ನಿತೀಶ್ ಕುಮಾರ್ ರೆಡ್ಡಿ 
ಕ್ರಿಕೆಟ್

India vs Afghanistan: ಪತ್ರಿಕಾಗೋಷ್ಠಿ ಮಧ್ಯೆಯೇ ತಾಯಿಯ ಕರೆ ಸ್ವೀಕರಿಸಿದ ನಿತೀಶ್ ಕುಮಾರ್ ರೆಡ್ಡಿ; ಈ ಕ್ಷಣದ ವಿಡಿಯೋ ವೈರಲ್

ನಾಲ್ಕು ಓವರ್‌ಗಳನ್ನು ಅಚ್ಚುಕಟ್ಟಾಗಿ ಬೌಲಿಂಗ್ ಮಾಡಿದ ನಿತೀಶ್, 31 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಶತಕವೀರ ರಹಮಾನಲ್ಲಾ ಗುರ್ಬಾಜ್ ಮತ್ತು ಆಲ್‌ರೌಂಡರ್ ಮೊಹಮ್ಮದ್ ನಬಿ ಅವರ ವಿಕೆಟ್‌ಗಳು ಸೇರಿವೆ.

ಭಾರತ-ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಮ್ಮ ತಂಡದ ಗೆಲುವಿನ ನಂತರ ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸುತ್ತಿರುವಾಗಲೇ ತಮ್ಮ ತಾಯಿಯ ಫೋನ್ ಕರೆಗೆ ಪ್ರತಿಕ್ರಿಯಿಸಿದರು. ನಾಯಕ ಶುಭಮನ್ ಗಿಲ್ ಅವರ ಅದ್ಭುತ ಅರ್ಧಶತಕ ಮತ್ತು ಚೊಚ್ಚಲ ಆಟಗಾರರಾದ ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ಅವರ ಮೂರು ವಿಕೆಟ್‌ಗಳ ಗೊಂಚಲು ಭಾರತವು ಶುಕ್ರವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಲು ಸಹಾಯ ಮಾಡಿತು. ಮಳೆಯಿಂದಾಗಿ ಪಂದ್ಯವು ತಲಾ 25 ಓವರ್‌ಗಳು ನಡೆಯಿತು.

ನಾಲ್ಕು ಓವರ್‌ಗಳನ್ನು ಅಚ್ಚುಕಟ್ಟಾಗಿ ಬೌಲಿಂಗ್ ಮಾಡಿದ ನಿತೀಶ್, 31 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಶತಕವೀರ ರಹಮಾನಲ್ಲಾ ಗುರ್ಬಾಜ್ ಮತ್ತು ಆಲ್‌ರೌಂಡರ್ ಮೊಹಮ್ಮದ್ ನಬಿ ಅವರ ವಿಕೆಟ್‌ಗಳು ಸೇರಿವೆ. ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳುತ್ತಿದ್ದ ವೇಳೆ ರೆಡ್ಡಿ ಅವರಿಗೆ ಅವರ ತಾಯಿಯಿಂದ ಕರೆ ಬಂತು. ಆಗ ಅವರು ಕೂಡಲೇ ಕರೆಯನ್ನು ಸ್ವೀಕರಿಸಿದರು ಮತ್ತು ಐದು ನಿಮಿಷಗಳ ನಂತರ ನಾನು ಮಾತನಾಡುತ್ತೇನೆ ಎಂದು ತಮ್ಮ ತಾಯಿಗೆ ತಿಳಿಸಿದರು. ನಂತರ ಮಾಧ್ಯಮ ಪ್ರತಿನಿಧಿಯ ಬಳಿ ಅಡಚಣೆಗಾಗಿ ಕ್ಷಮೆಯಾಚಿಸಿದರು. ಇವರ ನಡೆ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ (SRH) ಜೊತೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆವೃತ್ತಿಯ ನಂತರ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಬಂದರು. ಸನ್‌ರೈಸರ್ಸ್ ಹೈದರಾಬಾದ್ (SRH) ಪರ 13 ಇನಿಂಗ್ಸ್‌ಗಳಲ್ಲಿ 30.20ರ ಸರಾಸರಿ ಮತ್ತು 171.59 ಸ್ಟ್ರೈಕ್ ರೇಟ್‌ನಲ್ಲಿ 302 ರನ್ ಗಳಿಸಿದರು. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಅವರು 40.37 ಸರಾಸರಿಯಲ್ಲಿ ಎಂಟು ವಿಕೆಟ್‌ಗಳನ್ನು ಪಡೆದರು.

ಮಳೆಯಿಂದಾಗಿ ಪಂದ್ಯವನ್ನು ಪ್ರತಿ ತಂಡಕ್ಕೆ 25 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನವನ್ನು ಆರಂಭದಲ್ಲಿಯೇ 26/3ಕ್ಕೆ ಇಳಿಸಿತು. ಗುರ್ಬಾಜ್ ಸ್ಪಿನ್ ವಿರುದ್ಧ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ನಾಯಕ ಹಶ್ಮತುಲ್ಲಾ ಶಾಹಿದಿ (30 ಎಸೆತಗಳಲ್ಲಿ 27, ಮೂರು ಬೌಂಡರಿಗಳೊಂದಿಗೆ) ಅವರೊಂದಿಗೆ 116 ರನ್‌ಗಳ ಜೊತೆಯಾಟವಾಡಿದರು. ಅಫ್ಘಾನಿಸ್ತಾನ 24.5 ಓವರ್‌ಗಳಲ್ಲಿ 194/10 ಕ್ಕೆ ಆಲೌಟ್ ಆಯಿತು.

ಗುರ್ನೂರ್ ಬ್ರಾರ್ (4.5 ಓವರ್‌ಗಳಲ್ಲಿ 3/27) ಮತ್ತು ಹರ್ಷ್ ದುಬೆ (3/47) ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅರ್ಶದೀಪ್ ಸಿಂಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ಎರಡು ವಿಕೆಟ್ ಪಡೆದರು. ಅಂತಿಮವಾಗಿ ಅಫ್ಘಾನಿಸ್ತಾನ 194 ರನ್‌ಗಳಿಗೆ ಆಲೌಟ್ ಆಯಿತು.

195 ರನ್ ಗುರಿ ಬೆನ್ನಟ್ಟಿದ ಭಾರತ ಶುಭಮನ್ ಗಿಲ್ ಅವರ 66 ಎಸೆತಗಳಲ್ಲಿ 84* ಮತ್ತು ಕೆಎಲ್ ರಾಹುಲ್ ಅವರ 19 ಎಸೆತಗಳಲ್ಲಿ 39*, ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಗೆಲುವು ಸಾಧಿಸಿತು. ಭಾರತ 22.5 ಓವರ್‌ಗಳಲ್ಲಿಯೇ ಈ ಮೊತ್ತವನ್ನು ಬೆನ್ನಟ್ಟಿ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಗಿಲ್ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತೀಯ ನಾವಿಕರ ಸಾವು: ‘ವಾಣಿಜ್ಯ ಹಡಗುಗಳ ಮೇಲಿನ ದಾಳಿ ನ್ಯಾಯಸಮ್ಮತವಲ್ಲ’; ಅಮೆರಿಕಾಗೆ ಭಾರತ ಖಡಕ್‌ ಸಂದೇಶ, ರಾಜತಾಂತ್ರಿಕ ಸಂಘರ್ಷ ಉಲ್ಬಣ

ಬೆಂಗಳೂರು ಅಭಿವೃದ್ಧಿ ಖಾತೆ ಹಗ್ಗಜಗ್ಗಾಟ: ಅಧಿಕಾರಗಳ ಬಗ್ಗೆ ಸ್ಪಷ್ಟತೆ ಸಿಕ್ಕ ಬಳಿಕವಷ್ಟೇ ಅಧಿಕಾರ ಸ್ವೀಕಾರ: ಕೃಷ್ಣ ಬೈರೇಗೌಡ

ಯಾವುದೇ ನಾಗರಿಕರು ಮತದಾನದ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಸಚಿವರು, DCಗಳಿಗೆ CM ಡಿಕೆಶಿ ಖಡಕ್ ಸೂಚನೆ

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಯೋಜನೆಗೆ ಭರ್ಜರಿ ಸ್ಪಂದನೆ; 2 ದಿನದಲ್ಲಿ 2,764 ಪಾಸ್ ವಿತರಣೆ

ನಾನು Gay ಅಲ್ಲ, ದಿಶಾ ಪಟಾನಿ ನನ್ನ ಆಪ್ತ ಸ್ನೇಹಿತೆ ಮಾತ್ರ: ಸೋಶಿಯಲ್ ಮೀಡಿಯಾ ಗಾಸಿಪ್‌ಗೆ ನಟಿ ಮೌನಿ ರಾಯ್ ಬ್ರೇಕ್

SCROLL FOR NEXT