ಜಿಲ್ಲಾ ಸುದ್ದಿ

ತೆರಿಯೂರಲ್ಲಿ ಎಂಜಿಲು ಎಲೆ ಹೊತ್ತ ಭಕ್ತರು!

Lakshmi R

ಪಾವಗಡ/ಮಧುಗಿರಿ: ಪಾವಗ ತಾಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸಂಪೂರ್ಣವಾಗಿ ಮಡೆಸ್ನಾನ ನಿಷೇಧವಾದರೆ, ಮಧುಗಿರಿ ತಾಲೂಕಿನ ತೆರಿಯೂರು ಗ್ರಾಮದ ಅನ್ನದಾನ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರು ವಿಪ್ರರ ಎಂಜಿಲು ಎಲೆಗಳನ್ನು ತಲೆ ಮೇಲೆ ಹೊತ್ತು ಹರಕೆ ತೀರಿಸಿದರು!

ಪ್ರತಿ ವರ್ಷ ಅನ್ನದಾನ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮಡೆ ಸ್ನಾನ ನಡೆಯುತ್ತಿತ್ತು. ಆದರೆ, ಈ ವರ್ಷ ನ್ಯಾಯಲಯದ ಆದೇಶದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಡೆಸ್ನಾನ ತಡೆಯುವಲ್ಲಿ ಯಶಸ್ವಿಯಾಯಿತು. ಆದರೂ, ವಿಪ್ರರು ಊಟ ಮಾಡಿದ ಅಡಿಕೆ ತಟ್ಟೆಗಳನ್ನು ಭಕ್ತರು ತಲೆ ಹೊತ್ತು ಹರಕೆ ತೀರಿಸಿದರು!

ಪ್ರತಿ ವರ್ಷ ಅನ್ನದಾನ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮಡೆ ಸ್ನಾನ ನಡೆಯುತ್ತಿತ್ತು. ಆದರೆ, ಈ ವರ್ಷ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಡೆಸ್ನಾನ ತಡೆಯುವಲ್ಲಿ ಯಶಸ್ವಿಯಾಯಿತು.

ಆದರೂ, ವಿಪ್ರರು ಊಟ ಮಾಡಿದ ಅಡಿಕೆ ತಟ್ಟೆಗಳನ್ನು ಭಕ್ತರು ತಲೆಯ ಮೇಲೆ ಹೊತ್ತು 3 ಬಾರಿ ದೇವಾಲಯದ ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು.

SCROLL FOR NEXT