ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ

ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ ನಾಶ ಮಾಡಿದ್ದಾರೆ...

ಧಾರವಾಡ: ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ
ನಾಶ ಮಾಡಿದ್ದಾರೆ.

ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ ಸೂಕ್ತ ಬೆಲೆ ನಿಗದಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟಾವು ಮಾಡದಿರಲು ರೈತ ನಿರ್ಧರಿಸಿದ್ದರು. ಅಲ್ಲದೆ, ತರಕಾರಿ ಬೆಳೆಯುವ ಸಲುವಾಗಿ ಕಬ್ಬನ್ನು
ಭೂಮಿಯಲ್ಲೇ ನಾಶ ಮಾಡಿದ್ದಾರೆ. `ಕಬ್ಬು ಬೆಳೆಯಿಂದ ಕಿಂಚಿತ್ತೂ ಲಾಭವಾಗಲಿಲ್ಲ. ಸಕ್ಕರೆ ಕಾರ್ಖಾನೆಗಳು ಟನ್‍ಗೆ ರು.1,200 ನೀಡುತ್ತಿವೆ.

ಇದರಿಂದ ತೀರ ನಷ್ಟವಾಗುತ್ತಿದೆ. ಕಬ್ಬು ಕಟಾವು ಮಾಡಲು ಮುಂದಾದರೆ ನಿಗದಿತ ಬೆಲೆಗಿಂತಲೂ ಹೆಚ್ಚು ಖರ್ಚು ಬರುತ್ತದೆ. ಆದ್ದರಿಂದ ಬೆಳೆಯನ್ನು ನಾಶ ಮಾಡಿ ಭೂಮಿಗೇ ಸೇರಿಸಿದ್ದೇನೆ. ಅದೇ ಜಾಗದಲ್ಲಿ ಬೇರೆ ಬೆಳೆ ಬೆಳೆಯುತ್ತೇನೆ' ಎಂದು ಶಿವನಗೌಡ ಹೇಳಿದ್ದಾರೆ. `ಆಳೆತ್ತರ ಬೆಳೆದ ಕಬ್ಬನ್ನು ನಾಶಪಡಿಸಲು ನಮಗೂ ನೋವಾಗುತ್ತಿತ್ತು. ಆದರೆ, ಬೇರೆ ದಾರಿಯೇ ಇರಲಿಲ್ಲ' ಎಂದು ನೋವು ತೋಡಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

SCROLL FOR NEXT