ಸಿಎಸ್‌ಕೆ ಬ್ಯಾಟರ್‌ ಅನ್ನು ಔಟ್ ಮಾಡಿದ ನಂತರ ಚೀಟಿ ಸಂಭ್ರಮಾಚರಣೆ ಮಾಡಿದ ಆಕಾಶ್ ಸಿಂಗ್ 
ಕ್ರಿಕೆಟ್

IPL 2026: 'ಅಸಭ್ಯ' ಚೀಟಿ ಸಂಭ್ರಮಾಚರಣೆಗಳನ್ನು ನಿಷೇಧಿಸುವಂತೆ BCCIಗೆ CSK ಮಾಜಿ ಆಟಗಾರ ಅಂಬಟಿ ರಾಯುಡು ಒತ್ತಾಯ

ಐಪಿಎಲ್‌ನಲ್ಲಿ ಆಟಗಾರನೊಬ್ಬ ಚೀಟಿ ಸಂಭ್ರಮಾಚರಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅಭಿಷೇಕ್ ಶರ್ಮಾ ಶತಕ ಗಳಿಸಿದ ನಂತರ ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದ್ದರು.

ಐಪಿಎಲ್‌ 2026ರಲ್ಲಿ ವಿವಿಧ ಫ್ರಾಂಚೈಸಿಗಳ ಆಟಗಾರರಿಂದ 'ಚೀಟಿ ಸಂಭ್ರಮಾಚರಣೆಗಳು' ಹೆಚ್ಚಾಗುತ್ತಿರುವುದು ಅನೇಕ ಮಾಜಿ ಕ್ರಿಕೆಟಿಗರಿಗೆ ಇಷ್ಟವಾಗಿಲ್ಲ. ಶುಕ್ರವಾರ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಎಲ್‌ಎಸ್‌ಜಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ವೇಳೆ ಆಕಾಶ್ ಸಿಂಗ್ ಅವರು ತಮ್ಮ ಜೇಬಿನಿಂದ ಒಂದು ಚೀಟಿಯನ್ನು ಹೊರತೆಗೆದು ಸಂಭ್ರಮಿಸಿದರು. ಇಷ್ಟೇ ಆಗಿದ್ದರೆ ಎಲ್ಲವೂ ಸರಿ ಎನಿಸುತ್ತಿತ್ತೇನೋ. ಆದರೆ, ಪ್ರತಿ ಬಾರಿ ತಾವು ವಿಕೆಟ್ ಪಡೆದಾಗಲೆಲ್ಲ ಅವರು ಚೀಟಿಯನ್ನು ಹೊರತೆಗೆದು ಸಂಭ್ರಮಿಸಿದರು. ಇದು ಸಿಎಸ್‌ಕೆ ಮಾಜಿ ಆಟಗಾರ ಅಂಬಟಿ ರಾಯುಡು ಅವರನ್ನು ಕೆರಳಿಸಿತು. ಐಪಿಎಲ್‌ನಲ್ಲಿ ಇಂತಹ ಆಚರಣೆಗಳನ್ನು ನಿಷೇಧಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಭಾರತೀಯ ಮಾಜಿ ಕ್ರಿಕೆಟಿಗ ಒತ್ತಾಯಿಸಿದ್ದಾರೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋದ 'ಟಿ20 ಟೈಮ್‌ಔಟ್ ಶೋ'ದಲ್ಲಿ ಮಾತನಾಡಿದ ರಾಯುಡು, ವಿಕೆಟ್ ಪಡೆದ ನಂತರ ಆಕಾಶ್ ತನ್ನ ಜೇಬಿನಿಂದ ಚೀಟಿಯನ್ನು ಹೊರತೆಗೆದು ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದು ತಮಾಷೆ ಮತ್ತು ಅಸಂಬದ್ಧ. ಯಾವುದೇ ಆಟಗಾರರು ಚೀಟಿಯನ್ನು ಮೈದಾನಕ್ಕೆ ತರಲು ಅವಕಾಶವಿದೆ ಎಂದು ಅವರು ಭಾವಿಸುವುದಿಲ್ಲ. ಚೀಟಿ ಸಂಭ್ರಮಾಚರಣೆ ಮಾಡಿದ ಮತ್ತು ಹಾಗೆ ಮಾಡಲು ಪ್ರೋತ್ಸಾಹಿಸಿದ ತನ್ನ ಗೆಳೆಯರನ್ನು ಸಹ ರಾಯುಡು ಟೀಕಿಸಿದರು.

'ಯಾವ ಹಂತದಲ್ಲಿ ಅವರು 'ಇದು ಅದ್ಭುತವಾಗಿರುತ್ತದೆ, ನಾನು ಇದನ್ನು ಟಿವಿಯಲ್ಲಿ ತೋರಿಸುತ್ತೇನೆ, ಎಲ್ಲರೂ ನನ್ನನ್ನು ಕೂಲ್ ಎಂದು ಭಾವಿಸುತ್ತಾರೆ' ಎಂದು ಯೋಚಿಸಿದರು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಯಾರು ಅವರಿಗೆ ಅದಕ್ಕೆ ಬೆಂಬಲ ನೀಡಿದರು ಮತ್ತು ಅದು ಉತ್ತಮ ಐಡಿಯಾ ಎಂದು ಹೇಳಿದರು ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಅದು ಅವನ ಅಭಿವ್ಯಕ್ತಿ ಎಂದು ನಾನು ಭಾವಿಸುತ್ತೇನೆ, ಇದು ಬಹಳಷ್ಟು ಜನರಿಗೆ ಇಷ್ಟವಾಗದಿರಬಹುದು, ಆದರೆ ಇದು ಒಂದು ರೀತಿಯ ತಮಾಷೆ ಮತ್ತು ಸ್ವಲ್ಪ ಅಸಂಬದ್ಧವಾಗಿದೆ. ಅವರು ಈ ಚೀಟಿ ವ್ಯವಹಾರವನ್ನು ನಿಷೇಧಿಸಬೇಕು ಎಂದು ನಾನು ಭಾವಿಸುತ್ತೇನೆ' ಎಂದು ರಾಯುಡು ಹೇಳಿದರು.

ಐಪಿಎಲ್ 2026ರಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದ ಎಲ್‌ಎಸ್‌ಜಿ ವೇಗಿ ಆಕಾಶ್ ಸಿಂಗ್, 4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಪಡೆದು ಕೇವಲ 26 ರನ್‌ಗಳನ್ನು ಬಿಟ್ಟುಕೊಟ್ಟರು. ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಉರ್ವಿಲ್ ಪಟೇಲ್ ಅವರಂತಹ ಆಟಗಾರರನ್ನು ಒಳಗೊಂಡ ಸಿಎಸ್‌ಕೆಯ ಅಗ್ರ ಕ್ರಮಾಂಕದ ವಿಕೆಟ್ ಪಡೆಯುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ಆದಾಗ್ಯೂ, ರಾಯುಡು ಮಾತ್ರವಲ್ಲ, ನ್ಯೂಜಿಲೆಂಡ್‌ನ ಮಾಜಿ ತಾರೆ ಮಿಚೆಲ್ ಮೆಕ್‌ಲೆಂಘನ್ ಸೇರಿದಂತೆ ಇತರ ಮಾಜಿ ಕ್ರಿಕೆಟಿಗರು ಈ ಆಚರಣೆಯ ಅಗತ್ಯವಿಲ್ಲ ಎಂದರು.

'ಈ ಪೀಳಿಗೆಯ ಕೆಲವರು ಐಪಿಎಲ್‌ನಲ್ಲಿ ಮೊದಲ ಪಂದ್ಯದಲ್ಲೇ ನೈಜ ಪ್ರದರ್ಶನವನ್ನು ನೋಡುತ್ತಿರುವುದನ್ನು ನೋಡಿ ನಾನು ನಿಜಕ್ಕೂ ಆಶ್ಚರ್ಯಚಕಿತನಾಗಿದ್ದೇನೆ. ಆದರೆ, ನೀವು ಈಗಷ್ಟೇ ವೇದಿಕೆಗೆ ಬಂದಿದ್ದೀರಿ, ನಮಗೆ ನಿಮ್ಮ ಹೆಸರು ಮಾತ್ರ ತಿಳಿದಿದೆ' ಎಂದು ಮೆಕ್‌ಲೆಂಘನ್ ಹೇಳಿದರು.

ಐಪಿಎಲ್‌ನಲ್ಲಿ ಆಟಗಾರನೊಬ್ಬ ಚೀಟಿ ಸಂಭ್ರಮಾಚರಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅಭಿಷೇಕ್ ಶರ್ಮಾ ಶತಕ ಗಳಿಸಿದ ನಂತರ ಎಸ್‌ಆರ್‌ಎಚ್ ಅಭಿಮಾನಿಗಳಿಗೆ ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದ್ದರು. ಈ ವರ್ಷ, ಸಿಎಸ್‌ಕೆಯ ಉರ್ವಿಲ್ ಪಟೇಲ್ ಕೂಡ ಐಪಿಎಲ್‌ನಲ್ಲಿ ಜಂಟಿಯಾಗಿ ವೇಗದ ಅರ್ಧಶತಕ ಗಳಿಸಿದ ನಂತರ ತನ್ನ ತಂದೆಗೆ ಸಂದೇಶದೊಂದಿಗೆ ಚೀಟಿ ಪ್ರದರ್ಶಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ, ಕೆಜಿಗೆ 1 ರೂ. ಹೆಚ್ಚಳ..!

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಗುರಿಯಾಗಿಸಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು: ವಿಶ್ವಸಂಸ್ಥೆಯಲ್ಲಿ ಭಾರತ ಖಂಡನೆ

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ಅಗ್ನಿ ಅವಘಡ: ಅದೃಷ್ಟವಶಾತ್‌ 68 ಪ್ರಯಾಣಿಕರು ಪಾರು..!

ಹಿಂದೂ ಮಹಿಳೆ ಪರ ಸಹಾಯ ಕೋರಿದ ಮುಸ್ಲಿಂ ಮಹಿಳೆಯರು: ಇದು ನಮ್ಮ ಭಾರತ, ಇದನ್ನು ಉಡುಪಿಯ ಬಿಜೆಪಿಯವರು ನೋಡಿ ಕಲೀಬೇಕು ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್-Video

SCROLL FOR NEXT