ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ

ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ ನಾಶ ಮಾಡಿದ್ದಾರೆ...

ಧಾರವಾಡ: ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ
ನಾಶ ಮಾಡಿದ್ದಾರೆ.

ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ ಸೂಕ್ತ ಬೆಲೆ ನಿಗದಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟಾವು ಮಾಡದಿರಲು ರೈತ ನಿರ್ಧರಿಸಿದ್ದರು. ಅಲ್ಲದೆ, ತರಕಾರಿ ಬೆಳೆಯುವ ಸಲುವಾಗಿ ಕಬ್ಬನ್ನು
ಭೂಮಿಯಲ್ಲೇ ನಾಶ ಮಾಡಿದ್ದಾರೆ. `ಕಬ್ಬು ಬೆಳೆಯಿಂದ ಕಿಂಚಿತ್ತೂ ಲಾಭವಾಗಲಿಲ್ಲ. ಸಕ್ಕರೆ ಕಾರ್ಖಾನೆಗಳು ಟನ್‍ಗೆ ರು.1,200 ನೀಡುತ್ತಿವೆ.

ಇದರಿಂದ ತೀರ ನಷ್ಟವಾಗುತ್ತಿದೆ. ಕಬ್ಬು ಕಟಾವು ಮಾಡಲು ಮುಂದಾದರೆ ನಿಗದಿತ ಬೆಲೆಗಿಂತಲೂ ಹೆಚ್ಚು ಖರ್ಚು ಬರುತ್ತದೆ. ಆದ್ದರಿಂದ ಬೆಳೆಯನ್ನು ನಾಶ ಮಾಡಿ ಭೂಮಿಗೇ ಸೇರಿಸಿದ್ದೇನೆ. ಅದೇ ಜಾಗದಲ್ಲಿ ಬೇರೆ ಬೆಳೆ ಬೆಳೆಯುತ್ತೇನೆ' ಎಂದು ಶಿವನಗೌಡ ಹೇಳಿದ್ದಾರೆ. `ಆಳೆತ್ತರ ಬೆಳೆದ ಕಬ್ಬನ್ನು ನಾಶಪಡಿಸಲು ನಮಗೂ ನೋವಾಗುತ್ತಿತ್ತು. ಆದರೆ, ಬೇರೆ ದಾರಿಯೇ ಇರಲಿಲ್ಲ' ಎಂದು ನೋವು ತೋಡಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT