ವಿಶ್ವವಿಖ್ಯಾತ ಮೈಸೂರು ದಸರಾ 
ಜಿಲ್ಲಾ ಸುದ್ದಿ

ಸಿಎಂ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಚಿತ್ರ ನಗರಿ?

ಪರಂಪರೆ, ವೈಭವ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳಿಗೆ ಹೆಸರಾದ ಮೈಸೂರು ಒಂದು ಕಾಲದಲ್ಲಿ ಚಲನಚಿತ್ರೀಕರಣಕ್ಕೆ...

ಮೈಸೂರು: ಪರಂಪರೆ, ವೈಭವ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳಿಗೆ ಹೆಸರಾದ ಮೈಸೂರು ಒಂದು ಕಾಲದಲ್ಲಿ ಚಲನಚಿತ್ರೀಕರಣಕ್ಕೆ ಹೆಸರುವಾಸಿ. ಇನ್ನು ಮುಂದೆ ಕೂಡ ನಿರ್ದೇಶಕರು ಮೈಸೂರನ್ನು ಮತ್ತೆ ಅರಸಿ ಬರಬಹುದು, ಏಕೆಂದರೆ, ಮೈಸೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರ ನಗರಿಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯನವರು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಆಡಳಿತಕ್ಕೆ ಯೋಜನೆಗೆ ಪೂರಕವಾದ ಜಾಗವನ್ನು ಪತ್ತೆ ಹಚ್ಚಲು ಸೂಚಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ವರುಣಾದ ಹೇಮಾವು ಗ್ರಾಮದಲ್ಲಿ ೫೦೦ ಎಕರೆ ಜಾಗವನ್ನು ಜಿಲ್ಲಾ ಆಡಳಿತ ಗುರುತು ಮಾಡಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವ ಹೆಸರುಘಟ್ಟದಲ್ಲಿ ಈ ಹಿಂದೆ ಫಿಲ್ಮ್ ಸಿಟಿ ಸ್ಥಾಪಿಸಬೇಕು ಎನ್ನುವ ಪ್ರಸ್ತಾವಾನೆಗೆ ಸುಪ್ರೀಂ ಕೋರ್ಟ್ ಅಡ್ಡಿ ಮಾಡಿತ್ತು.

ಜಾಗವನ್ನು ಅಂತಿಮಗೊಳಿಸಲು ಖ್ಯಾತ ನಿರ್ದೇಶಕರು ಮತ್ತು ಚಲನಚಿತ್ರ ಕ್ಷೇತ್ರದ ಹಿರಿಯರ ಜೊತೆ ಜಿಲ್ಲಾಡಳಿತ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಹಲವಾರು ಚಿತ್ರನಿರ್ದೇಶಕರು ಬೆಂಗಳೂರಿನಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಒಲವು ತೋರಿದ್ದರೂ, ಸುಪ್ರೀಂ ಕೋರ್ಟ್ ನಿರ್ದೇಶನ ಇರುವುದರಿಂದ ಮೈಸೂರಿಗೆ ರಾಜಿಯಾಗಬೇಕಿದೆ.

೮೦ರ ದಶಕದಲ್ಲಿ ಸಾಕಷ್ಟು ದಕ್ಷಿಣ ಭಾರತೀಯ ಸಿನೆಮಾಗಳು ಮತ್ತು ಕೆಲವು ಬಾಲಿವುಡ್ ಸಿನೆಮಾಗಳು ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗಳಲ್ಲೆ ಚಿತ್ರೀಕರಣಗೊಳ್ಳುತ್ತಿದ್ದವು, ಆದರೆ ನಂತರದ ದಿನಗಳಲ್ಲಿ ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಬೆಂಗಳೂರಿಗೆ ನೆಲೆ ಬದಲಾಯಿತು.

ಈ ಪ್ರದೇಶದಲ್ಲಿ ಚಿತ್ರ ನಗರಿ ಸ್ಥಾಪಿಸುವುದಕ್ಕೆ ಇರುವ ಸಾಮರ್ಥ್ಯದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾಗರಿಕ ಸೇವೆಗಳ ಸಚಿವ ಎಚ್ ಸಿ ಮಹದೇವಪ್ಪ ಅವರ ಜೊತೆ ಭಾನುವಾರ ಮಾತುಕತೆ ನಡೆಸಿರುವುದು ತಿಳಿದು ಬಂದಿದೆ.

ಮೈಸೂರಿನ ಸುತ್ತ ಮುತ್ತ ಸುಮಾರು ೨೫೦ ಪ್ರವಾಸಿ ತಾಣಗಳಿದ್ದು, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ನಾಗರ ಹೊಳೆ, ಬಂಡೀಪುರ, ಸೋಮನಾಥ ದೇವಸ್ಥಾನ, ಕಾವೇರಿ ನದಿ, ತಲಕಾಡು ಮುಂತಾದ ಪ್ರವಾಸಿ ಸ್ಥಾನಗಳು ಚಿತ್ರೀಕರಣಕ್ಕೆ ಪೂರಕವಾಗಿವೆ ಎನ್ನುತ್ತಾರೆ ಸಿಂಗ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT