ಜಿ.ಎಸ್.ಮುಡಂಡಿತ್ತಾಯ ರಚಿತ ನೆನಪಿನ ಅಂಗಳ ಪುಸ್ತಕವನ್ನು ಸಂಗೀತ ನಿರ್ದೇಶಕ ಹಂಸಲೇಖ, ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಉಪಕುಲಪತಿ ಡಾ.ರಾಮಚಂದ್ರ ಭಟ್ ಕೋಟೆ ಮನೆ 
ಜಿಲ್ಲಾ ಸುದ್ದಿ

ಇಂಗ್ಲಿಷ್ ತಿರಸ್ಕರಿಸಬೇಡಿ, ನಮಸ್ಕರಿಸಿ: ಹಂಸಲೇಖ

ಇಂಗ್ಲಿಷ್ ಭಾಷೆಯನ್ನು ತಿರಸ್ಕಾರ ಮಾಡಬೇಡಿ. ನಮಸ್ಕಾರ ಮಾಡಿ. ನಾನು ಐವತ್ತನೇ ವಯಸ್ಸಿನಲ್ಲಿ ಇಂಗ್ಲಿಷ್ ಕಲಿತೆ. ಇದು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖಾ ಬಹುಭಾಷಾಪ್ರೇಮ...

ಬೆಂಗಳೂರು: ಇಂಗ್ಲಿಷ್ ಭಾಷೆಯನ್ನು ತಿರಸ್ಕಾರ ಮಾಡಬೇಡಿ. ನಮಸ್ಕಾರ ಮಾಡಿ. ನಾನು ಐವತ್ತನೇ ವಯಸ್ಸಿನಲ್ಲಿ ಇಂಗ್ಲಿಷ್ ಕಲಿತೆ. ಇದು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖಾ ಬಹುಭಾಷಾಪ್ರೇಮ.

ಬಾಲಮೋಹನ ವಿದ್ಯಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿ.ಎಸ್. ಮುಡಂಬಡಿತ್ತಾಯ ರಚಿತ `ನೆನಪಿನ ಅಂಗಳದಲ್ಲಿ' ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ತಮ್ಮ ನೆನಪುಗಳಿಗೆ ಜಾರಿದರು. ನಾನೂ ಈ ಭಾಷೆ ಬಗ್ಗೆ ನಿಕೃಷ್ಟ ಮನೋಭಾವವನ್ನು ಹೊಂದಿದವನಾಗಿದ್ದೆ. ಬಳಿಕ ನನ್ನ ತಪ್ಪು ತಿಳಿವಳಿಕೆ ಬಗ್ಗೆ ಅರಿವಾಗಿದೆ. ನಾನು ಚಿಕ್ಕವನಾಗಿದ್ದಾಗಿಂದಲೂ ಇಂಗ್ಲಿಷ್ ಅನ್ನು ತಿರಸ್ಕರಿಸುತ್ತಲೇ ಇದ್ದೆ. ಯಾವಾಗ ಶಾಲೆಯನ್ನು ಪ್ರಾರಂಭ ಮಾಡಿದೆನೋ ಆಗ ಮನೋಭಾವನೆ ಬದಲಾಯಿತು ಎಂದು ವಿಮರ್ಶೆ ಮಾಡಿಕೊಂಡರು.

ಲೇಖಕ ಮುಡಂಬಡಿತ್ತಾಯ ಪರಿಚಯವಾದಾಗ ಇಂಗ್ಲಿಷ್ ಭಾಷೆ ಕಲಿಯುವ ಬಗ್ಗೆ ಇರುವ ಅನಿವಾರ್ಯತೆಯ ಅರಿವಾಯಿತು. ಕೊನೆಗೆ ನನ್ನ 50ನೇ ವಯಸ್ಸಿನಲ್ಲಿ ಕಲಿಯಲು ಪ್ರಾರಂಭಿಸಿದೆ. ಶಾಸ್ತ್ರಬದ್ಧವಾಗಿಯೇ ಈ ಭಾಷೆಯನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಉಪಕುಲಪತಿ ಡಾ. ರಾಮಚಂದ್ರ ಭಟ್ ಕೋಟೆಮನೆ ,ಒಬ್ಬ ಮನುಷ್ಯ ಪ್ರಚಾರ, ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು. ಎಲ್ಲಿಯೂ ಸಹ ನಾವು ನಮ್ಮತನವನ್ನು ಕಳೆದುಕೊಳ್ಳಬಾರದು. ಸಂಯಮದಿಂದ ವರ್ತಿಸಬೇಕು ಎಂದು ಹೇಳಿದರು.

ಲೇಖಕ ಮುಡಂಬಡಿತ್ತಾಯ ಮಾತನಾಡಿ, ನನಗೆ ಈ ಪುಸ್ತಕವನ್ನು ಬರೆಯಬೇಕು ಎಂಬ ಹಂಬಲ ಇರಲಿಲ್ಲ. ಎಲ್ಲರ ಒತ್ತಾಯದ ಮೇರೆಗೆ ಬರೆದಿದ್ದೇನೆ. ಇಲ್ಲಿ ಅಧಿಕಾರಿಗಳ ದರ್ಪ, ಸರ್ಕಾರಿ ಇಲಾಖೆಗಳ ದುಸ್ಥಿತಿ ಹಾಗೂ ಎತ್ತಿ ಹಿಡಿಯುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.

ವಾಗ್ದೇವಿ ವಿದ್ಯಾಸಂಸ್ಥೆಯ ಕೆ. ಹರೀಶ್, ಕುರುಬರಹಳ್ಳಿ ಜ್ಲಾನದೀಪ್ತಿ ಶೈಕ್ಷಣಿಕ ದತ್ತಿಯ ನಿರ್ವಾಹಕ ನಿರ್ದೇಶಕ ಸತ್ಯಪ್ರಕಾಶ್ ಎಸ್. ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT