ಲೋಕಾಯುಕ್ತ ಸಂಸ್ಥೆ 
ಜಿಲ್ಲಾ ಸುದ್ದಿ

ಲೋಕ ಹಗರಣ: 9ನೇ ಆರೋಪಿ ಬಂಧನ

ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷತನಿಖಾ ದಳದ (ಎಸ್‍ಐಟಿ) ಅಧಿಕಾರಿಗಳು ಮತ್ತೊಬ್ಬ...

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷತನಿಖಾ ದಳದ (ಎಸ್‍ಐಟಿ) ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.ಆಂತರಿಕ ಭದ್ರತಾ ದಳದಲ್ಲಿ ಪ್ರಥಮದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಬಂಧಿತ ಆರೋಪಿ. ಮಂಗಳವಾರ ಬೆಂಗಳೂರಿನಲ್ಲಿ ನರಸಿಂಹಮೂರ್ತಿಯನ್ನು ಬಂಧಿಸಿದ ಎಸ್ ಐಟಿ ಅಧಿಕಾರಿಗಳು ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಲೋಕೋಪಯೋಗಿಇಲಾಖೆ ಎಂಜಿನಿಯರ್ ಡಿ.ಉದಯ್  ಶಂಕರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತನಿಖಾಧಿಕಾರಿ ಸೈಮನ್ತಿಳಿಸಿದರು. ಆರೋಪಿಯನ್ನು ವಿಚಾರಣೆನಡೆಸಬೇಕಿರುವುದರಿಂದ 7 ದಿನ ವಶಕ್ಕೆ ನೀಡುವಂತೆ ಕೋರಿದರು. ವಿಚಾರಣೆನಡೆಸಿದ ನ್ಯಾಯಾಲಯ ಆ.25ರವರೆಗೆ ವಶಕ್ಕೆ ನೀಡಿದ ಆದೇಶಿಸಿದರು. ಮಾಗಡಿ ಉಪ ವಿಭಾಗ ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಭ್ರಷ್ಟಾಚಾರಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಉದಯ್  ಶಂಕರ್ ಅವರನ್ನು ಪ್ರಕರಣದಿಂದ ಕೈ ಬಿಡಲು ವಿ.ಭಾಸ್ಕರ್ ಹಾಗೂ ನರಸಿಂಹಮೂರ್ತಿ ಮೂಲಕ ನ್ಯಾ.ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್‍ರಾವ್  ರು.5 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಉದಯ್  ಭಾಸ್ಕರ್ ಅವರು ಎಸ್ ಐಟಿಗೆ ಮಂಗಳವಾರ ದೂರು ಸಲ್ಲಿಸಿದ್ದರು. ಉದಯ್ ಶಂಕರ್ ಸೇರಿದಂತೆ 30ಕ್ಕೂಹೆಚ್ಚು ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯಕ್ಕೆ ಆರೋಪಪಟ್ಟಿಯು ಸಲ್ಲಿಕೆಯಾಗಿದೆ.  ಈ ಪ್ರಕರಣದಿಂದ ಪಾರು ಮಾಡುವುದಾಗಿ ಹೇಳಿ ರು.5 ಲಕ್ಷ ಹಣ ಕೇಳಿದ್ದರು ಎಂದು ಉದಯ್ ಶಂಕರ್ ಆರೋಪಿಸಿದ್ದಾರೆ.


ನನ್ನದೇನು ತಪ್ಪಿಲ್ಲ: ನರಸಿಂಹಮೂರ್ತಿ
ಆರೋಪಿ ನರಸಿಂಹಮೂರ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಕಾರಿಡಾರ್‍ನ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳಲಾಗಿತ್ತು. ಈ ವೇಳೆ ತನಿಖಾಧಿಕಾರಿ ಸೈಮನ್ ಅವರು ನ್ಯಾಯಾಲಯದ ಒಳಗೆ ಹೋಗಿದ್ದರು. ಆಗ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಆರೋಪಿ ನರಸಿಂಹಮೂರ್ತಿ, ನನ್ನದೇನು ತಪ್ಪಿಲ್ಲ. ಪಿಸ್ತೂಲ್ ಲೈಸನ್ಸ್ ವಿಚಾರವಾಗಿ ಅಶ್ವಿನ್‍ರಾವ್ ಅವರ ಭೇಟಿಯಾಗಿತ್ತು. ಅದನ್ನು ಹೊರತುಪಡಿಸಿದರೆ ನನಗೂ ಅವರಿಗೂ ಯಾವುದೇ ಸ್ನೇಹ, ನಂಟು ಇಲ್ಲ. ಲಂಚ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT