಾರರು ಪರಿಗಣಿಸುವ ಅಭ್ಯರ್ಥಿಗಳಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಇರುತ್ತಾರೆ ಎಂದು ನಾನು ಭಾವಿಸುವುದಿಲ್ಲ' ಎಂದು ಅವರು ಹೇಳಿದರು.

'ಆಯ್ಕೆದಾರರು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಕೌಶಲ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದರೂ, ಅವರ ನಾಯಕತ್ವದ ಶೈಲಿಯ ಬಗ್ಗೆ ಕೆಲವು ಪ್ರಶ್ನೆಗಳು ಎದ್ದಿದ್ದವು. ಸದ್ಯದ ಫಾರ್ಮ್‌ನಲ್ಲೂ ಸಹ, ಅವರು ಭಾರತೀಯ ತಂಡದ ನಾಯಕನಾಗಿ ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾತೆಗಾಗಿ ಫೈಟ್: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಾಮಲಿಂಗಾರೆಡ್ಡಿ!

ಮುಸ್ಲಿಂ ಸಮುದಾಯಕ್ಕೆ 5 ಸಚಿವ ಸ್ಥಾನ ಕೊಡಿ, ಇಲ್ಲವೆ ಪರಿಣಾಮ ನೆಟ್ಟಗಿರಲ್ಲ: ಕಾಂಗ್ರೆಸ್‌ಗೆ ಮೌಲ್ವಿಗಳ ನೇರ ಎಚ್ಚರಿಕೆ

ಜಾತಿ, ಧರ್ಮ ಯಾವುದೇ ಪ್ರಭಾವಕ್ಕೂ ಮಣಿಯಬೇಡಿ: ಪಾರದರ್ಶಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಡಿಕೆಶಿ ಸೂಚನೆ​​

RCB ವಿಕ್ಟರಿ ಸೆಲೆಬ್ರೇಷನ್ ವಿಡಿಯೋ, ಬ್ಯಾಗ್ರೌಂಡ್ ನಲ್ಲಿ ಬೆ** ರೂಂ ಸೌಂಡ್?; ನಟಿ Nushrratt Bharuccha ಹೇಳಿದ್ದೇನು?

ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ?: ನಿರ್ಗಮನಕ್ಕೂ ಮುನ್ನ ಉನ್ನತ ಹುದ್ದೆ ಅಲಂಕರಿಸಿ ವಿರೋಧಿಗಳಿಗೆ ಸೆಡ್ಡು ಹೊಡೆದ 'ರಾಜನೀತಿಜ್ಞ' ಸಿದ್ದರಾಮಯ್ಯ!

SCROLL FOR NEXT