ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಸ್ಮಶಾನಗಳಿಗೆ ೨೦ ಲಕ್ಷ: ಮೇಯರ್

ನಗರದ ಸ್ಮಶಾನಗಳು ಮತ್ತು ಚಿತಾಗಾರಗಳ ದಯನೀಯ

ಬೆಂಗಳೂರು: ನಗರದ ಸ್ಮಶಾನಗಳು ಮತ್ತು ಚಿತಾಗಾರಗಳ ದಯನೀಯ ಸ್ಥಿತಿಯನ್ನು ಕಂಡು ಆಘಾತಗೊಂಡಿರುವ ಮೇಯರ್ ಶಾಂತಕುಮಾರಿ, ಇವುಗಳ ಸೌಕರ್ಯಗಳನ್ನು ಉತ್ತಮಪಡಿಸಲು ೨೦ ಲಕ್ಷ ನೀಡುವುದಾಗಿ ಮಂಗಳವಾರ ವಚನ ನೀಡಿದ್ದಾರೆ.

ಮೈಸೂರು ರಸ್ತೆ, ಹಳೇಗುಡ್ಡಹಳ್ಳಿ, ಜೈ ಭೀಮನಗರ ಮತ್ತು ಇತರ ಪ್ರದೇಶಗಳ ಸ್ಮಶಾನಗಳು ಮತ್ತು ಚಿತಾಗಾರಗಳನ್ನು ವೀಕ್ಷಿಸಿದ ಮೇಯರ್, ಇಲ್ಲಿ ಬೇಕಾದ ಮೂಲ ಸೌಕರ್ಯಗಳ ಪಟ್ಟಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಧಿಕಾರಿಗಳನ್ನು ಮತ್ತು ನಿರ್ವಹಣಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್, ಸ್ಮಶಾನಗಳಲ್ಲಿ ಮತ್ತು ಚಿತಾಗಾರಗಳಲ್ಲಿ ಸ್ವಚ್ಚತೆ ಕಾಪಾಡುವಂತೆ ಸೂಚಿಸಿದ್ದಾರೆ. ಹಾಗೆಯೇ ಸ್ಮಶಾನಗಳಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದಿರುವ ಕಳೆ ಮತ್ತು ಕುರುಚಲು ಗಿಡಗಳನ್ನು ಕೀಳುವಂತೆ ಕೂಡ ಸೂಚಿಸಿದ್ದಾರೆ ಎನುತ್ತದೆ ಬಿಬಿಎಂಪಿ ಪತ್ರಿಕಾ ಹೇಳಿಕೆ.

"ಒಬ್ಬ ಬದುಕಿದ್ದಾಗಲೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ, ಸತ್ತ ನಂತರವೂ ಅವರ ಆತ್ಮಕ್ಕೆ ಶಾಂತಿ ಸಿಗದಂತೆ ಮಾಡುತ್ತೀರಿ" ಎಂದಿದ್ದಾರೆ ಮೇಯರ್.

ಬನಶಂಕರಿಯ ಸ್ಮಶಾನದ ಸುತ್ತುಗೋಡೆಯ ಒಂದು ಪಾರ್ಶ್ವ ಕುಸಿದಿದ್ದು, ನೈರ್ಮಲ್ಯದ ಕೊರತೆಯೂ ಇದೆ. ಅಷ್ಟೇ ಅಲ್ಲದೆ, ವಿದ್ಯುತ್ ತೊಂದರೆ ಹಾಗೂ ನೀರಿನ ಪೂರೈಕೆ ಕೂಡ ಸಮರ್ಪಕವಾಗಿಲ್ಲ. ಗೋಡೆಯನ್ನು ಮರು ನಿರ್ಮಿಸಿ, ಅದಕ್ಕೆ ಗೇಟ್ ನಿರ್ಮಿಸಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT