ಮೈತ್ರಿಯಾ ಗೌಡ 
ಜಿಲ್ಲಾ ಸುದ್ದಿ

ಮೈತ್ರಿಯಾ ಗೌಡ ಅರ್ಜಿ ವಜಾ

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರೊಂದಿಗೆ ಮದುವೆ ದೃಢೀಕರಿಸಬೇಕೆಂದು ನಟಿ ...

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರೊಂದಿಗೆ ಮದುವೆ ದೃಢೀಕರಿಸಬೇಕೆಂದು ನಟಿ ಮೈತ್ರಿಯಾ ಗೌಡ ಸಲ್ಲಿಸಿದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದೆ.

ಕಾರ್ತಿಕ್ ಗೌಡ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರವೇ ನಮ್ಮಿಬ್ಬರ ಮದುವೆಯಾಗಿರುವ ಕಾರಣ, ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳಬೇಕು. ಮಾತ್ರವಲ್ಲದೆ ಪತ್ನಿಗೆ ಸೇರುವ ಎಲ್ಲ ಹಕ್ಕುಗಳನ್ನು ನನಗೆ ನೀಡತಕ್ಕದು. ಅವರು ಬೇರೊಂದು ಹೆಣ್ಣನ್ನು ಮದುವೆಯಾಗುವುದಕ್ಕೆ ತಡೆಯೊಡ್ಡಬೇಕು. ಅವರೀಗ ಯಾವುದೇ ಯುವತಿಯ ಜತೆ ಮದುವೆಯಾದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಮೈತ್ರಿಯಾ ಅರ್ಜಿ ಸಲ್ಲಿಸಿದ್ದರು.

ಆದರೆ ಕಾರ್ತಿಕ್ ಗೌಡ ಮತ್ತು ಮೈತ್ರಿಯಾ ಮದುವೆಯಾಗಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಸಿಕಿಲ್ಲ. ಇದಕ್ಕೆ ಫೋಟೋ ಪುರಾವೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ವಿವಾಹವಾಗಿದ್ದೇವೆ ಎಂದಾದರೆ ತಾಳಿ ಕಟ್ಟಿರುವ, ಸಪ್ತಪದಿ ತುಳಿದಿರುವ ಚಿತ್ರಗಳು ಬೇಕು. ಆದಾಗ್ಯೂ, ವಿವಾಹ ನೋಂದಣಿ ಮಾಡಿ ಪ್ರಮಾಣಪತ್ರವನ್ನು ಮೈತ್ರಿಯಾ ನೀಡಿಲ್ಲ ಎಂಬ ಕಾರಣವನ್ನು ನೀಡಿ ಕೋರ್ಟ್ ಮದುವೆಯನ್ನು ಅನೂರ್ಜಿತಗೊಳಿಸಿದೆ.

ಕಾರ್ತಿಕ್ ಗೌಡ ಬೇರೆ ಮದುವೆಯಾಗಬಾರದು ಎಂದು ಮೈತ್ರಿಯಾ ಸಲ್ಲಿಸಿದ ಅರ್ಜಿ ತಿರಸ್ಕತಗೊಂಡಿರುವುದರಿಂದ ಡೀವಿ ಕುಟುಂಬ ನಿರಾಳವಾಗಿದ್ದು, ಕಾರ್ತಿಕ್‌ಗೆ ನಿಶ್ಚಯವಾಗಿರುವ ಮದುವೆಗೆ ಇನ್ನು ಸಿದ್ಧತೆ ನಡೆಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT