ಬ್ಲೆಸ್ಸಿಂಗ್ ಮುಜರಬಾನಿ 
ಕ್ರಿಕೆಟ್

PSL ಒಪ್ಪಂದ ಮುರಿದು IPL ನತ್ತ ಮುಖಮಾಡಿದ ಮುಜರಬಾನಿ; ಕಾನೂನು ಕ್ರಮಕ್ಕೆ PCB ಮುಂದು!

ಮುಜರಬಾನಿ ಅವರನ್ನು ಮಾರ್ಚ್ 26 ರಂದು ಪ್ರಾರಂಭವಾಗಲಿರುವ ಪಿಎಸ್‌ಎಲ್ ಸೀಸನ್ 11 ಕ್ಕಾಗಿ ಇಸ್ಲಾಮಾಬಾದ್ ಯುನೈಟೆಡ್ ತಂಡವು ಪಿಕೆಆರ್ 11 ಮಿಲಿಯನ್‌ಗೆ ಖರೀದಿಸಿತ್ತು.

ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಆವೃತ್ತಿಯಿಂದ ಹಿಂದೆ ಸರಿದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಜಿಂಬಾಬ್ವೆ ಪರ 89 ಟಿ20 ಪಂದ್ಯಗಳನ್ನು ಆಡಿರುವ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ 2026ರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮುಜರಬಾನಿ, ಬಿಸಿಸಿಐ ಸೂಚನೆಯ ಮೇರೆಗೆ ತಂಡದಿಂದ ಬಿಡುಗಡೆಯಾದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್‌ (KKR) ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದ ಮುಜರಬಾನಿ ಅವರನ್ನು ಮಾರ್ಚ್ 26 ರಂದು ಪ್ರಾರಂಭವಾಗಲಿರುವ ಪಿಎಸ್‌ಎಲ್ ಸೀಸನ್ 11 ಕ್ಕಾಗಿ ಇಸ್ಲಾಮಾಬಾದ್ ಯುನೈಟೆಡ್ ತಂಡವು ಪಿಕೆಆರ್ 11 ಮಿಲಿಯನ್‌ಗೆ ಖರೀದಿಸಿತ್ತು. ಆದಾಗ್ಯೂ, ಕೋಲ್ಕತ್ತಾ ಫ್ರಾಂಚೈಸಿ ಅವರನ್ನು ಸಂಪರ್ಕಿಸಿದಾಗ, ವೇಗಿ ಐಪಿಎಲ್ ತಂಡವನ್ನು ಸೇರಲು ಇಸ್ಲಾಮಾಬಾದ್‌ನೊಂದಿಗಿನ ಒಪ್ಪಂದವನ್ನು ತ್ಯಜಿಸಲು ನಿರ್ಧರಿಸಿದರು.

ಜಿಯೋ ಸೂಪರ್ ವರದಿ ಪ್ರಕಾರ, ಪಾಕಿಸ್ತಾನದ ಟಿ20 ಲೀಗ್‌ನಿಂದ ತಡವಾಗಿ ಹಿಂದೆ ಸರಿದ ಮುಜರಬಾನಿ ವಿರುದ್ಧ ಪಿಸಿಬಿ ಕಾನೂನು ಕ್ರಮ ಕೈಗೊಳ್ಳಲು ಉದ್ದೇಶಿಸಿದೆ.

ಪಿಎಸ್‌ಎಲ್ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರನ್ನು ಪೇಶಾವರ್ ಝಲ್ಮಿ ಡೈಮಂಡ್ ತಂಡಕ್ಕೆ ಬಿಕರಿಯಾಗಿದ್ದರು. ಆದರೆ, ಅವರು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬದಲಿ ಆಟಗಾರನಾಗಿ ಸೇರುವ ಒಪ್ಪಂದವನ್ನು ಒಪ್ಪಿಕೊಂಡರು. ಇದರ ಪರಿಣಾಮವಾಗಿ ಬಾಷ್ ಅವರನ್ನು ಪಿಎಸ್‌ಎಲ್‌ನಿಂದ ಒಂದು ವರ್ಷದವರೆಗೆ ನಿಷೇಧಿಸಲಾಯಿತು.

ಟಿ20 ವಿಶ್ವಕಪ್‌ನಲ್ಲಿ ಮುಜರಬಾನಿ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, ಜಿಂಬಾಬ್ವೆ ಸೂಪರ್ 8ರ ಹಂತಕ್ಕೆ ಮುನ್ನಡೆಯುವಾಗ 13 ವಿಕೆಟ್‌ಗಳೊಂದಿಗೆ ಜಂಟಿಯಾಗಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಸ್ಥಾನ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಅನುದಾನ: ಅಭಿವೃದ್ಧಿಗೆ ಹಣವಿಲ್ಲವೆಂಬ BJP ಆರೋಪ ಸತ್ಯಕ್ಕೆ ದೂರ; ಸಿಎಂ ಸಿದ್ದರಾಮಯ್ಯ

ಅಭಿಷೇಕ್ ಬಗ್ಗೆ ಭಾರತೀಯ ಆಟಗಾರರಿಗೆ 'ಅಸೂಯೆ ಇದೆಯಾ? ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಸಂಜು ಸ್ಯಾಮ್ಸನ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು: ರಾಜ್ಯದ ಸಂಸದರ ಜತೆ ದೆಹಲಿಯಲ್ಲಿ ಸಭೆ; ಡಿ.ಕೆ. ಶಿವಕುಮಾರ್

Jammu- Kashmir: ಪೂಂಚ್‌ನಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ, ಸೇನೆಯ JCO ಹುತಾತ್ಮ

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

SCROLL FOR NEXT