2026ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರು ವಿಕೆಟ್ಗಳ ಸೋಲಿನ ನಂತರ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ತಂಡವು ಕ್ಯಾಚ್ಗಳನ್ನು ಕೈಬಿಟ್ಟಿದ್ದೇ ಸೋಲಿಗೆ ಕಾರಣ ಎಂದರು. 158/7 ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳುತ್ತಿದ್ದ ಭಾರತ ತಂಡವು ಮೈದಾನದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತು. 18 ರನ್ ಗಳಿಸಿದ್ದಾಗ ಟಾಜ್ಮಿನ್ ಬ್ರಿಟ್ಸ್ ಅವರ ಕ್ಯಾಚ್ ಕೈಬಿಟ್ಟಿತು ಮತ್ತು ಬದಲಿ ಫೀಲ್ಡರ್ ರಾಧಾ ಯಾದವ್ ಮಾರಿಜಾನ್ ಕಾಪ್ ಅವರು 25 ಮತ್ತು 65 ರನ್ ಗಳಿಸಿದ್ದಾಗ ಎರಡು ಬಾರಿ ಅವರಿಗೆ ಜೀವದಾನ ಸಿಕ್ಕಿತು. ದಕ್ಷಿಣ ಆಫ್ರಿಕಾದ ಜೋಡಿ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿತು. ಕಾಪ್ ಅಜೇಯ 81 ರನ್ಗಳೊಂದಿಗೆ ತಂಡವನ್ನು ಗೆಲುವಿಗೆ ಮುನ್ನಡೆಸಿದರು ಮತ್ತು ಭಾರತಕ್ಕೆ ಪಂದ್ಯಾವಳಿಯಲ್ಲಿ ಮೊದಲ ಸೋಲು ಕಾಣುವಂತೆ ಮಾಡಿದರು.
ಪಂದ್ಯದ ನಂತರ ಮಾತನಾಡಿದ ನಾಯಕಿ ಹರ್ಮನ್ಪ್ರೀತ್ ಕೌರ್, ಭಾರತ ತಂಡವು ಮೈದಾನದಲ್ಲಿ ಸಿಕ್ಕ ಪ್ರಮುಖ ಅವಕಾಶಗಳನ್ನು ಬಳಸಿಕೊಳ್ಳಲು ವಿಫಲವಾದ ಕಾರಣ ಪಂದ್ಯವು ನಮ್ಮಿಂದ ಕೈಜಾರಿತು. ಶ್ರೀ ಚರಣಿ ಮತ್ತು ಶಫಾಲಿ ವರ್ಮಾ ಅವರ ಬೌಲಿಂಗ್ ಪ್ರಯತ್ನ ಅದ್ಭುತವಾಗಿತ್ತು. ಫೀಲ್ಡರ್ಗಳ ಬೆಂಬಲದ ಕೊರತೆಯು ಭಾರತದ ಅವಕಾಶಗಳಿಗೆ ಹಾನಿ ಮಾಡಿದೆ ಎಂದರು.
'ನಮಗೆ ನಡು ನಡುವೆ ಒಂದೆರಡು ಅವಕಾಶಗಳು ಸಿಕ್ಕವು. ಆದರೆ, ಆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಮುಂದೆ ಇನ್ನೆರಡು ಪಂದ್ಯಗಳಿವೆ ಮತ್ತು ಇದು ಸಕಾರಾತ್ಮಕವಾಗಿರಲು ಸಮಯ. ಶ್ರೀ ಚರಣಿ ಮತ್ತು ಶಫಾಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ಫೀಲ್ಡರ್ಗಳು ಅವರನ್ನು ಬೆಂಬಲಿಸಲಿಲ್ಲ. ಈ ಮಟ್ಟದಲ್ಲಿ ನಾವು ಅವಕಾಶಗಳನ್ನು ಪಡೆಯಬೇಕು. ನಮಗೆ ಅದರಲ್ಲಿ ಸಾಕಷ್ಟು ಅದೃಷ್ಟವಿರಲಿಲ್ಲ. ನಮಗೆ ಎರಡು ಪಂದ್ಯಗಳಿವೆ ಮತ್ತು ಅದರ ಬಗ್ಗೆ ಯೋಚಿಸುವ ಸಮಯ ಇದು. ನಾವು ಕುಳಿತು ಏನು ಮಾಡಬೇಕೆಂದು ಪುನರ್ವಿಮರ್ಶಿಸುತ್ತೇವೆ ಮತ್ತು ನಂತರ ಮಾಡಬೇಕಾದ ಬದಲಾವಣೆಗಳನ್ನು ನೋಡುತ್ತೇವೆ. ಕಾಪ್ ಅವರು ನಮ್ಮಿಂದ ಪಂದ್ಯವನ್ನು ಕಸಿದುಕೊಂಡರು. ಅವರು ನಮಗೆ ಎರಡು ಅವಕಾಶಗಳನ್ನು ನೀಡಿದರು ಮತ್ತು ಅವು ನಿರ್ಣಾಯಕ ಕ್ಷಣಗಳಾಗಿವೆ ಮತ್ತು ಅದು ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿತು' ಎಂದು ಭಾರತದ ನಾಯಕಿ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದರು.
'ಈ ಸೋಲು ಸಾಕಷ್ಟು ಕಲಿಸಿದೆ, ಸಾಕಷ್ಟು ಸಕಾರಾತ್ಮಕ ಕ್ಷಣಗಳು ಮತ್ತು ನಾನು ಬಲವಾಗಿ ಉಳಿಯಬೇಕಾದ ಹಲವು ಕ್ಷಣಗಳನ್ನು ನೀಡಿದೆ. ಈಗ ಸಕಾರಾತ್ಮಕವಾಗಿರಲು ಮತ್ತು ಮುಂಬರುವ ಪಂದ್ಯಗಳಲ್ಲಿ ಏನು ಮಾಡಬೇಕೆಂದು ಯೋಚಿಸಲು ಸಮಯ. ಮುಂದಿನ ಪಂದ್ಯಗಳಲ್ಲಿ ನಾವು ಉತ್ತಮವಾಗಿ ಮೇಲೇರುತ್ತೇವೆ ಎಂದು ಆಶಿಸುತ್ತೇವೆ' ಎಂದು ಅವರು ಹೇಳಿದರು.
ಭಾರತವು ಜೂನ್ 25 ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ ಮತ್ತು ಜೂನ್ 28 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಪಂದ್ಯಕ್ಕೆ ಸಂಬಂಧಿಸಿದಂತೆ, ಮ್ಯಾಂಚೆಸ್ಟರ್ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು ಆರು ವಿಕೆಟ್ಗಳಿಂದ ಸೋಲಿಸುವಲ್ಲಿ ಮಾರಿಜಾನ್ ಕಾಪ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಕಾಪ್ ಮೊದಲು 2/27 ವಿಕೆಟ್ಗಳನ್ನು ಪಡೆದು ಭಾರತವನ್ನು 158/7 ಕ್ಕೆ ನಿರ್ಬಂಧಿಸಲು ಸಹಾಯ ಮಾಡಿದರು ಮತ್ತು ನಂತರ ಅಜೇಯ 81 ರನ್ಗಳನ್ನು ಗಳಿಸುವ ಮೂಲಕ ತಂಡವು 19.1 ಓವರ್ಗಳಲ್ಲಿ 161/4 ಸ್ಕೋರ್ ಗಳಿಸಲು ನೆರವಾದರು.
ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರಿಂದ ಭಾರತ ಉತ್ತಮ ಆರಂಭ ಪಡೆಯಿತು. ಆದರೆ, ನಿಯಮಿತ ವಿಕೆಟ್ ಪತನವಾಯಿತು. ಶಫಾಲಿ ಗರಿಷ್ಠ 31 ರನ್ ಗಳಿಸಿದರೆ, ದೀಪ್ತಿ ಶರ್ಮಾ 29 ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ 200ನೇ ಟಿ20ಐ ಪಂದ್ಯದಲ್ಲಿ 24 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ, ಶ್ರೀ ಚರಣಿ ಅವರ ಅದ್ಭುತ ಸ್ಪೆಲ್ನಿಂದ ದಕ್ಷಿಣ ಆಫ್ರಿಕಾ ಸ್ಕೋರ್ 25/2 ಕ್ಕೆ ಇಳಿದಿತು. ಆದರೆ, ಕಾಪ್ ಮತ್ತು ಟಾಜ್ಮಿನ್ ಬ್ರಿಟ್ಸ್ (40) 97 ರನ್ಗಳನ್ನು ಸೇರಿಸಿ ಚೇಸ್ ಅನ್ನು ಪುನರುಜ್ಜೀವನಗೊಳಿಸಿದರು. ಈ ಗೆಲುವು ದಕ್ಷಿಣ ಆಫ್ರಿಕಾವನ್ನು ಗ್ರೂಪ್ ಎ ನಲ್ಲಿ ಮೂರನೇ ಸ್ಥಾನಕ್ಕೆ ಏರಿಸಿತು. ಆದರೆ, ಭಾರತ ಎರಡನೇ ಸ್ಥಾನದಲ್ಲಿ ಉಳಿಯಿತು.