ಖಾಸಗಿ ಬಸ್ ಸೇವೆ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸರಣಿ ರಜೆ: ಪ್ರಯಾಣಿಕರ ಜೇಬಿಗೆ ಕತ್ತರಿ

ಸಾರಿಗೆ ಮುಷ್ಕರ, ಕಾರ್ಮಿಕರ ದಿನಾಚರಣೆ ಸೇರಿದಂತೆ ಈ ವಾರಾಂತ್ಯದಲ್ಲಿರುವ ಸರಣಿ ರಜೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿವೆ..

ಬೆಂಗಳೂರು: ಸಾರಿಗೆ ಮುಷ್ಕರ, ಕಾರ್ಮಿಕರ ದಿನಾಚರಣೆ ಸೇರಿದಂತೆ ಈ ವಾರಾಂತ್ಯದಲ್ಲಿರುವ ಸರಣಿ ರಜೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿವೆ.

ಗುರುವಾರ ಸಾರಿಗೆ ಮುಷ್ಕರ, ಶುಕ್ರವಾರ ಕಾರ್ಮಿಕರ ದಿನಾಚರಣೆ. ಹೀಗಾಗಿ ವಾರಾಂತ್ಯದ ಸರಣಿ ರಜೆಗಳಲ್ಲಿ ಬೆಂಗಳೂರಿನಿಂದ ಹೊರ ಊರಿಗೆ ಪ್ರಯಾಣಿಸುವವರ ಜೇಬಿಗೆ ಕತ್ತರಿ ಬೀಳಲಿದೆ.

ವಾರಾಂತ್ಯದ ಸರಣಿ ರಜೆಗಳ ಲಾಭ ಪಡೆಯುವ ಉದ್ದೇಶದಿಂದ ಖಾಸಗಿ ಬಸ್‌ ಮಾಲೀಕರು ಟಿಕೆಟ್‌ ದರಗಳನ್ನು ಹೆಚ್ಚಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ, ಮಂಗಳೂರು, ವಿಜಯಪುರ, ಕಲಬುರಗಿ, ಬೀದರ್‌ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾಗುವ ಸ್ಲೀಪರ್, ಸೆಮಿ ಸ್ಲೀಪರ್, ವೊಲ್ವೋ ಸೇರಿದಂತೆ ವಿವಿಧ ಬಸ್ಸುಗಳ ಪ್ರಯಾಣ ದರದಲ್ಲಿ ಹೆಚ್ಚಳವಾಗಿದೆ.

ಖಾಸಗಿ ಬಸ್ಸುಗಳಲ್ಲಿನ ಪ್ರಯಾಣ ದರ ಶೇ.10ರಿಂದ 12ರಷ್ಟು ಹೆಚ್ಚಳವಾಗಿದ್ದು, 700 ರುಗಳ ಟಿಕೆಟ್ ದರ 900 ರೂ.ಗೆ ಏರಿಕೆಯಾಗಿದೆ. 1,200 ರೂ. ಇರುವ ದರ 1,600 ರೂ. ವರೆಗೆ ಏರಿಕೆಯಾಗಿದ್ದು, ಜನರು ಹೆಚ್ಚಿನ ಹಣ ಪಾವತಿ ಮಾಡಿ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಬುಧವಾರದಿಂದಲೇ ಮುಂಗಡ ಟಿಕೆಟ್‌ ಬುಕ್ಕಿಂಗ್ ಆರಂಭವಾಗಿದ್ದು, ದುಬಾರಿ ಹಣ ನೀಡಿಯೇ ಪ್ರಯಾಣಿಕರು ತಮ್ಮ-ತಮ್ಮ ಟಿಕೆಟ್ ಗಳನ್ನು ಕಾಯ್ದಿರಿಸುತ್ತಿದ್ದಾರೆ.

ಟಿಕೆಟ್ ದರ ಏರಿಕೆಯಾದರೂ ಪ್ರಯಾಣ ಅನಿವಾರ್ಯ, ಹೀಗಾಗಿ ದುಬಾರಿ ಹಣ ನೀಡಿ ಊರಿಗೆ ತೆರಳುತ್ತಿದ್ದೇವೆ ಎಂದು ಪ್ರಯಾಣಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT