ಲೋಕಾಯುಕ್ತ ಪಿಆರ್ ಒ ಸೈಯ್ಯದ್ ರಿಯಾಜ್ 
ಜಿಲ್ಲಾ ಸುದ್ದಿ

ಜೈಲ್ ಸಿಬ್ಬಂದಿಗೆ ಸೈಯ್ಯದ್ ರಿಯಾಜ್ ಆವಾಜ್

ಲೋಕಾಯುಕ್ತ ಕಚೇರಿ ಲಂಚ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಲೋಕಾಯುಕ್ತ ಸಂಸ್ಥೆ ಪಿಆರ್ ಒ ಸೈಯ್ಯದ್ ರಿಯಾಜ್ ಹಾಗೂ ಅಶ್ವಿನ್ ರಾವ್ ಊಟ...

ಬೆಂಗಳೂರು: ಲೋಕಾಯುಕ್ತ ಕಚೇರಿ ಲಂಚ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಲೋಕಾಯುಕ್ತ ಸಂಸ್ಥೆ ಪಿಆರ್ ಒ  ಸೈಯ್ಯದ್ ರಿಯಾಜ್ ಹಾಗೂ ಅಶ್ವಿನ್ ರಾವ್ ಊಟ ಹಾಗೂ ವಸತಿ ವಿಚಾರವಾಗಿ ಜೈಲು ಅಧಿಕಾರಿ, ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಅಶ್ವಿನ್ ರಾವ್ ಪರ ವಕೀಲರು ಜೈಲಿನಲ್ಲಿ ಅಶ್ವಿನ್  ಗೆ ವಿಐಪಿ ಸೌಕರ್ಯ ಕಲ್ಪಿಸುವಂಕೆ ಮನವಿ ಮಾಡಿದ್ದರು. ಆದರೆ ಆ ರೀತಿ ಆದೇಶಿಸಲಾಗದು. ಜೈಲಿನಲ್ಲಿ ಎಲ್ಲರಂತೆ ಇರಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.

ಆದರೂ ಪಟ್ಟು ಬಿಡದ ಅಶ್ವಿನ್ ಹಾಗೂ ಸೈಯ್ಯದ್ ರಿಯಾಜ್ ತಮಗೆ ವಿಐಪಿ ಆತಿಥ್ಯ ನೀಡುವಂತೆ ಬಲವಂತ ಮಾಡಿ ಜೈಲಿನ ಸಿಬ್ಬಂದಿಗೆ ಆವಾಜ್ ಹಾಕಿದ್ದಾರಂತೆ. ತಮಗೆ ಬೇಕಾದ ಊಟವನ್ನು ತರಿಸಿಕೊಡಬೇಕು. ಹಾಸಿಗೆ ಬಟ್ಟೆ ಎಲ್ಲವೂ ತಮ್ಮ ಆಯ್ಕೆಯಂತೆಯೇ ಇರಬೇಕು ಎಂದು ಹೇಳಿದ್ದಾರಂತೆ. ಆದರೆ ಇವರ ಇಂಥ ಬೇಡಿಕೆಗಳಿಗೆ ಸ್ಪಂದಿಸಲು ನಿರಾಕರಿಸಿದ ಅಧಿಕಾರಿಗಳು ನಿಮ್ಮ ಬೇಡಿಕೆ ಪೂರೈಸಿದರೆ ಬೇರೆ ಕೈದಿಗಳು ಡಿಮ್ಯಾಂಡ್ ಮಾಡುತ್ತಾರೆ ಎಂದು ತಿಳಿ  ಹೇಳಿದ್ದಾರೆ. ಇದಕ್ಕೊಪ್ಪದ ಆರೋಪಿಗಳು ನೀವು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಎಂದು ಆಪಾದಿಸಿ ಸಿಬ್ಬಂದಿಯ ಮೇಲೆ ಮನ ಬಂದಂತೆ ರೇಗಾಡುತ್ತಿದ್ದಾರೆ. ಉತ್ತಮ ಸೇವೆ ಕಲ್ಪಿಸುವಂತೆ ಒತ್ತಡ ಹೇರಿ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.

ಸೈಯ್ಯದ್ ರಿಯಾಜ್ ವರ್ತನೆಯಿಂದ ಜೈಲಿನ ಸಿಬ್ಬಂದಿ ಅಸಮಾಧಾನಗೊಂಡು ಅವರನ್ನು ಇರಿಸಿರುವ ಸೆಲ್ ಗಳಿಗೆ  ಪ್ರತ್ಯೇಕ ಕಾವಲುಗಾರರನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT