ಇಶಾನ್ ಕಿಶನ್ 
ಕ್ರಿಕೆಟ್

SRH ವಿರುದ್ಧದ ಪಂದ್ಯದಲ್ಲಿ ಮೂರ್ನಾಲ್ಕು ಕ್ಯಾಚ್ ಕೈಬಿಟ್ಟ PBKS: ಸೋತ ಪಂಜಾಬ್ ಕಿಂಗ್ಸ್‌ಗೆ ಟಾಂಟ್ ಕೊಟ್ಟ ಇಶಾನ್ ಕಿಶನ್, ಪೋಸ್ಟ್ ವೈರಲ್!

ಎಂಟನೇ ಓವರ್‌ನಲ್ಲಿ ಇಶಾನ್ ಕಿಶನ್ 9 ರನ್ ಗಳಿಸಿದ್ದಾಗ ಅವರ ಕ್ಯಾಚ್‌ಅನ್ನು ಕೂಪರ್ ಕೊನೋಲಿ ಕೈಬಿಟ್ಟರು ಮತ್ತು ಮುಂದಿನ ಓವರ್‌ನಲ್ಲಿ ಶಶಾಂಕ್ ಸಿಂಗ್ ಯುಜ್ವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಹೆನ್ರಿಕ್ ಕ್ಲಾಸೆನ್ ಅವರ ಕ್ಯಾಚ್ ಬಿಟ್ಟರು.

ಬುಧವಾರ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ 33 ರನ್‌ಗಳ ಅಂತರದಿಂದ ಸೋತ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಎಸ್ಆರ್‌ಎಚ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಟೀಕಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಇದು ಸತತ ಮೂರನೇ ಸೋಲಾಗಿದ್ದು, ಇದರ ಪರಿಣಾಮವಾಗಿ, ಐಪಿಎಲ್ ಅಂಕಪಟ್ಟಿಯಿಂದ ಕೆಳಗಿಳಿದಿದೆ ಮತ್ತು ಎಸ್‌ಆರ್‌ಎಚ್ ಅಗ್ರ ಸ್ಥಾನ ಪಡೆದಿದೆ.

ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 235 ರನ್ ಗಳಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ, ಪಿಬಿಕೆಎಸ್‌ನ ತಂಡದ ಕಳಪೆ ಫೀಲ್ಡಿಂಗ್ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿತು. ಇಶಾನ್ ಕಿಶನ್ ಅವರೇ ಸ್ವತಃ ಮೂರು ಲೈಫ್‌ಲೈನ್‌ಗಳನ್ನು ಪಡೆದರು. ಅವರ ಬ್ಯಾಟಿಂಗ್ ವೇಳೆ ಎರಡು ಕ್ಯಾಚ್‌ಗಳನ್ನು ಕೈಬಿಡಲಾಯಿತು ಮತ್ತು ಸ್ಟಂಪಿಂಗ್ ಅವಕಾಶದಿಂದಲೂ ಪಾರಾದರು. ಬಳಿಕ ಹೆನ್ರಿಕ್ ಕ್ಲಾಸೆನ್ ಅವರ ಕ್ಯಾಚನ್ನು ಸಹ ಕೈಬಿಡಲಾಯಿತು. ಬಳಿಕ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕಗಳನ್ನು ಗಳಿಸಿದರು ಮತ್ತು ಪಿಬಿಕೆಎಸ್‌ನ ಕೂಪರ್ ಕೊನೋಲಿ ಅವರ ಅಜೇಯ ಶತಕವೂ ವ್ಯರ್ಥವಾಯಿತು.

ಪಂದ್ಯದ ನಂತರ, ಕಿಶನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಕ್ಯಾಚ್ ಮಿ ಇಫ್ ಯು ಕೆನ್' ಎಂಬ ಶೀರ್ಷಿಕೆಯೊಂದಿಗೆ ಪಂದ್ಯದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈಮಧ್ಯೆ, ಸೋಲಿನ ನಂತರ ಫೀಲ್ಡರ್‌ಗಳು ಕೈಬಿಟ್ಟ ಕ್ಯಾಚ್‌ಗಳಿಗೆ ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ ವಿಷಾದ ವ್ಯಕ್ತಪಡಿಸಿದರು.

ಎಂಟನೇ ಓವರ್‌ನಲ್ಲಿ ಇಶಾನ್ ಕಿಶನ್ 9 ರನ್ ಗಳಿಸಿದ್ದಾಗ ಅವರ ಕ್ಯಾಚ್‌ಅನ್ನು ಕೂಪರ್ ಕೊನೋಲಿ ಕೈಬಿಟ್ಟರು ಮತ್ತು ಮುಂದಿನ ಓವರ್‌ನಲ್ಲಿ ಶಶಾಂಕ್ ಸಿಂಗ್ ಯುಜ್ವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಮಾಡುವ ಅವಕಾಶವನ್ನು ಕೈಬಿಟ್ಟರು.

11ನೇ ಓವರ್‌ನಲ್ಲಿ ಅವರು 18 ರನ್ ಗಳಿಸಿದ್ದಾಗ ಮತ್ತೆ ಲಾಕಿ ಫರ್ಗುಸನ್ ಕ್ಯಾಚ್ ಕೈಬಿಟ್ಟರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಮಗೆ ದೊರೆತ ಲೈಫ್‌ಲೈನ್‌ಗಳನ್ನು ಸದುಪಯೋಗಪಡಿಸಿಕೊಂಡರು. ಕ್ಲಾಸೆನ್ 43 ಎಸೆತಗಳಲ್ಲಿ 69 ರನ್ ಗಳಿಸಿದರು ಮತ್ತು ಕಿಶನ್ 32 ಎಸೆತಗಳಲ್ಲಿ 55 ರನ್ ಗಳಿಸಿದರು. ಪಿಬಿಕೆಎಸ್ ಕೈಬಿಟ್ಟ ಅವಕಾಶಗಳು ದುಬಾರಿಯಾಗಿ ಪರಿಣಮಿಸಿದವು.

ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, ಕಳಪೆ ಫೀಲ್ಡಿಂಗ್, ವಿಶೇಷವಾಗಿ ಆರಂಭದಲ್ಲಿ ಕೈಬಿಟ್ಟ ಕ್ಯಾಚ್‌ಗಳಿಗೆ ತಮ್ಮ ತಂಡವು ಬೆಲೆ ತೆರಬೇಕಾಯಿತು. ಏಕೆಂದರೆ, ಪಿಚ್ ನಿಧಾನಗೊಂಡು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿತು ಎಂದರು.

ಕೂಪರ್ ಕೊನೋಲಿ ಒತ್ತಡದಲ್ಲಿ ಅದ್ಭುತ ಇನಿಂಗ್ಸ್ ಆಡಿದರು ಮತ್ತು ಯುಜ್ವೇಂದ್ರ ಚಾಹಲ್ ಅವರ ನಿರ್ಭೀತ ಬೌಲಿಂಗ್ ಉತ್ತಮವಾಗಿತ್ತು. ಪಿಬಿಕೆಎಸ್ ಆವೃತ್ತಿಯನ್ನು ಚೆನ್ನಾಗಿ ಪ್ರಾರಂಭಿಸಿತು. ಆದರೆ, ಮೊಮೆಂಟಮ್ ಕಾಯ್ದುಕೊಳ್ಳುವಲ್ಲಿ ಸ್ಥಿರತೆ ಮತ್ತು ಫೀಲ್ಡಿಂಗ್ ಗುಣಮಟ್ಟವನ್ನು ಸುಧಾರಿಸುವ ಅಗತ್ಯವಿದೆ ಎಂದು ಅಯ್ಯರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಂಡಿಟ್ಟು ಸುವೇಂದು ಅಧಿಕಾರಿ ಆಪ್ತನ ಹತ್ಯೆ: CCTV ಪರಿಶೀಲನೆ; ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ, ಉತ್ತರ 24 ಪರಗಣದಲ್ಲಿ ಪರಿಸ್ಥಿತಿ ಉದ್ವಿಗ್ನತೆ

Operation Sindoorಗೆ 1 ವರ್ಷ: 'ಭಾರತ ಯಾವುದನ್ನೂ ಮರೆಯಲ್ಲ-ಯಾರನ್ನೂ ಕ್ಷಮಿಸಲ್ಲ'; ಶತ್ರುರಾಷ್ಟ್ರಕ್ಕೆ ಕಠಿಣ ಸಂದೇಶ ರವಾನಿಸಿದ ಭಾರತೀಯ ಸೇನೆ

TVK ವಿಜಯ್ ಗೆ ಮತ್ತೊಂದು ಹಿನ್ನಡೆ: ರಾತ್ರೋರಾತ್ರಿ ದಳಪತಿಗೆ ನೀಡಿದ್ದ ಭದ್ರತೆ ವಾಪಸ್!

ಹಾರ್ಮುಜ್ ನೌಕಾ ದಿಗ್ಬಂಧನ ಉಲ್ಲಂಘನೆ ಆರೋಪ; ಇರಾನ್ ಹಡಗಿನ ಮೇಲೆ ದಾಳಿ, ಅಮೆರಿಕಾ-ಇರಾನ್ ಸಂಘರ್ಷ ತೀವ್ರ..!

'ಜಪ್ಪಯ್ಯ ಅಂದರೂ ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ, ಬೇಕಾದರೆ ಕೇಂದ್ರ ಸರ್ಕಾರವೇ ನನ್ನನ್ನು ವಜಾ ಮಾಡಲಿ': ಮಮತಾ ಬ್ಯಾನರ್ಜಿ

SCROLL FOR NEXT