ಚಾಮರಾಜನಗರದ ಹರದನಹಳ್ಳಿಯಲ್ಲಿ ಸಿಕ್ಕಿದ ಚಿನ್ನದ ನಾಣ್ಯಗಳು 
ಜಿಲ್ಲಾ ಸುದ್ದಿ

ಚಿನ್ನದ ನಾಣ್ಯ ಪ್ರಕರಣ: ಆರೋಪಿಗಳಿಂದ ಮತ್ತೆ 636 ಚಿನ್ನದ ನಾಣ್ಯಗಳು ವಶಕ್ಕೆ

ಶೌಚಾಲಯಕ್ಕೆ ಗುಂಡಿ ಅಗೆಯಬೇಕಾದರೆ ಕಾರ್ಮಿಕರಿಗೆ ಸಿಕ್ಕಿದ್ದು 93 ಚಿನ್ನದ ನಾಣ್ಯಗಳಲ್ಲ...

ಚಾಮರಾಜನಗರ: ಶೌಚಾಲಯಕ್ಕೆ ಗುಂಡಿ ಅಗೆಯಬೇಕಾದರೆ ಕಾರ್ಮಿಕರಿಗೆ ಸಿಕ್ಕಿದ್ದು 93 ಚಿನ್ನದ ನಾಣ್ಯಗಳಲ್ಲ, ಬರೋಬ್ಬರಿ 636 ನಾಣ್ಯಗಳು.

ಡಿಸೆಂಬರ್ 1ರಂದು ಚಾಮರಾಜನಗರದ ಹರದನಹಳ್ಳಿಯಲ್ಲಿ ಸಿದ್ದಿಕಿ ಎಂಬುವವರ ಜಾಗದಲ್ಲಿ ಶೌಚಾಲಯಕ್ಕೆ ಗುಂಡಿ ಅಗೆಯಬೇಕಾದರೆ, ಕಾರ್ಮಿಕರಿಗೆ 93 ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿತ್ತು.

ಆದರೆ, ಗುಂಡಿ ಅಗೆದ ಕಾರ್ಮಿಕರಿಗೆ ಸಿಕ್ಕಿದ್ದು 93 ಚಿನ್ನದ ನಾಣ್ಯಗಳಲ್ಲ. ಸಿಕ್ಕಿದ್ದು 636 ಚಿನ್ನದ ನಾಣ್ಯಗಳು. ಕಾರ್ಮಿಕರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸಿಕ್ಕಿದ್ದು 636 ಚಿನ್ನದ ನಾಣ್ಯಗಳೆಂದು ಬಾಯ್ಬಿಟ್ಟಿದ್ದಾರೆ.

ಚಿನ್ನದ ನಾಣ್ಯಗಳು ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಚಿನ್ನದ ನಾಣ್ಯಗಳನ್ನು ಕಾರ್ಮಿಕರಿಂದ ವಶಕ್ಕೆ ಪಡೆದ ರಾಮಸಮುದ್ರ ಠಾಣೆ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಸುಂದರ್, ಕುಮಾರ್, ನಂಜುಂಡ ಮತ್ತು ಸುರೇಶ್ ಬಂಧಿತ ಆರೋಪಿಗಳು.

ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ನಾಣ್ಯಗಳನ್ನು ಕಳುಹಿಸಲಾಗಿತ್ತು. ಹೈದಾರಲಿ, ತಂಜಾವೂರಿನ ಮರಾಠ ಕಾಲದ ನಾಣ್ಯಗಳು ಪತ್ತೆಯಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ