ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ

ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ ನಾಶ ಮಾಡಿದ್ದಾರೆ...

ಧಾರವಾಡ: ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ
ನಾಶ ಮಾಡಿದ್ದಾರೆ.

ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ ಸೂಕ್ತ ಬೆಲೆ ನಿಗದಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟಾವು ಮಾಡದಿರಲು ರೈತ ನಿರ್ಧರಿಸಿದ್ದರು. ಅಲ್ಲದೆ, ತರಕಾರಿ ಬೆಳೆಯುವ ಸಲುವಾಗಿ ಕಬ್ಬನ್ನು
ಭೂಮಿಯಲ್ಲೇ ನಾಶ ಮಾಡಿದ್ದಾರೆ. `ಕಬ್ಬು ಬೆಳೆಯಿಂದ ಕಿಂಚಿತ್ತೂ ಲಾಭವಾಗಲಿಲ್ಲ. ಸಕ್ಕರೆ ಕಾರ್ಖಾನೆಗಳು ಟನ್‍ಗೆ ರು.1,200 ನೀಡುತ್ತಿವೆ.

ಇದರಿಂದ ತೀರ ನಷ್ಟವಾಗುತ್ತಿದೆ. ಕಬ್ಬು ಕಟಾವು ಮಾಡಲು ಮುಂದಾದರೆ ನಿಗದಿತ ಬೆಲೆಗಿಂತಲೂ ಹೆಚ್ಚು ಖರ್ಚು ಬರುತ್ತದೆ. ಆದ್ದರಿಂದ ಬೆಳೆಯನ್ನು ನಾಶ ಮಾಡಿ ಭೂಮಿಗೇ ಸೇರಿಸಿದ್ದೇನೆ. ಅದೇ ಜಾಗದಲ್ಲಿ ಬೇರೆ ಬೆಳೆ ಬೆಳೆಯುತ್ತೇನೆ' ಎಂದು ಶಿವನಗೌಡ ಹೇಳಿದ್ದಾರೆ. `ಆಳೆತ್ತರ ಬೆಳೆದ ಕಬ್ಬನ್ನು ನಾಶಪಡಿಸಲು ನಮಗೂ ನೋವಾಗುತ್ತಿತ್ತು. ಆದರೆ, ಬೇರೆ ದಾರಿಯೇ ಇರಲಿಲ್ಲ' ಎಂದು ನೋವು ತೋಡಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT