ಹಾರ್ದಿಕ್ ಪಾಂಡ್ಯ Photo | BCCI/IPL
ಕ್ರಿಕೆಟ್

‘ಹಾರ್ದಿಕ್ ಪಾಂಡ್ಯಗೆ ಅತ್ಯುತ್ತಮ ಅವಕಾಶ ನೀಡಿದ್ದೇವೆ, ಎಲ್ಲವನ್ನೂ ಪ್ರಯತ್ನಿಸಲಾಗಿದೆ’: ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್!

ಮುಂದಿನ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಆದರೆ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (MI) 9ನೇ ಸ್ಥಾನ ಪಡೆದ ನಂತರ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಭವಿಷ್ಯವು ಇದೀಗ ಅಪಾಯದಲ್ಲಿದೆ. ಹಾರ್ದಿಕ್ ತಮ್ಮ ತಂಡದಿಂದ ಅತ್ಯುತ್ತಮವಾದದ್ದನ್ನು ಪಡೆಯುವಲ್ಲಿ ವಿಫಲರಾಗಿ ತಂಡದ ಆಡಳಿತವನ್ನು ನಿರಾಸೆಗೊಳಿಸಿದ್ದಲ್ಲದೆ, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಆರ್‌ರೌಂಡರ್‌ ಆಗಿ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. ಭಾನುವಾರ ನಡೆದ ತಂಡದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಸೋಲಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್, ಹಾರ್ದಿಕ್ ಅವರ ನಾಯಕತ್ವದ ಅವಧಿ ‘ಅಂದುಕೊಂಡ ಹಾಗೆ ಹೋಗಿಲ್ಲ’. ಫ್ರಾಂಚೈಸಿ ನಿರೀಕ್ಷಿಸಿದ್ದನ್ನು ಮಾಡುವಲ್ಲಿ ಹಾರ್ದಿಕ್ ಮೂಡಿಸಿದ್ದಾರೆ ಎಂದರು.

‘ನಾಯಕತ್ವದ ದೃಷ್ಟಿಕೋನದಿಂದ ನೋಡುವುದಾದರೆ, ಹೌದು, ಹಾರ್ದಿಕ್ ಅವರು ಬಯಸಿದಷ್ಟು ಚೆನ್ನಾಗಿ ಹೋಗಿಲ್ಲ’ ಎಂದು ಪಂದ್ಯದ ನಂತರ ಪೊಲಾರ್ಡ್ ಸುದ್ದಿಗಾರರಿಗೆ ತಿಳಿಸಿದರು.

‘ಒಬ್ಬ ನಿರ್ವಹಣಾ ಸಿಬ್ಬಂದಿಯಾಗಿ ನಾವು ಬಯಸಿದಂತೆ ಅದು ನಡೆದಿಲ್ಲದಿರಬಹುದು. ಆದರೆ, ಒಂದು ವಿಷಯ ನೀವು ತಿಳಿದುಕೊಳ್ಳಬೇಕು. ಅವರಿಗೆ ಫ್ರಾಂಚೈಸಿಯನ್ನು ಮುನ್ನಡೆಸಲು, ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ತಮ ಅವಕಾಶವನ್ನು ನೀಡುವ ಮೂಲ ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ’ ಇದು ಮುಂಬೈ ಇಂಡಿಯನ್ಸ್ ತಂಡದ ಸಾಮೂಹಿಕ ವೈಫಲ್ಯ ಎಂದು ಪೊಲಾರ್ಡ್ ಹೇಳಿದರು.

‘ಯಾರೂ ಇಲ್ಲಿ ಕುಳಿತು ತಂಡದ ಮೇಲೆ ಆರೋಪ ಹೊರಿಸುವುದಿಲ್ಲ. ನೀವು ಸೋತಾಗ, ವಿಶೇಷವಾಗಿ, ನೀವು ಅದನ್ನು ಸಾಮೂಹಿಕ ದೃಷ್ಟಿಕೋನದಿಂದ ನೋಡಬೇಕು. ನೀವು ಕೆಲವನ್ನು ಗೆಲ್ಲುತ್ತೀರಿ, ಕೆಲವನ್ನು ಕಳೆದುಕೊಳ್ಳುತ್ತೀರಿ. ಆದರೆ, ಕೊನೆಯಲ್ಲಿ, ನಾನು ಕೆಲವು ವಿಷಯಗಳನ್ನು ಪ್ರಶ್ನಿಸುವುದಿಲ್ಲ’ ಎಂದು ಅವರು ಹೇಳಿದರು.

‘ಅವರು (ಪಾಂಡ್ಯ) ಪ್ರಯತ್ನಿಸುತ್ತಿದ್ದರು; ನಾವೆಲ್ಲರೂ ಪ್ರಯತ್ನಿಸುತ್ತಿದ್ದೆವು, ಆದರೆ ಅದು ನಮಗೆ ಕೆಲಸ ಮಾಡಲಿಲ್ಲ. ನೀವು ಕುಳಿತುಕೊಂಡು ಮಾತನಾಡುವಿರಿ ಮತ್ತು ಯಾವುದು ಉತ್ತಮ ಎಂದು ನೋಡುವಿರಿ. ಆದರೆ, ಏನಾಗಲಿದೆ ಎಂದು ಎಂದಿಗೂ ತಿಳಿದಿರುವುದಿಲ್ಲ. ಈ ಸಮಯದಲ್ಲಿ ನಾವು ನಮ್ಮ ವೈಫಲ್ಯಗಳನ್ನು ಸರಿಪಡಿಸಿಕೊಳ್ಳೋಣ ಮತ್ತು ಮುಂದಿನ 12 ತಿಂಗಳಲ್ಲಿ ಬಲವಾಗಿ ಚೇತರಿಸಿಕೊಳ್ಳೋಣ’ ಎಂದು ಪೊಲಾರ್ಡ್ ಹೇಳಿದರು.

ತಂಡದಲ್ಲಿರುವ ಹಿರಿಯ ಆಟಗಾರರೊಂದಿಗೆ ಮುಂಬೈ ತಂಡವು ರೀಬೂಟ್ ಮಾಡಬೇಕೇ ಎಂದು ಕೇಳಿದಾಗ, ಮುಂದಿನ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಆದರೆ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಇದೀಗ, ಅದರ ಬಗ್ಗೆ ಮಾತನಾಡಲು ಸಮಯ ಮತ್ತು ಸ್ಥಳವಲ್ಲ ಎಂದರು.

‘ಇವೆಲ್ಲವೂ ಭಾವನಾತ್ಮಕ ನಿರ್ಧಾರಗಳು ಮತ್ತು ಅಗತ್ಯವಿರುವ ಪ್ರತಿಯೊಂದು ಅಂಶದ ಬಗ್ಗೆ ಯೋಚಿಸುವುದು. ಪ್ರತಿಯೊಬ್ಬರೂ ಕುಳಿತುಕೊಂಡು ನಿಜವಾಗಿಯೂ ಎಲ್ಲಿ ತಪ್ಪಾಯಿತು ಎಂಬುದರ ಕುರಿತು ನ್ಯಾಯಯುತವಾದ ಮೌಲ್ಯಮಾಪನ ಮಾಡಿಕೊಳ್ಳಲು ಸಮಯ ಮತ್ತು ಸ್ಥಳಾವಕಾಶದ ಅಗತ್ಯವಿದೆ. ಆಗಲೇ ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆಯು ಬರುತ್ತದೆ. ನೀವು ಈಗ ಇಲ್ಲಿ ಕುಳಿತು ನೀವು ಇದನ್ನು ಮಾಡಬೇಕು ಎಂದು ಹೇಳಿದರೆ, ಅದು ನಿರ್ವಹಣಾ ದೃಷ್ಟಿಕೋನದಿಂದ ಬೇಜವಾಬ್ದಾರಿಯುತವಾಗಿರುತ್ತದೆ’ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

ನಿತಿನ್ ನಬೀನ್ ಭೇಟಿ ಬಳಿಕ BJP ನಾಯಕತ್ವ ಚರ್ಚೆ ಮತ್ತೆ ಮುನ್ನೆಲೆಗೆ: ವಿಜಯೇಂದ್ರ ಭವಿಷ್ಯ ಕುರಿತು ಹೆಚ್ಚಿದ ಕುತೂಹಲ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರ..!

ಬೆಂಗಳೂರು ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ಗಳೇ ಕಾರಣ? ‘Heat island’ ಪರಿಣಾಮ ಕುರಿತು ತಜ್ಞರ ಗಂಭೀರ ಎಚ್ಚರಿಕೆ..!

SIR ಹೆಸರಿನಲ್ಲಿ ಮತದಾರರ ಹೆಸರು ಡಿಲೀಟ್ ಆರೋಪ; war room ಸ್ಥಾಪಿಸಿದ ಕಾಂಗ್ರೆಸ್, ಎಚ್ಚರ ವಹಿಸುವಂತೆ 'ಕೈ' ನಾಯಕರಿಗೆ ಸಿದ್ದು-ಡಿಕೆಶಿ ಸೂಚನೆ

ಕೇದಾರನಾಥಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ದೇವಸ್ಥಾನದ ಹಿಂಭಾಗದಲ್ಲಿರುವ ಈ ಅದ್ಭುತ ಜಾಗಗಳನ್ನ ಮಿಸ್ ಮಾಡ್ಬೇಡಿ..!

SCROLL FOR NEXT