ಮುಂಬೈ ಇಂಡಿಯನ್ಸ್ ಟೀಂ 
ಕ್ರಿಕೆಟ್

'ಈಗ MI ತಂಡದಂತೆ ಭಾಸವಾಯಿತು, ಸೂರ್ಯಕುಮಾರ್ ಯಾದವ್ ನಾಯಕತ್ವ ಉತ್ತಮವಾಗಿತ್ತು': ದೀಪಕ್ ಚಾಹರ್ ಸಹೋದರಿ ಪೋಸ್ಟ್ ವೈರಲ್

ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತ ನಂತರ, ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡಕ್ಕೆ ಈ ಗೆಲುವು ಪ್ರಮುಖ ಉತ್ತೇಜನ ನೀಡಿತು ಮತ್ತು ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿತು.

ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಮುಂಬೈ ಇಂಡಿಯನ್ಸ್ (MI) ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿತು. ಮೊದಲು ಬ್ಯಾಟಿಂಗ್ ಮಾಡಿದ ಎಲ್ಎಸ್‌ಜಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 228 ರನ್ ಗಳಿಸಿತು. ನಿಕೋಲಸ್ ಪೂರನ್ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಫಾರ್ಮ್‌ಗೆ ಮರಳಿದರು ಮತ್ತು ಕೇವಲ 21 ಎಸೆತಗಳಲ್ಲಿ 63 ರನ್ ಗಳಿಸಿದರು. ಈ ಗುರಿ ಬೆನ್ನತ್ತಿದ ಮುಂಬೈ, ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು. ಆರಂಭಿಕರಾದ ರೋಹಿತ್ ಶರ್ಮಾ (84) ಮತ್ತು ರಿಯಾನ್ ರಿಕಲ್ಟನ್ (83) ಎಲ್ಎಸ್‌ಜಿ ಬೌಲರ್‌ಗಳ ಬೆವರಿಳಿಸಿದರು.

ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತ ನಂತರ, ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡಕ್ಕೆ ಈ ಗೆಲುವು ಪ್ರಮುಖ ಉತ್ತೇಜನ ನೀಡಿತು ಮತ್ತು ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿತು.

ಬೆನ್ನುನೋವಿನಿಂದಾಗಿ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದರು.

ಪಂದ್ಯದ ನಂತರ, ಮುಂಬೈ ತಂಡದ ವೇಗಿ ದೀಪಕ್ ಚಾಹರ್ ಅವರ ಸಹೋದರಿ ಮಾಲ್ತಿ, X ನಲ್ಲಿ ಪೋಸ್ಟ್ ಮಾಡಿ ತಂಡವನ್ನು ಅಭಿನಂದಿಸಿದರು. ಸೂರ್ಯಕುಮಾರ್ ಅವರ ನಾಯಕತ್ವವನ್ನು ಮತ್ತು ತಮ್ಮ ಸಹೋದರನ ಬೌಲಿಂಗ್ ಅನ್ನು ಶ್ಲಾಘಿಸಿದ್ದಾರೆ.

'ಇದು ಮತ್ತೆ ಮುಂಬೈ ಇಂಡಿಯನ್ಸ್ ತಂಡದಂತೆ ಭಾಸವಾಯಿತು! ಬಹುತೇಕ ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು. ರಿಯಾನ್ ಮತ್ತು ರೋಹಿತ್ ಭಯ್ಯಾ ಚೆನ್ನಾಗಿ ಆಡಿದರು! ಸೂರ್ಯ ಅವರ ನಾಯಕತ್ವ ಉತ್ತಮವಾಗಿತ್ತು. ಮತ್ತು ಸಹೋದರ ದೀಪಕ್ ನಾಲ್ಕು ಓವರ್‌ಗಳನ್ನು ಚೆನ್ನಾಗಿ ಬೌಲ್ ಮಾಡಿದರು! ಸರಿಯಾದ ತಂಡದ ಆಟ. ಇದು ಎಂಐ ಆಟ!' ಎಂದು ಮಾಲ್ತಿ ಬರೆದಿದ್ದಾರೆ.

ಚಾಹರ್ ಯಾವುದೇ ವಿಕೆಟ್ ಪಡೆಯದೆ, ನಾಲ್ಕು ಓವರ್‌ಗಳಲ್ಲಿ 43 ರನ್‌ಗಳನ್ನು ಬಿಟ್ಟುಕೊಟ್ಟರು. ಆದರೆ, ಅವರ ಕೊನೆಯ ಎರಡು ಓವರ್‌ಗಳಲ್ಲಿ ಕೇವಲ 15 ರನ್‌ಗಳನ್ನು ಬಿಟ್ಟುಕೊಟ್ಟರು, ಇದು LSG ಯನ್ನು 228ಕ್ಕೆ ಸೀಮಿತಗೊಳಿಸುವಲ್ಲಿ ನಿರ್ಣಾಯಕವಾಗಿದೆ.

'ನಿಜ ಹೇಳಬೇಕೆಂದರೆ, ಈ ಆವೃತ್ತಿಯಲ್ಲಿ ನಾವು ಹಲವು ಬಾರಿ ಈ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇದು ಹೊಸದೇನಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, T20 ಕ್ರಿಕೆಟ್‌ನಲ್ಲಿ 7 ರಿಂದ 10 ಓವರ್‌ಗಳು (ಪವರ್‌ಪ್ಲೇ ನಂತರ) ತಂಡವು ಮೊಮೆಂಟಮ್ ಅನ್ನು ಬದಲಿಸಬಹುದು ಮತ್ತು ಆಟದ ಮೇಲೆ ಹಿಡಿತ ಸಾಧಿಸಬಹುದು. ನಮಗೆ ಆಗ್ಗಾಗ್ಗೆ ಎರಡು ವಿಕೆಟ್‌ಗಳು ಸಿಗುತ್ತಿದ್ದವು ಮತ್ತು ನಾವು ಆಟದ ಮೇಲೆ ಹಿಡಿತ ಸಾಧಿಸಿದೆವು. ಎಲ್ಲ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಮೊದಲ 8-9 ಓವರ್‌ಗಳಲ್ಲಿ ಅವರು 1 ಅಥವಾ 2 ವಿಕೆಟ್ ನಷ್ಟಕ್ಕೆ 110 ಅಥವಾ 120 ರನ್ ಗಳಿಸಿದ್ದರು. ನನಗೆ ನಿಜವಾಗಿಯೂ ನೆನಪಿಲ್ಲ. ಆದರೆ, ಅಲ್ಲಿಂದ 16 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162ಕ್ಕೆ ಬೌಲರ್‌ಗಳು ಕರೆತಂದರು' ಎಂದು ಪಂದ್ಯದ ನಂತರ MI ಸ್ಟ್ಯಾಂಡ್-ಇನ್ ನಾಯಕ ಸೂರ್ಯ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕ್ಷುಲ್ಲಕ ರಾಜಕೀಯ ಬಿಡಿ': TMC ಸೋಲು ಸಂಭ್ರಮಿಸುತ್ತಿರುವವರಿಗೆ ರಾಹುಲ್ ಗಾಂಧಿ ಬುದ್ಧಿವಾದ!

ಮತ್ತೆ ಭುಗಿಲೆದ್ದ ಸಂಘರ್ಷ: ಫ್ಯೂಜೈರಹ್ ಪೆಟ್ರೋಲಿಯಂ ಕೈಗಾರಿಕಾ ವಲಯದ ಮೇಲೆ ಇರಾನ್ ಕ್ಷಿಪಣಿ ದಾಳಿ, ಮೂವರು ಭಾರತೀಯರಿಗೆ ಗಾಯ, ಭಾರತ ಖಂಡನೆ

Shocking: AAP ತೊರೆದು BJP ಸೇರಿದ ಸಂಸದರಿಗೆ ಕಿರುಕುಳ, ರಾಷ್ಟ್ರಪತಿಗಳ ಮೊರೆ ಹೋದ Raghav Chadha ಅಂಡ್ ಟೀಂ!

ಮುಸ್ಲಿಮರ ಮತ ಹಿಜಾಬ್ ಧರಿಸುವ ಮಮತಾ ಗೆ ಹೋಗಿವೆ, ನಾನು ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ: ಬಿಜೆಪಿ ನಾಯಕ ಸುವೇಂದು ಅಧಿಕಾರಿ!

ಬೆಂಗಳೂರು: ಕಾಲೇಜ್ ವಿದ್ಯಾರ್ಥಿಗಳೇ ಟಾರ್ಗೆಟ್, ಆರು ಮಂದಿ ಡ್ರಗ್ ಡೀಲರ್ ಬಂಧನ!

SCROLL FOR NEXT