ಬಿಬಿಎಂಪಿ ಕಚೇರಿ 
ಜಿಲ್ಲಾ ಸುದ್ದಿ

ತ್ರಿಭಜನೆ ಇನ್ನು ಮೂರು ತಿಂಗಳಿಲ್ಲ

ಬಿಬಿಎಂಪಿ ವಿಭಜಿಸುವ ರಾಜ್ಯ ಸರ್ಕಾರದ ಉದ್ದೇಶಿತ ಮಸೂದೆಯನ್ನು ವಿಧಾನಪರಿಷತ್ ನಿರೀಕ್ಷೆಯಂತೆ ಪರಿಶೀಲನಾ ಸಮಿತಿಗೆ ನೀಡಿದ್ದು, ಇದರೊಂದಿಗೆ ಪಾಲಿಕೆ ವಿಭಜನೆ ಸದ್ಯಕ್ಕೆ ನನೆಗುದಿಗೆ ಬಿದ್ದಂತಾಗಿದೆ...

ಬೆಂಗಳೂರು: ಬಿಬಿಎಂಪಿ ವಿಭಜಿಸುವ ರಾಜ್ಯ ಸರ್ಕಾರದ ಉದ್ದೇಶಿತ ಮಸೂದೆಯನ್ನು ವಿಧಾನಪರಿಷತ್ ನಿರೀಕ್ಷೆಯಂತೆ ಪರಿಶೀಲನಾ ಸಮಿತಿಗೆ ನೀಡಿದ್ದು, ಇದರೊಂದಿಗೆ ಪಾಲಿಕೆ ವಿಭಜನೆ ಸದ್ಯಕ್ಕೆ ನನೆಗುದಿಗೆ ಬಿದ್ದಂತಾಗಿದೆ. ಬಿಬಿಎಂಪಿ ಚುನಾವಣೆ ಮುಂದೂಡುವ ವಿಚಾರದಲ್ಲಿ ಸರ್ಕಾರ ಹೈಕೋರ್ಟ್ ಮೂಲಕ ಯಶಸ್ವಿಯಾಗಿದೆ.

ಬಿಬಿಎಂಪಿ ವಿಭಜನೆ ಪ್ರಯತ್ನ ತಡೆಯುವಲ್ಲಿ ಪ್ರತಿಪಕ್ಷಗಳು ಮೇಲ್ಮನೆಯ ಮೂಲಕ ಯಶಸ್ವಿಯಾಗಿವೆ. ಇತ್ತ ವಿಧಾನಪರಿಷತ್ತಿನಲ್ಲಿ ವಿಧೇಯಕ ಕುರಿತು ಪರಿಶೀಲನಾ ಸಮಿತಿ ರಚನೆ ಪ್ರಸ್ತಾಪ ಅಂಗೀಕರಿಸಿದ್ದರೂ ಅತ್ತ ವಿಧೇಯಕದ ಸೋಲು, ಗೆಲವು ನಿರೀಕ್ಷಿಸುತ್ತಿದ್ದ ವಿಧಾನಸಭೆಗೆ ವಿಧೇಯಕ ಕುರಿತ ಮಾಹಿತಿಯೇ ಹೋಗಲಿಲ್ಲ. ಪರಿಷತ್ತಿನಲ್ಲಿ ಪರಿಶೀಲನಾ ಸಮಿತಿ ರಚನೆಗೆ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ವಿಧೇಯಕ ಸದ್ಯಕ್ಕೆ ಪರಿಷತ್ತಿನಲ್ಲೇ ಸ್ಥಗಿತವಾದಂತಾಗಿದೆ. ಮುಂದೆ ಪರಿಶೀಲನಾ ಸಮಿತಿ ವರದಿ ಸಲ್ಲಿಸಿದ ನಂತರವಷ್ಟೇ ಈ ವಿಧೇಯಕ ಅಲ್ಲಿ ಪ್ರಸ್ತಾಪವಾಗಲಿದೆ.

ಈ ಮಧ್ಯೆ ಸದನದಲ್ಲಿ ಪರಿಶೀಲನಾ ಸಮಿತಿ ಹೇಗಿರಬೇಕು, ಹೇಗೆ ರಚಿಸಬೇಕು ಎಂಬಿತ್ಯಾದಿ ಬಗ್ಗೆ ಹೆಚ್ಚಿನ ಪ್ರಸ್ತಾಪವಾಗಲಿಲ್ಲ. ಸಮಿತಿಗೆ ಕಾಲಮಿತಿ ನಿಗದಿಪಡಿಸುವ ಕುರಿತು ಚರ್ಚೆ ನಡೆಯಲಿಲ್ಲ.ಆದರೆ ಪರಿಷತ್ ನಿಯಮಗಳ ಪ್ರಕಾರ ಈ ಪರಿಶೀಲನಾ ಸಮಿತಿ ಸದನ ತೀರ್ಮಾನಿಸಿದ 3 ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕಿದೆ. ಹೀಗಾಗಿ ಬಿಬಿಎಂಪಿ ವಿಭಜಿಸುವ ಸರ್ಕಾರದ ಪ್ರಯತ್ನ ಮೂರು ತಿಂಗಳು ಮುಂದೆ ಹೋಗಿದೆ.

ಮುಂದೇನು ?

ಸಭಾಪತಿ ಶಂಕರಮೂರ್ತಿ ಸದ್ಯದಲ್ಲೇ ಪಕ್ಷಗಳ ನಾಯಕ ಸಭೆ ಕರೆದು ಸದಸ್ಯರನ್ನು ಸೂಚಿಸುವಂತೆ ಹೇಳುತ್ತಾರೆ. ಪಕ್ಷದ ನಾಯಕರಿಂದ ಸದಸ್ಯರ ಪಟ್ಟಿ ಸಿಗುತ್ತಿದ್ದಂತೆ ಸಮಿತಿ ರಚಿಸಿ ಆದೇಶ ಹೊರಡಿಸುತ್ತಾರೆ. ಈ ಪ್ರಕ್ರಿಯೆ ಇನ್ನೊಂದು ವಾರದಲ್ಲಿ ನಡೆಸುವ ಸಾಧ್ಯತೆ. ಆನಂತರ ಸಮಿತಿ ಸದಸ್ಯರು ನಾನಾ ಹಂತದ ಸಭೆಗಳನ್ನು ನಡೆಸಬೇಕು. ಸಭಾಪತಿ ಅವರಿಗೆ ವರದಿ ಸಲ್ಲಿಸಬೇಕು. ಅಲ್ಲಿವರೆಗೂ ಸರ್ಕಾರ ವಿಧೇಯಕದಲ್ಲಿ ಪ್ರಸ್ತಾಪಿಸಿದಂತೆ ಬಿಬಿಎಂಪಿ ವಿಭಜಿಸುವ ಪ್ರಯತ್ನಗಳನ್ನು ಮಾಡುವಂತಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT