ಕೆಎಫ್‌ಸಿ ರೆಸ್ಟೋರೆಂಟ್ ಇರುವ ರಾಯಲ್ ಮೀನಾಕ್ಷಿ ಮಾಲ್ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಯುವತಿ ಫೋಟೋ ತೆಗೆದ ಕೆಎಫ್‌ಸಿ ಮ್ಯಾನೇಜರ್ ಸೆರೆ

ಕೆಎಫ್‌ಸಿ ರೆಸ್ಟೋರೆಂಟ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ಮ್ಯಾನೇಜರ್ ವಿಕಾಸ್ (28) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಹುಳಿಮಾವು ಕೆಂಟಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ರೆಸ್ಟೋರೆಂಟ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ಮ್ಯಾನೇಜರ್ ವಿಕಾಸ್ (28) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ನ.2ರಂದು ಅಸ್ಸಾಂ ಮೂಲದ 22 ವರ್ಷದ ಯುವತಿ ಮೀನಾಕ್ಷಿ ಮಾಲ್‌ನಲ್ಲಿರುವ ಕೆಎಫ್‌ಸಿಗೆ ತನ್ನ ಸ್ನೇಹಿತನೊಂದಿಗೆ ತೆರಳಿದ್ದಳು. ಅವರಿಬ್ಬರು ಅಹಾರ ಸೇವಿಸುತ್ತಿದ್ದಾಗ ಅಲ್ಲಿನ ಮ್ಯಾನೇಜರ್ ವಿಕಾಸ್, ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುತ್ತಿರುವುದನ್ನು ಅವರು ಗಮನಿಸಿದ್ದರು. ಕೂಡಲೇ ಮ್ಯಾನೇಜರ್ ಬಳಿ ತೆರಳಿದ ಯುವತಿ ಫೋಟೋ ತೆಗೆಯುತ್ತಿರುವುದನ್ನು ಆಕ್ಷೇಪಿಸಿ, ಮೊಬೈಲ್ ಫೋನ್ ತೋರಿಸುವಂತೆ ಕೇಳಿದ್ದಳು. ಫೋಟೋ ತೋರಿಸಲು ವಿಕಾಸ್ ನಿರಾಕರಿಸಿದ್ದ. ಈ ನಡೆಯಿಂದ ಆಕ್ರೋಶಗೊಂಡ ಯುವತಿ ಕಿರುಚಾಡಿ, ಇತರೆ ಗ್ರಾಹಕರ ಗಮನವನ್ನು ತನ್ನತ್ತ ಸೆಳೆದಳು. ಎಲ್ಲರೂ ಮೊಬೈಲ್ ತೋರಿಸುವಂತೆ ವಿಕಾಸ್ ಮೇಲೆ ಒತ್ತಡ ಹೇರಿದಾಗ ಯುವತಿ ಹಾಗೂ ಆಕೆಯ ತೊಡೆಯ ಭಾಗದ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿರುವುದು ಕಂಡುಬಂದಿತ್ತು.

ತೊಡೆ ಮೇಲೆ ಹಾಕಿದ್ದ ಕೊಂಡಿದ್ದ ಟ್ಯೂಟೂ ಚೆನ್ನಾಗಿ ಕಾಣುತ್ತಿತ್ತು. ಅಂಥದ್ದೇ ಟ್ಯಾಟೂವನ್ನು ತಾನೂ ಹಾಕಿಸಿಕೊಳ್ಳಬೇಕೆಂದು ಫೋಟೋ ತೆಗೆದಿರುವುದಾಗಿ ವಿಕಾಸ್ ಹೇಳಿದ್ದ. ಘಟನೆಗೆ ಸಂಬಂಧಿಸಿದಂತೆ ನ.18ರಂದು ಹುಳಿಮಾವು ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಈ ಹಿನ್ನಲೆಯಲ್ಲಿ ಪೊಲೀಸರು ಕೋಡಿ ಚಿಕ್ಕನಹಳ್ಳಿಯಲ್ಲಿ ವಾಸವಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಫೋಟೋ ತೆಗೆದಿದ್ದ ಎನ್ನಲಾದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಘಟನೆ ನಡೆದ ದಿನವೇ ವಿಕಾಸ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದ ಕೆಎಫ್‌ಸಿ ಆಪರೇಷನಲ್ ಮ್ಯಾನೇಜರ್ ಹಾಗೂ ಸಿಬ್ಬಂದಿ ದೂರು ನೀಡದಂತೆ ಯುವತಿಯ ಮನವೊಲಿಸಲು ಯತ್ನಿಸಿದ್ದರು. ಫೋಷಕರನ್ನು ಸಂಪರ್ಕಿಸಿ, ನಿರ್ಧರಿಸಿದ್ದರಿಂದ ದೂರು ನೀಡಲು ತಡವಾಯಿತು ಯುವತಿ ಪೊಲೀರಿಗೆ ತಿಳಿಸಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT