ವೈಭವ್ ಸೂರ್ಯವಂಶಿ 
ಕ್ರಿಕೆಟ್

ಸಚಿನ್, ಕೊಹ್ಲಿಯಂತಹ ದಿಗ್ಗಜರ ಸಾಲಿಗೆ ಸೇರಿದ ವೈಭವ್ ಸೂರ್ಯವಂಶಿ: ಹೊಸ ಬ್ಯಾಟ್; ಪ್ರಾಯೋಜಕರು ಯಾರು ಗೊತ್ತಾ?

ರಾಜಸ್ಥಾನ್ ರಾಯಲ್ಸ್ ತಂಡದ ಈ ಹದಿಹರೆಯದ ಆಟಗಾರ, ಇಷ್ಟು ಚಿಕ್ಕ ವಯಸ್ಸಿನಲ್ಲಿ ತಮ್ಮ ನಿರ್ಭೀತ ಬ್ಯಾಟಿಂಗ್ ಮತ್ತು ದಾಖಲೆ ಮುರಿಯುವ ಇನ್ನಿಂಗ್ಸ್‌ನೊಂದಿಗೆ IPL 2026 ರಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

IPL 2026ರಲ್ಲಿ ಸ್ಫೋಟಕ ಬ್ಯಾಟಿಂಗ್ ನಿಂದ ಭಾರೀ ಸದ್ದು ಮಾಡುತ್ತಿರುವ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರು ಶೀಘ್ರದಲ್ಲೇ ತಮ್ಮ ಬ್ಯಾಟ್ ಅನ್ನು ಬದಲಾಯಿಸುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರ ಸಾಲಿಗೆ ಸೇರಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಈ ಹದಿಹರೆಯದ ಆಟಗಾರ, ಇಷ್ಟು ಚಿಕ್ಕ ವಯಸ್ಸಿನಲ್ಲಿ ತಮ್ಮ ನಿರ್ಭೀತ ಬ್ಯಾಟಿಂಗ್ ಮತ್ತು ದಾಖಲೆ ಮುರಿಯುವ ಇನ್ನಿಂಗ್ಸ್‌ನೊಂದಿಗೆ IPL 2026 ರಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

ಪ್ರಸ್ತುತ ವೈಭವ್ ಸೂರ್ಯವಂಶಿ ಅವರು ಬಳಸುತ್ತಿರುವ ಬ್ಯಾಟ್‌ಗೆ ಈಗ ಎಸ್‌ಎಸ್(ಸರೀನ್ ಸ್ಪೋರ್ಟ್ಸ್) ಪ್ರಾಯೋಜಕತ್ವ ವಹಿಸಿದೆ.

ಆದರೆ ಮೂಲಗಳ ಪ್ರಕಾರ, ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾದ ಎಂಆರ್‌ಎಫ್(ಮದ್ರಾಸ್ ರಬ್ಬರ್ ಫ್ಯಾಕ್ಟರಿ) ಈಗ ವೈಭವ್ ಸೂರ್ಯವಂಶಿ ಬ್ಯಾಟ್‌ಗೆ ಪ್ರಾಯೋಜಕತ್ವ ನೀಡಲು ಸಜ್ಜಾಗಿದೆ.

ಇದು ನಿಜಕ್ಕೂ ವೈಭವ್ ಸೂರ್ಯವಂಶಿ ಅವರಿಗೆ ಬಹಳ ದೊಡ್ಡ ವಿಷಯವಾಗಿದೆ. ಏಕೆಂದರೆ ಈ ಐಕಾನಿಕ್ ಬ್ರ್ಯಾಂಡ್, ಕ್ರಿಕೆಟ್‌ನ ಕೆಲವು ಶ್ರೇಷ್ಠ ಆಟಗಾರರಿಗೆ ಮಾತ್ರ ಪ್ರಾಯೋಜಕತ್ವ ವಹಿಸಿದೆ.

1990 ಮತ್ತು 2000ದ ದಶಕದಲ್ಲಿ ಸಚಿನ್ ತೆಂಡೂಲ್ಕರ್ ಅವರ MRF ಬ್ಯಾಟ್ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಮಹತ್ವದ ವಸ್ತುಗಳಲ್ಲಿ ಒಂದಾಯಿತು. ನಂತರ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನಲ್ಲಿ ಕಂಪನಿಯ ದೊಡ್ಡ ಮುಖಗಳಲ್ಲಿ ಒಬ್ಬರಾಗಿದ್ದಾರೆ.

MRF ಹೆಚ್ಚುವರಿಯಾಗಿ ಬ್ರಿಯಾನ್ ಲಾರಾ, ರೋಹಿತ್ ಶರ್ಮಾ, ಎಬಿ ಡಿವಿಲಿಯರ್ಸ್ ಮತ್ತು ಶುಭಮನ್ ಗಿಲ್‌ರಂತಹ ತಾರೆಗಳನ್ನು ವಿವಿಧ ಯುಗಗಳಲ್ಲಿ ಪ್ರಾಯೋಜಿಸಿದೆ. ವೈಭವ್ ಸೂರ್ಯವಂಶಿ ಜೊತೆಗಿನ MRF ಒಪ್ಪಂದವು ವಾರ್ಷಿಕವಾಗಿ ಹಲವಾರು ಕೋಟಿ ಮೌಲ್ಯದ್ದಾಗಿರಬಹುದು ಎಂದು ವರದಿಗಳು ಹೇಳುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್ ಗೆ ಬೆಂಬಲ ನೀಡಲ್ಲ- ಎಡಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್; ನಾವು ಇನ್ನೂ ನಿರ್ಧರಿಸಿಲ್ಲ- ವಿಸಿಕೆ

ತಮಿಳುನಾಡು: TVK ಗೆ ಬಹುಮತದ ಕೊರತೆ; ಇಕ್ಕಟ್ಟಿನಲ್ಲಿ ವಿಜಯ್; ರಾಜ್ಯಪಾಲರ ನಡೆ ಏನು?

Video: ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೊಲೀಸ್ ಕಮಿಷನರ್; 3 ತಾಸಿನಲ್ಲಿ 40 ಕಾಮುಕರಿಂದ ಕಿರುಕುಳ!

'ಇರಾನ್ ಡೀಲ್ ತಿರಸ್ಕರಿಸಿದರೆ ಬಾಂಬ್ ದಾಳಿ ಆರಂಭ, ಇದು ಅತ್ಯಂತ ಭೀಕರವಾಗಿರುತ್ತದೆ': ಟ್ರಂಪ್ ಎಚ್ಚರಿಕೆ

ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್; ನಾಳೆಯೇ ಪ್ರಮಾಣವಚನ ಸಾಧ್ಯತೆ

SCROLL FOR NEXT