ಮೈಕೆಲ್ ಅಥರ್ಟನ್ 
ಕ್ರಿಕೆಟ್

'ಭಾರತ ಬಲಿಷ್ಠ ತಂಡ ಆದರೆ, ಸೋಲದೇ ಇರುವುದಿಲ್ಲ': ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಕಾದಾಟಕ್ಕೂ ಮುನ್ನ ಮೈಕೆಲ್ ಅಥರ್ಟನ್

ಇಂಗ್ಲೆಂಡ್ ಗೆಲ್ಲುವುದಾದರೆ, ಅದಕ್ಕೆ ಪ್ರಮುಖ ಕಾರಣ ಸಾಲ್ಟ್-ಬಟ್ಲರ್ ಅವರ ಜೊತೆಯಾಟವಾಗಿರುತ್ತದೆ ಎಂದು ಈ ಟೂರ್ನಮೆಂಟ್‌ಗೆ ಮೊದಲು ಎಲ್ಲರೂ ಹೇಳಿದ್ದರು. ಆದರೆ, ಇಬ್ಬರೂ ನಿಜವಾಗಿಯೂ ಇನ್ನೂ ಆಟವನ್ನು ಪ್ರಾರಂಭಿಸಿಯೇ ಇಲ್ಲ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ಅಥರ್ಟನ್, ಭಾರತವು ಅತ್ಯಂತ ಬಲಿಷ್ಠ ತಂಡವಾಗಿದ್ದರೂ, ಅವರಿಗೆ ಹೆಚ್ಚುವರಿ ಬೌಲಿಂಗ್ ಆಯ್ಕೆಯ ಕೊರತೆಯಿರುವುದರಿಂದ ಮತ್ತು ಕೆಲವು ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿಲ್ಲದ ಕಾರಣ ಅವರು ಅಜೇಯರಲ್ಲ ಎಂದು ಹೇಳಿದ್ದಾರೆ. 2022 ಮತ್ತು 2024ರ ಆವೃತ್ತಿಗಳ ನಂತರ ಸತತ ಮೂರನೇ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಸ್ಕೈ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುವ ವೇಳೆ ಭಾರತದ ನ್ಯೂನತೆಗಳನ್ನು ಎತ್ತಿ ತೋರಿಸಿದ ಅಥರ್ಟನ್, ಆದರೂ, ಅವರನ್ನು ಸೋಲಿಸಲು ಇಂಗ್ಲೆಂಡ್ 'ಅತ್ಯುತ್ತಮ' ಸ್ಥಿತಿಯಲ್ಲಿರಬೇಕು ಮತ್ತು ಫೈನಲ್ ಪಂದ್ಯವು 2024ರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಆವೃತ್ತಿಯ ಮರುಪಂದ್ಯವಾಗಿರುತ್ತದೆ ಎಂದರು.

'ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಕಳಪೆ ಪ್ರದರ್ಶನ ನೀಡಿದ್ದರೂ, ಸೆಮಿಫೈನಲ್ ತಲುಪಿದ ನಂತರ ಇಂಗ್ಲೆಂಡ್ ಆತ್ಮವಿಶ್ವಾಸದಿಂದ ಇರಬೇಕು. ಈ ಇಬ್ಬರು ಆಟಗಾರರು ಒಟ್ಟಾಗಿ 200 ರನ್‌ಗಳನ್ನು ಸಹ ಗಳಿಸಿಲ್ಲ ಮತ್ತು ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದಾರೆ. ಬಟ್ಲರ್ ಏಳು ಇನಿಂಗ್ಸ್‌ಗಳಲ್ಲಿ ಕೇವಲ 62 ರನ್‌ಗಳನ್ನು ಗಳಿಸಿದ್ದಾರೆ' ಎಂದರು.

'ಇಂಗ್ಲೆಂಡ್ ಗೆಲ್ಲುವುದಾದರೆ, ಅದಕ್ಕೆ ಪ್ರಮುಖ ಕಾರಣ ಸಾಲ್ಟ್-ಬಟ್ಲರ್ ಅವರ ಜೊತೆಯಾಟವಾಗಿರುತ್ತದೆ ಎಂದು ಈ ಟೂರ್ನಮೆಂಟ್‌ಗೆ ಮೊದಲು ಎಲ್ಲರೂ ಹೇಳಿದ್ದರು. ಆದರೆ, ಇಬ್ಬರೂ ನಿಜವಾಗಿಯೂ ಇನ್ನೂ ಆಟವನ್ನು ಪ್ರಾರಂಭಿಸಿಯೇ ಇಲ್ಲ. ತಮ್ಮ ತಂಡದ ಪ್ರಮುಖರು ಉತ್ತಮ ಪ್ರದರ್ಶನ ನೀಡದಿದ್ದರೂ, ಗೆಲುವು ಸಾಧಿಸಿದಾಗ ಅವರು ಆತ್ಮವಿಶ್ವಾಸವನ್ನು ಪಡೆಯುತ್ತಾರೆ ಮತ್ತು ಅವರು ಮತ್ತಷ್ಟು ಉತ್ತಮಗೊಳ್ಳತ್ತಾರೆ' ಎಂದು ತಿಳಿಸಿದರು.

ಇಂಗ್ಲೆಂಡ್ ಇಲ್ಲಿಯವರೆಗೆ ತನ್ನ ಅತ್ಯುತ್ತಮ ಕ್ರಿಕೆಟ್ ಆಡಿಲ್ಲ ಎಂದು ಮೈಕೆಲ್ ಅಥರ್ಟನ್ ನಂಬಿದ್ದಾರೆ. 2022ರ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಂತೆಯೇ ತಂಡವು ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ತನ್ನ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳಬಹುದೇ ಎಂದು ಅವರು ಆಶ್ಚರ್ಯ ಪಡುತ್ತಿದ್ದಾರೆ.

'ಭಾರತವು ಅಸಾಧಾರಣ ತಂಡವಾಗಿದೆ, ಸ್ಪಷ್ಟವಾಗಿಯೂ, ಮತ್ತು ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಒತ್ತಡದಲ್ಲಿಯೂ ವೆಸ್ಟ್ ಇಂಡೀಸ್ ವಿರುದ್ಧ ರನ್ ಚೇಸ್ ಅಸಾಧಾರಣವಾಗಿತ್ತು. ಆದರೆ, ಅವರು ಅಜೇಯರು ಎಂದು ನಾನು ಭಾವಿಸುವುದಿಲ್ಲ. ಫೀಲ್ಡಿಂಗ್‌ ವಿಚಾರದಲ್ಲಿ ಸಮಸ್ಯೆಯಿದೆ. ಬೌಲಿಂಗ್ ವಿಭಾಗದಲ್ಲಿಯೂ ಅವರಿಗೆ ಆಯ್ಕೆಯ ಕೊರತೆಯಿದೆ' ಎಂದು ಹೇಳಿದರು.

'ಅವರ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ, ಆದ್ದರಿಂದ ಅವರು ಅಜೇಯರಲ್ಲ. ಅವರನ್ನು ಸೋಲಿಸಲು ಇಂಗ್ಲೆಂಡ್ ತಮ್ಮ ಅತ್ಯುತ್ತಮ ಸಾಮರ್ಥ್ಯ ತೋರಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ಫೈನಲ್‌ ಪಂದ್ಯವು 2024ರಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಂತೆಯೇ ಇರುತ್ತದೆ ಎಂದು ನನಗನಿಸುತ್ತದೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ಸಂಪೂರ್ಣ ಕುಸಿಯುತ್ತಿದೆ': ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

IPL 2026: ಜೈಸ್ವಾಲ್, ಫೆರೀರಾ ಅಬ್ಬರಕ್ಕೆ ಪಂಜಾಬ್ ತತ್ತರ; PBKS ವಿರುದ್ಧ RR ಭರ್ಜರಿ ಗೆಲುವು

CM ಸಿದ್ದರಾಮಯ್ಯ ಪದತ್ಯಾಗಕ್ಕೂ ಸಿದ್ಧರಾಗಿದ್ದಾರೆ: ಮಾಜಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ; Video

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

SCROLL FOR NEXT