ಟೀಂ ಇಂಡಿಯಾ 
ಕ್ರಿಕೆಟ್

T20 World Cup 2026: ಕ್ಯಾಚಿಂಗ್ ದಕ್ಷತೆಯಲ್ಲಿ ಪಾಕಿಸ್ತಾನವೇ ಸ್ವಲ್ಪ ಉತ್ತಮ; ಭಾರತ ಅತ್ಯಂತ ಕಳಪೆ ಕ್ಯಾಚಿಂಗ್ ತಂಡ!

ಭಾನುವಾರ ನಡೆದ ಸೂಪರ್ 8 ಪಂದ್ಯದಲ್ಲಿಯೂ ಭಾರತ ವೆಸ್ಟ್ ಇಂಡೀಸ್ ಇನಿಂಗ್ಸ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿತು.

ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲುತ್ತವೆ ಎಂದಾದರೆ, ಟೀಂ ಇಂಡಿಯಾ 2026ರ ಟಿ20 ವಿಶ್ವಕಪ್ ಗೆಲ್ಲುವುದಿಲ್ಲ. ಈ ವರ್ಷದ ಟೂರ್ನಮೆಂಟ್‌ನಲ್ಲಿ ಸೂಪರ್ 8 ರಲ್ಲಿದ್ದ ಎಲ್ಲ ತಂಡಗಳ ಪೈಕಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಅತ್ಯಂತ ಕೆಟ್ಟ ಕ್ಯಾಚಿಂಗ್ ದಕ್ಷತೆ ಇರುವ ತಂಡವಾಗಿದೆ. ಮಾರ್ಚ್ 1 ರಂದು ಭಾನುವಾರ ನಡೆದ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿಯೂ ಭಾರತ ವೆಸ್ಟ್ ಇಂಡೀಸ್ ಇನಿಂಗ್ಸ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿತು.

ಐದನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ 25 ಎಸೆತಗಳಲ್ಲಿ 40 ರನ್ ಗಳಿಸಿದ್ದ ರೋಸ್ಟನ್ ಚೇಸ್ ಅವರ ಕ್ಯಾಚ್ ಕೈಬಿಟ್ಟರು. ನಂತರ ತಿಲಕ್ ವರ್ಮಾ ಶೆರ್ಫೇನ್ ರುದರ್ಫೋರ್ಡ್ ಅವರ ಕ್ಯಾಚ್ ಕೈಬಿಟ್ಟರು ಮತ್ತು ಕೊನೆಯದಾಗಿ, 19 ಎಸೆತಗಳಲ್ಲಿ 34 ರನ್ ಗಳಿಸಿದ ಪೊವೆಲ್ ಅವರ ಕ್ಯಾಚ್ ಅನ್ನು ಸಹ ಅಭಿಷೇಕ್ ಕೈಬಿಟ್ಟರು. ಇದು ತಂಡದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ಕೆಟ್ಟ ಬೆಲೆಯನ್ನೂ ಸಹ ತೆರಬೇಕಾಗಬಹುದು.

ಆದರೂ, ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನೀಡಿದ್ದ ಸವಾಲಿನ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಟಿ20 ವಿಶ್ವಕಪ್ 2026ರ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಸಂಜು ಸ್ಯಾಮ್ಸನ್ ಆರಂಭದಿಂದ ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ವಾಸ್ತವವಾಗಿ, ಈ ಪಂದ್ಯಾವಳಿಯಲ್ಲಿ ಒಟ್ಟು 13 ಕ್ಯಾಚ್‌ಗಳನ್ನು ಕೈಬಿಡಲಾಗಿದೆ. ಅಂದರೆ, ಅವರ ಕ್ಯಾಚಿಂಗ್ ದಕ್ಷತೆಯು ಶೇ 72.7 ಕ್ಕೆ ಕುಸಿದಿದೆ. ಪಟ್ಟಿಯಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನಕ್ಕಿಂತಲೂ ಭಾರತ ಹಿಂದುಳಿದಿದೆ. ಅಚ್ಚರಿಯ ವಿಚಾರವೆಂದರೆ, ಪಾಕಿಸ್ತಾನವು ಭಾರತಕ್ಕಿಂತ ಉತ್ತಮ ಪ್ರದರ್ಶನ ನೀಡಿತು. ಶೇ 83.3 ರಷ್ಟು ಕ್ಯಾಚಿಂಗ್ ದಕ್ಷತೆಯನ್ನು ಹೊಂದಿದೆ. ಪಟ್ಟಿಯಲ್ಲಿ ಇಂಗ್ಲೆಂಡ್ ಶೇ 87.2 ರಷ್ಟು ಕ್ಯಾಚಿಂಗ್ ದಕ್ಷತೆಯೊಂದಿಗೆ ಅಗ್ರಸ್ಥಾನದಲ್ಲಿದೆ.

ಪಾಕಿಸ್ತಾನದೊಂದಿಗಿನ ಪಂದ್ಯವೊಂದರಲ್ಲಿಯೇ ಭಾರತೀಯ ಫೀಲ್ಡರ್‌ಗಳು ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ತಂಡವು ಅಲ್ಲಿ ಪಾಕ್ ವಿರುದ್ಧ ಗೆದ್ದಿದ್ದರೂ, ಕ್ಯಾಚ್‌ಗಳನ್ನು ಕೈಬಿಡುವುದು ಅಪರಾಧ. ಇದೀಗ ಭಾರತ ಸೆಮಿಫೈನಲ್ ತಲುಪಿದ್ದು, ಇಂಗ್ಲೆಂಡ್ ವಿರುದ್ಧ ಸೆಣಸಬೇಕಿದೆ. ಕ್ಯಾಚ್ ಬಿಡುವುದನ್ನು ಮುಂದುವರಿಸಿದರೆ, ತಂಡವು ಅದಕ್ಕೆ ತಕ್ಕ ಬೆಲೆ ತೆರಬೇಕಾಗಬಹುದು.

ಕೆಟ್ಟ ಕ್ಯಾಚಿಂಗ್ ದಕ್ಷತೆ

ಇಂಗ್ಲೆಂಡ್ - ಶೇ 87.2

ಜಿಂಬಾಬ್ವೆ- ಶೇ 85.4

ವೆಸ್ಟ್ ಇಂಡೀಸ್- ಶೇ 84.6

ನ್ಯೂಜಿಲೆಂಡ್- ಶೇ 83.9

ಪಾಕಿಸ್ತಾನ- 83.3

ದಕ್ಷಿಣ ಆಫ್ರಿಕಾ- ಶೇ 81.1

ಶ್ರೀಲಂಕಾ- ಶೇ 77.8

ಭಾರತ- ಶೇ 72.7

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲೆ ದಾಳಿ: ಹಿಜ್ಬುಲ್ಲಾ ರಾಕೆಟ್ ದಾಳಿ ಬಳಿಕ ಬೈರುತ್ ಮೇಲೆ ಬಾಂಬ್ ಹಾಕಿದ ಇಸ್ರೇಲ್!

IRGC ಪ್ರಧಾನ ಕಚೇರಿ ಧ್ವಂಸ! ಹಾವಿನ ತಲೆಯನ್ನು ಕತ್ತರಿಸಿದ್ದೇವೆ: ಅಮೆರಿಕ

ThinkEdu 2026: ಚೆನ್ನೈನಲ್ಲಿಂದು ಸಮಾವೇಶ ಆರಂಭ, 'ಆತ್ಮನಿರ್ಭರ ಭಾರತದ ಕನಸಿಗೆ ಶಿಕ್ಷಣವೇ ದಿಕ್ಕು' ಕುರಿತು ಗಂಭೀರ ಚರ್ಚೆ

ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; 2 ಲಕ್ಷ ರೂ. ಆಗುತ್ತಾ 10 ಗ್ರಾಂ ಚಿನ್ನದ ರೇಟ್?

Iran-Israel war: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ, ಭದ್ರತೆ-ವಿದೇಶದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕುರಿತು ಚರ್ಚೆ

SCROLL FOR NEXT