ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ  
ಕ್ರಿಕೆಟ್

RCB ಶುಭಾರಂಭ ನಂತರ ಅನುಷ್ಕಾ ಶರ್ಮಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ; 'ಇವರು ಇನ್ನೂ ಡೇಟಿಂಗ್ ಮಾಡ್ತಾ ಇದ್ದಾರೆ'; ಅಭಿಮಾನಿಗಳಿಂದ ಉದ್ಗಾರ; Video

202 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿಕೊಟ್ಟು, 38 ಬಾಲ್‌ಗಳಲ್ಲಿ ಅಜೇಯ 69 ರನ್ ಗಳಿಸಿದರು.

ವಿರಾಟ್ ಕೊಹ್ಲಿ ಮತ್ತೊಮ್ಮೆ ತಾನು ಆಟದಲ್ಲಿನ ಅತ್ಯುತ್ತಮ ಚೇಸರ್‌ಗಳಲ್ಲಿ ಒಬ್ಬನೆಂಬುದನ್ನು ಸಾಬೀತುಪಡಿಸಿ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್‌ಗಳ ಸುಲಭ ಜಯಕ್ಕೆ ದಾರಿ ತೋರಿಸಿದರು.

202 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿಕೊಟ್ಟು, 38 ಬಾಲ್‌ಗಳಲ್ಲಿ ಅಜೇಯ 69 ರನ್ ಗಳಿಸಿದರು. ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳಿಂದ ಅವರ ಇನ್ನಿಂಗ್ಸ್‌ನಿಂದ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ ಗುರಿ ತಲುಪಿ, ತಮ್ಮ ಟೈಟಲ್ ರಕ್ಷಣೆಯನ್ನು ಭರ್ಜರಿಯಾಗಿ ಆರಂಭಿಸಿತು.

ಗಮನಸೆಳೆದ ವಿರಾಟ್ ಫ್ಲೈಯಿಂಗ್ ಕಿಸ್

ಚೇಸ್ ಅಂತ್ಯದ ವೇಳೆ ಒಂದು ಹಗುರ ಕ್ಷಣವೂ ಗಮನ ಸೆಳೆಯಿತು. ಆರ್ ಸಿಬಿ ಗೆಲುವು ಸಾಧಿಸಿದ ನಂತರ ವಿರಾಟ್ ಕೊಹ್ಲಿ ಸ್ಟ್ಯಾಂಡ್‌ನಲ್ಲಿ ಇದ್ದ ಅನುಷ್ಕಾ ಶರ್ಮಾ ಅವರಿಗೆ ಫ್ಲೈಯಿಂಗ್ ಕಿಸ್ ಕಳುಹಿಸಿದ ದೃಶ್ಯ ಅಭಿಮಾನಿಗಳನ್ನು ರಂಜಿಸಿತು.

ಆರಂಭದಿಂದಲೇ ಕೊಹ್ಲಿ ಅದ್ಭುತ ಟಚ್‌ನಲ್ಲಿ ಕಂಡುಬಂದರು. ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಂದ ದೂರವಿದ್ದರೂ ಕಮಾಲ್ ಮಾಡುವಲ್ಲಿ ಹಿಂದುಳಿಯಲಿಲ್ಲ. ಆರಂಭದಲ್ಲಿ ಸ್ಟ್ರೈಕ್‌ ರೋಟೇಟ್ ಮಾಡುತ್ತಾ, ಸರಿಯಾದ ಸಮಯದಲ್ಲಿ ವೇಗ ಹೆಚ್ಚಿಸಿ, ಚೇಸ್ ಮಾಡುವಲ್ಲಿ ತಮ್ಮ ನಿಪುಣತೆಯನ್ನು ಮತ್ತೊಮ್ಮೆ ತೋರಿಸಿದರು.

ಅವರಿಗೆ ದೇವದುತ್ ಪಡಿಕ್ಕಲ್ ಉತ್ತಮ ಬೆಂಬಲ ನೀಡಿದರು. ಪಡಿಕ್ಕಲ್ ಕೇವಲ 26 ಬಾಲ್‌ಗಳಲ್ಲಿ 61 ರನ್‌ಗಳ ಸಿಡಿಲಿನ ಇನ್ನಿಂಗ್ಸ್ ಆಡಿದ್ದು, ಆರ್‌ಸಿಬಿಯನ್ನು ಅಗತ್ಯ ರನ್‌ರೇಟ್‌ಗೆ ಮುಂದೆ ಇಟ್ಟರು. ನಾಯಕ ರಾಜತ್ ಪಾಟಿದಾರ್ ಕೂಡ 12 ಬಾಲ್‌ಗಳಲ್ಲಿ 31 ರನ್‌ಗಳ ವೇಗದ ಇನ್ನಿಂಗ್ಸ್ ನೀಡಿ ತಂಡದ ಗತಿಯನ್ನೇ ಉಳಿಸಿದರು.

ಇದಕ್ಕೂ ಮೊದಲು, ಆರಂಭಿಕ ಅಡಚಣೆಗಳನ್ನು ಮೀರಿ ಸನ್‌ರೈಸರ್ಸ್ ಹೈದರಾಬಾದ್ 9 ವಿಕೆಟ್‌ಗೆ 201 ರನ್ ಗಳಿಸಿತು. ಆದರೆ ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಎದುರು ಈ ಮೊತ್ತ ಸಾಕಾಗಲಿಲ್ಲ.

ಸ್ಟ್ಯಾಂಡ್‌ ನಲ್ಲಿ ನಿಂತು ಸ್ಮೃತಿ ಮಂದಾನಾ, ಶ್ರೇಯಾಂಕ ಪಾಟೀಲ್ ಮತ್ತು ಜೆಮಿಮಾ ರೋಡ್ರಿಗ್ಸ್ ಪಂದ್ಯಕ್ಕೆ ಮತ್ತು ಪ್ರೇಕ್ಷಕರಿಗೆ ಹೆಚ್ಚುವರಿ ಕಳೆ ತಂದರು. ಪದಾರ್ಪಣೆ ಪಂದ್ಯವಾಡಿದ ಜೇಕಬ್ ಡಫಿ 4 ಓವರ್‌ಗಳಲ್ಲಿ 3/22 ಪಡೆದು ಗಮನ ಸೆಳೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ CM ಆಯ್ಕೆ ಕಗ್ಗಂಟು: ವಿಡಿ ಸತೀಶನ್ ಅಥವಾ ಕೆಸಿ ವೇಣುಗೋಪಾಲ್? ಎಲ್ಲಾ ಸಸ್ಪೆನ್ಸ್ ಗಳಿಗೆ ಇಂದು ಅಂತಿಮ ತೆರೆ!

Energy Crisis ಗೆ ಉತ್ತರ ಕೊಡಬೇಕಿದೆ ಭಾರತ! (ಹಣಕ್ಲಾಸು)

ಮೇ 16 ಶನಿವಾರದ ಅಮಾವಾಸ್ಯೆಯ ಮಹತ್ವ: ಶನಿದೇವರ ಕೃಪೆಗಾಗಿ ಏನು ಮಾಡಬೇಕು? ಏನು ಮಾಡಬಾರದು? ಈ ವಸ್ತುಗಳ ದಾನ ಕೊಟ್ಟರೆ ನಿಮ್ಮ ಸಂಕಷ್ಟ ಮಾಯ!

ಮೋದಿ ಎಲ್ಲಿ ರೋಡ್ ಶೋ ಮಾಡಿದ್ರೂ ಅಲ್ಲಿ ಆ್ಯಂಬುಲೆನ್ಸ್ ಬರುತ್ತೆ, ಆವಾಗ ದಾರಿ ಮಾಡಿಕೊಡ್ತಾರೆ: ಸಂತೋಷ್ ಲಾಡ್ ವ್ಯಂಗ್ಯ

'ಬಿಜೆಪಿ ವಿತರಿಸುವ ಕೇಸರಿ ಶಾಲು ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಲೈಸೆನ್ಸ್: ಯುವ ಸಮುದಾಯದ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್'

SCROLL FOR NEXT