ಮಾದರಿ ಪಾಲಿಕೆ ಸದಸ್ಯತ್ವ ಪ್ರತಿಜ್ಞೆ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಮಾದರಿ ಪಾಲಿಕೆ ಸದಸ್ಯತ್ವ ಪ್ರತಿಜ್ಞೆ

ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ನಡೆದ ಬಿಬಿಎಂಪಿ ಚುನಾವಣಾ ಅಭಿಯಾನದಲ್ಲಿ 95 ಅಭ್ಯರ್ಥಿಗಳು ಮಾದರಿ ನಗರಪಾಲಿಕೆ ಸದಸ್ಯತ್ವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ...

ಬೆಂಗಳೂರು: ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ನಡೆದ ಬಿಬಿಎಂಪಿ ಚುನಾವಣಾ ಅಭಿಯಾನದಲ್ಲಿ 95 ಅಭ್ಯರ್ಥಿಗಳು ಮಾದರಿ ನಗರಪಾಲಿಕೆ ಸದಸ್ಯತ್ವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ.

ಪ್ರತಿಷ್ಠಾನದ ವಾರ್ಡ್ ಮಟ್ಟದ ಸಂವಾದ 2015ರ ಅಂಗವಾಗಿ ನಡೆದ ಎಂಟು ಚರ್ಚೆಗಳಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು ಮಾದರಿ ನಗರಪಾಲಿ ಕೆಯ ಸದಸ್ಯರಾಗುವುದಕ್ಕೆ ಸಹಿ ಹಾಕಿ
ದ್ದಾರೆ. ಒಟ್ಟು 6 ರಾಜಕೀಯ ಪಕ್ಷಗಳ 86 ಹಾಗೂ 9 ಸ್ವತಂತ್ರ ಅಭ್ಯರ್ಥಿಗಳು ಪ್ರತಿಜ್ಞೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್‍ನ 10, ಬಿಜೆಪಿಯ 6, ಲೋಕಸತ್ತಾ ಪಕ್ಷದ 4, ಆರ್‍ಪಿಐ(ಎ)
1, ಬಿಎಸ್‍ಪಿ 1 ಹಾಗೂ 9 ಸ್ವತಂತ್ರ ಅಭ್ಯರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಮಾದರಿ ಪಾಲಿಕೆ ಸದಸ್ಯ ಸನ್ನದು: ಮಾದರಿ ನಗರಪಾಲಿಕೆ ಸದಸ್ಯರಾಗಿ ಉಳಿಯಲು ಈ ಪ್ರತಿಜ್ಞೆ
ಕೈಗೊಳ್ಳಲಾಗುತ್ತದೆ. ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ಬ್ರೇಸ್ ಬೆಂಗಳೂರು ರೆಸಿಡೆಂಟ್ಸ್ ವೆಲ್ ಫೋರ್ ಅಸೋಸಿಯೇಶನ್ಸ್ ಕಾನ್ ಫೆಡರೇಬಲ್ ಎನ್‍ಸೆಂಬಲ್ ಸಹಯೋಗದಲ್ಲಿ `ಐಡಿಯಲ್ ಕಾರ್ಪೋರೇಟರ್ ಚಾರ್ಟರ್' ಬಿಡುಗಡೆ ಮಾಡಲಾಗಿತ್ತು.

ನಿವಾಸಿಗಳ ಕಲ್ಯಾಣ ಸಂಘ, ನಾಗರಿಕ ಸಮೂಹ ಹಾಗೂ ಸಾರ್ವಜನಿಕರಿಂದ ಸಲಹೆ ಪಡೆದು, ಕಾರ್ಪೊರೇಟರ್‍ಗಳು ಹೇಗಿರಬೇಕು ಎಂಬ ಮಾಹಿತಿ ಕಲೆಹಾಕಲಾಗಿತ್ತು. ಪ್ರತಿಜ್ಞಾ ವಿಧಿಯಂತೆ ಅಭ್ಯರ್ಥಿಗಳು ನಡೆದುಕೊಳ್ಳಲು ಸಂಸ್ಥೆ ಸಹಕಾರ ನೀಡಲಿದೆ. ಈ ಕುರಿತು ಮಾಹಿತಿ ನೀಡಿದ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಪಬ್ಬಿಸೆಟ್ಟಿ, ಈ ಸಿಟಿಜನ್ ಚಾರ್ಟರ್‍ನಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ನಾಗರಿಕರ ಭಾಗವಹಿಸುವಿಕೆ, ನಿರ್ಣಯ ಕೈಗೊಳ್ಳುವಾಗಿನ ಪ್ರಜಾಸತ್ತಾತ್ಮಕ ಕ್ರಮಗಳು, ವೈಯಕ್ತಿಕ ಹಾಗೂ ಸಾಂಸ್ಥಿಕ ಸಮಗ್ರತೆಯನ್ನು ಎತ್ತಿಹಿಡಿಯುವುದು ಮೊದಲಾದ ನೀತಿಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಅಭ್ಯರ್ಥಿಗಳು ಇದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದರು.ಪ್ರತಿಜ್ಞಾ ವಿಧಿಗೆ ಸಹಿ ಹಾಕಿದ ಅಭ್ಯರ್ಥಿಗಳ ಪಟ್ಟಿಯನ್ನು www.namma-bengaluru.org ನಲ್ಲಿ ಹಾಕಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಫೈನಲ್ ಫೈಟ್: ಸಿದ್ದರಾಮಯ್ಯ ಮನವೊಲಿಕೆಗೆ ರಾಹುಲ್ ಗಾಂಧಿ ಯತ್ನ: ಯತೀಂದ್ರಗೆ DCM ಸ್ಥಾನ, ರಾಜ್ಯಸಭೆ ಆಫರ್?

ಪಟ್ಟಕ್ಕಾಗಿ ಫೈನಲ್ ಫೈಟ್: ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ; CM ಹುದ್ದೆಗಾಗಿ ಬಿಗಿಪಟ್ಟು!

Indian Stock Market: ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ, Sensex ಕುಸಿತ

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

SCROLL FOR NEXT