ಕ್ರಿಕೆಟಿಗ ಫಖರ್ ಜಮಾನ್ ವಿರುದ್ಧ ಚೆಂಡು ವಿರೂಪ ಆರೋಪ 
ಕ್ರಿಕೆಟ್

ಮತ್ತೊಂದು ಕೆಟ್ಟ ನಡವಳಿಕೆಯಿಂದ ವಿಶ್ವಮಟ್ಟದಲ್ಲಿ ಪಾಕ್ ಸುದ್ದಿ! PSL ನಲ್ಲಿ 'ಬಾಲ್ ಟ್ಯಾಂಪರಿಂಗ್'; ಕ್ಯಾಮರಾದಲ್ಲಿ ಸೆರೆ!

ಭಾನುವಾರ ನಡೆದ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಕ್ರಿಕೆಟಿಗ ಫಖರ್ ಜಮಾನ್ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಮಾಡಲಾಗಿದೆ.

ಕರಾಚಿ: ಮತ್ತೊಂದು ನಾಚಿಕೆಗೇಡಿನ ನಡವಳಿಕೆಯಿಂದ ಪಾಕಿಸ್ತಾನ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ 'ಬಾಲ್ ಟ್ಯಾಪರಿಂಗ್' ವಿವಾದ ಭುಗಿಲೆದ್ದಿದೆ.

ಭಾನುವಾರ ನಡೆದ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಕ್ರಿಕೆಟಿಗ ಫಖರ್ ಜಮಾನ್ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಮಾಡಲಾಗಿದೆ.

"ಮ್ಯಾಚ್ ರೆಫರಿ ರೋಶನ್ ಮಹಾನಾಮ ನೇತೃತ್ವದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಫಖರ್ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. "ಮುಂದಿನ 48 ಗಂಟೆಗಳ ಒಳಗೆ ಮತ್ತೊಂದು ವಿಚಾರಣೆ ನಡೆಯಲಿದೆ. ತದನಂತರ ಮ್ಯಾಚ್ ರೆಫರಿ ತಮ್ಮ ತೀರ್ಪನ್ನು ನೀಡಲಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದರೆ ಒಂದು ಪಂದ್ಯದಿಂದ ಅವರನ್ನು ನಿಷೇಧಿಸಲಾಗುವುದು ಎಂದು ಮಾಹಿತಿ ನೀಡಿದೆ.

ಕರಾಚಿ ಕಿಂಗ್ಸ್ ಗೆಲುವಿಗೆ ಇನ್ನೂ 14 ರನ್‌ಗಳ ಅಗತ್ಯವಿದ್ದು, ಅಂತಿಮ ಓವರ್ ಅನ್ನು ವೇಗದ ಬೌಲರ್ ಹ್ಯಾರಿಸ್ ರೌಫ್ ಬೌಲ್ ಮಾಡಬೇಕಾಗಿದ್ದಾಗ ವಿವಾದ ಸ್ಫೋಟಗೊಂಡಿದೆ. ಲಾಹೋರ್ ನಾಯಕ ಶಾಹೀನ್ ಶಾ ಅಫ್ರಿದಿ, ಬ್ಯಾಟರ್ ಜಮಾನ್ ಮತ್ತು ರೌಫ್ ಮೂವರು ಪರಸ್ಪರ ಚರ್ಚೆಯ ನಂತರ ಇದು ನಡೆದಿದೆ.

ಬಳಿಕ ಅಂಪೈರ್ ಫೈಸಲ್ ಅಫ್ರಿದಿ ಅವರು ಚೆಂಡನ್ನು ಪರಿಶೀಲಿಸಿದ್ದಾರೆ. ಎರಡನೇ ಆನ್-ಫೀಲ್ಡ್ ಅಂಪೈರ್ ಬಾಂಗ್ಲಾದೇಶದ ಶರ್ಫುದ್ದೌಲಾ ಅವರೊಂದಿಗೆ ಸುದೀರ್ಘ ಚರ್ಚೆ ಬಳಿಕ ಚೆಂಡನ್ನೂ ವಿರೂಪಗೊಳಿಸಲಾಗಿದೆ ಎಂದು ನಿರ್ಧರಿಸಿದ್ದಾರೆ. ಕರಾಚಿಗೆ ಐದು ಪೆನಾಲ್ಟಿ ರನ್‌ಗಳನ್ನು ನೀಡಿದ್ದಾರೆ. ಕೊನೆಯ ಆರು ಎಸೆತಗಳಲ್ಲಿ ಒಂಬತ್ತು ರನ್‌ಗಳ ಅಗತ್ಯವಿತ್ತು. ಆಗ ಅಂಪೈರ್‌ಗಳೂ ಚೆಂಡನ್ನು ಬದಲಾಯಿಸಿದ್ದಾರೆ.

ಪಂದ್ಯದ ಬಳಿಕ ಮಾಜಿ ಕ್ರಿಕೆಟಿಗ ರಮೀಜಾ ರಾಜಾ ಕೇಳಿದ ಪ್ರಶ್ನೆಗೆ ಶಾಹೀನ್ ಶಾ ಉತ್ತರಿಸದೆ ತಡಬಡಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಜಂತರ್ ಮಂತರ್‌ ಪ್ರತಿಭಟನೆ ಎಫೆಕ್ಟ್: ಮೋದಿ ಬೆಂಬಲಿಸಲು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್‌ ಕಾನ್‌ಸ್ಟೆಬಲ್‌!

ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ನೆಕ್ಲೆಸ್ ಕದ್ದ ಮಹಿಳೆಯರು; ಖತರ್ನಾಕ್ ಕಳ್ಳಿಯರ "ಕೈ"ಚಳಕ CCTVಯಲ್ಲಿ ಸೆರೆ!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ