ಪುಂಡಲೀಕ ಹಾಲಂಬಿ 
ಜಿಲ್ಲಾ ಸುದ್ದಿ

ನಾಡಗೀತೆಗೆ ಕತ್ತರಿ ಬೇಡ

ನಾಡಗೀತೆಗೆ ಯಾವುದೇ ರೀತಿಯ ಕತ್ತರಿ ಹಾಕದೆ ಯಥಾವತ್ ಹಾಡಬೇಕು, ಅಲ್ಲವಾದಲ್ಲಿ ಕುವೆಂಪು ಅವರಿಗೆ ಅವಮಾನ...

ಬೆಂಗಳೂರು: ನಾಡಗೀತೆಗೆ ಯಾವುದೇ ರೀತಿಯ ಕತ್ತರಿ ಹಾಕದೆ ಯಥಾವತ್ ಹಾಡಬೇಕು, ಅಲ್ಲವಾದಲ್ಲಿ ಕುವೆಂಪು ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಹಾಗಾಗಿ ಕತ್ತರಿ ಪ್ರಯೋಗ ಮಾಡದಂತೆ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಷ್ಟ್ರಗೀತೆಯ ಮಾದರಿಯಲ್ಲಿಯೇ ನಾಡಗೀತೆ ಹಾಡಬೇಕು. ಇದಕ್ಕೆ ಆಲಾಪನೆ ಸೇರಿಸಬಾರದು, ಆ, ಹಾ, ಹೋ ಎಂದು ಸಂಗೀತ ಸಂಯೋಜಿಸಿ ಹಾಡದೆ, ಕುವೆಂಪು ರಚಿಸಿರುವಂತೆಯೇ ಹಾಡಬೇಕು. ನಾಡಗೀತೆಯಾಗಿ ಮತ್ತು ರಾಜ್ಯಾದ್ಯಂತ ಏಕರೀತಿಯಲ್ಲಿ ಹಾಡಬೇಕು.  ನಾಡಗೀತೆಯನ್ನು ಯಥಾವತ್ತಾಗಿ ಹಾಡುವಂತೆ ಆದೇಶಿಸಬೇಕು. ಸರ್ಕಾರ ಈ ಬಗ್ಗೆ ಇಚ್ಛಾಶಕ್ತಿ ತೋರಬೇಕು. ಅದನ್ನು ಬಿಟ್ಟು ಅವರಿವರ ಸಮಿತಿ ಮಾಡಿದ ವರದಿ ಕೇಳುವುದು ಸರಿಯಲ್ಲ. ಈಗ ಕವಿ ಚನ್ನವೀರ ಕಣವಿ ಸಮಿತಿ ನೀಡಿದೆ ಎನ್ನಲಾದ ವರದಿಯನ್ನು ಜಾರಿ ಮಾಡಬಾರದು, ಇದು ಕಸಾಪ ನಿಲುವು ಎಂದರು.

ಹಿರಿಯ ನಾಗರಿಕರು ಮುಂತಾದವರು ಎದ್ದು ನಿಲ್ಲಲು ಸಾಧ್ಯವಾಗದಿದ್ದರೆ ಕುಳಿತೇ ಗೌರವ ನೀಡಲಿ. ಸಾಹಿತಿಗಳು, ಇತರರು ನಾಡಗೀತೆ ಮೊಟಕುಗೊಳಿಸಬೇಕೆಂದು ಸರ್ಕಾರಕ್ಕೆ ವರದಿ ನೀಡಿದ್ದಾರೆಂದು ಗೊತ್ತಾಗಿದೆ. ಚನ್ನವೀರ ಕಣವಿ ಸಮಿತಿ ವರದಿ ನಮ್ಮ ಕೈ ಸೇರಿಲ್ಲ. ಸರ್ಕಾರ ಈ ಬಗ್ಗೆ ನಮ್ಮ ಅಭಿಪ್ರಾಯವನ್ನೂ ಕೇಳುವುದಿಲ್ಲ. ಹೀಗಾಗಿ ಏನು ನೀಡಿದ್ದಾರೆಂದೇ ನಮಗೆ ತಿಳಿಯುವುದಿಲ್ಲ ಎಂದರು.









Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT