ಕೆಎಲ್ ರಾಹುಲ್ 
ಕ್ರಿಕೆಟ್

ಮಹಾರಾಜ ಟ್ರೋಫಿ 2026 ಹರಾಜು; ₹2 ಲಕ್ಷ ಮೂಲ ಬೆಲೆ ಹೊಂದಿದ್ದರೂ ಅನ್‌ಸೋಲ್ಡ್ ಆದ ಕೆಎಲ್ ರಾಹುಲ್!

ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 593 ರನ್ ಗಳಿಸಿದ ಕನ್ನಡಿಗ ರಾಹುಲ್ ಅವರನ್ನು ಖರೀದಿಸಲು ಮಹಾರಾಜ ಟ್ರೋಫಿ 2026ರ ಹರಾಜಿನಲ್ಲಿ ಯಾವುದೇ ತಂಡ ಆಸಕ್ತಿ ತೋರಿಸಿಲ್ಲ.

ಜೂನ್ 6 ರಂದು ನ್ಯೂ ಚಂಡೀಗಢದಲ್ಲಿ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಉಪನಾಯಕರಾಗಿರುವ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್, ಶುಕ್ರವಾರ (ಜೂನ್ 5) ನಡೆಯುತ್ತಿರುವ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 2026ರ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 593 ರನ್ ಗಳಿಸಿದ ಕನ್ನಡಿಗ ರಾಹುಲ್ ಅವರನ್ನು ಖರೀದಿಸಲು ಮಹಾರಾಜ ಟ್ರೋಫಿ 2026ರ ಹರಾಜಿನಲ್ಲಿ ಯಾವುದೇ ತಂಡ ಆಸಕ್ತಿ ತೋರಿಸಿಲ್ಲ. ಪಂದ್ಯಾವಳಿಗೆ ಅವರ ಲಭ್ಯತೆಯನ್ನು ದೃಢೀಕರಿಸದ ಕಾರಣ, ಯಾವುದೇ ತಂಡಗಳು ಅವರನ್ನು ಖರೀದಿಸಿಲ್ಲ ಎನ್ನಲಾಗಿದೆ.

ಕೆಎಲ್ ರಾಹುಲ್ ₹2 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಸೇರಿದಂತೆ ಮಯಾಂಕ್ ಅಗರ್ವಾಲ್, ವೈಶಾಕ್ ವಿಜಯ್‌ಕುಮಾರ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ಮಹಾರಾಜ ಟ್ರೋಫಿ ಲೀಗ್‌ನಲ್ಲಿ ಆಡುವ ಕರ್ನಾಟಕದ ಕೆಲವು ಪ್ರಮುಖ ಭಾರತೀಯ ಆಟಗಾರರಾಗಿದ್ದಾರೆ.

2026ರ ಮಹಾರಾಜ ಟ್ರೋಫಿ ಆವೃತ್ತಿಯ ಪಂದ್ಯಗಳು ಜೂನ್ 20 ರಿಂದ ಜುಲೈ 12ರವರೆಗೆ ನಡೆಯಲಿವೆ. ಇದೇ ಅವಧಿಯಲ್ಲಿ, ಭಾರತೀಯ ಪುರುಷರ ಕ್ರಿಕೆಟ್ ತಂಡವು ಐರ್ಲೆಂಡ್‌ನಲ್ಲಿ ಎರಡು T20I (ಜೂನ್ 26 ಮತ್ತು 28) ಮತ್ತು ಇಂಗ್ಲೆಂಡ್‌ನಲ್ಲಿ ಐದು T20I ಪಂದ್ಯಗಳನ್ನು (ಜುಲೈ 1, 4, 7, 9 ಮತ್ತು 11) ಆಡಲಿದೆ.

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಭಾಗವಹಿಸುತ್ತಿದ್ದು, ಪಂದ್ಯಾವಳಿಯ ಆರಂಭದಲ್ಲಿ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗಿಲ್ಲ.

ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ನಿಯೋಜಿತ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಜೂನ್ 13 ರಂದು ಧರ್ಮಶಾಲಾದಲ್ಲಿ ಆರಂಭವಾಗುತ್ತದೆ. ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದಲ್ಲಿ ಮತ್ತು ಮೂರನೇ ಪಂದ್ಯ ಜೂನ್ 20 ರಂದು ಚೆನ್ನೈನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ ಕೆ ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ-Video

ಅಣ್ಣಾಮಲೈ ರಾಜೀನಾಮೆ ಕೊನೆಗೂ ಅಂಗೀಕಾರ: 6 ವರ್ಷಗಳ ಬಿಜೆಪಿ ಸಂಬಂಧಕ್ಕೆ ತಿಲಾಂಜಲಿ!

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯೂ Repo ದರ ಯಥಾಸ್ಥಿತಿ: ಶೇ.5.25ದಲ್ಲೇ ಮುಂದುವರಿಸಿದ RBI, ಸಾಲಗಾರರಿಗೆ ಬಿಗ್ ರಿಲೀಫ್..!

ಮೋದಿ ಮೇಲೆ ಒತ್ತಡ ಹೇರುವುದು ವ್ಯರ್ಥ, ಭಾರತ-ರಷ್ಯಾ ಸಂಬಂಧ ದುರ್ಬಲಗೊಳಿಸುವ ಪಾಶ್ಚಾತ್ಯ ರಾಷ್ಟ್ರಗಳ ತಂತ್ರ ಫಲಿಸುವುದಿಲ್ಲ: ಪುಟಿನ್

ವರ್ಷಗಳ ಕಾಲ ಅಮೆರಿಕಾವನ್ನು ದುರುಪಯೋಗಪಡಿಸಿಕೊಂಡಿದ್ದಾರೆ: ಭಾರತ ವಿರುದ್ಧ ಮತ್ತೆ ಟ್ರಂಪ್ ಕಿಡಿ

SCROLL FOR NEXT