ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಪೋರನನ್ನು ಹಿಂಸಿಸಿದ ಕ್ರೂರ ತಂದೆ

ಪುಟ್ಟ ಬಾಲಕನಿಗೆ ತನ್ನ ತಂದೆಯೇ ಬೀಡಿ, ಸಿಗರೇಟು ಹಾಗೂ ಸೊಳ್ಳೆ ಬತ್ತಿಯಿಂದ ಸುಟ್ಟು, ಬಸ್ಕಿ ಹೊಡೆಸಿ, ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿರುವುದು ಮಾದನಾಯಕನಹಳ್ಳಿ ಪೊಲೀಸ್ ಠಾಣೆ...

ನೆಲಮಂಗಲ: ಪುಟ್ಟ ಬಾಲಕನಿಗೆ ತನ್ನ ತಂದೆಯೇ ಬೀಡಿ, ಸಿಗರೇಟು ಹಾಗೂ ಸೊಳ್ಳೆ ಬತ್ತಿಯಿಂದ ಸುಟ್ಟು, ಬಸ್ಕಿ ಹೊಡೆಸಿ, ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿರುವುದು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನ ಸಂದ್ರದಲ್ಲಿ ಬೆಳಕಿಗೆ ಬಂದಿದೆ.

ಚಿತ್ರಹಿಂಸೆಗೊಳಗಾಗಿದ್ದ ಬಾಲಕನಿಗೆ 3 ವರ್ಷ. ಪತ್ನಿ ಶೀಲದ ಬಗ್ಗೆ ಪತಿಗಿದ್ದ ಸಂಶಯದಿಂದ ಈ ಪುಟಾಣಿ ಚಿತ್ರಹಿಂಸೆ ಅನುಭವಿಸಿದ್ದಾನೆ. ಆತನ ತಂದೆ, ಅಜ್ಜಿ ಹಾಗೂ ಸೋದರತ್ತೆ ಕಿರುಕುಳ ನೀಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹೊನ್ನಸಂದ್ರದಲ್ಲಿ ಮಗುವಿಗೆ ಪೋಷಕರು ಪ್ರತಿನಿತ್ಯ ನೀಡುತ್ತಿದ್ದ ಚಿತ್ರಹಿಂಸೆಯನ್ನು ನೋಡಲಾಗದೆ ಗ್ರಾಮಸ್ಥರು ನೆಮ್ಮದಿ ಎಂಬ ಎನ್‍ಜಿಓ ಮೂಲಕ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

ಪೊರನ ಕೈ ಕಾಲುಗಳು, ಹೊಟ್ಟೆ, ಬೆನ್ನು, ಮುಖಗಳಿಗೆ ಬೀಡಿ ಹಾಗೂ ಸೊಳ್ಳೆಬತ್ತಿಯಿಂದ ಸುಡಲಾಗಿದೆ. ಆತನನ್ನು ರಕ್ಷಿಸಿ ಬೆಂಗಳೂರು ಉತ್ತರ ಮಕ್ಕಳ ಮತ್ತು ಮಹಿಳಾ ಕುಟುಂಬ ಇಲಾಖಾಧಿಕಾರಿ ಡಾ.ಸಿದ್ದರಾಮಣ್ಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಾಲ ಭವನಕ್ಕೆ ದಾಖಲಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT