ಮಂಗಳೂರಿನಲ್ಲಿ ನಡೆದ ನೈತಿಕ ಪೋಲಿಸ್ ಗಿರಿಯ ಅಮಾನವೀಯ ಕೃತ್ಯ (ಚಿತ್ರ ಕೃಪೆ: ಫೇಸ್ಬುಕ್) 
ಜಿಲ್ಲಾ ಸುದ್ದಿ

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿಯ ಅಟ್ಟಹಾಸ; ಯುವಕನಿಗೆ ಥಳಿತ

ಹಿಂದು ಸಂಘಟನೆಗೆ ಸೇರಿದ ಗುಂಪು ಯುವಕನೊಬ್ಬನನ್ನು ನಗ್ನಗೊಳಿಸಿ, ಜನನಿಬಿಡ ಪ್ರದೇಶದಲ್ಲಿ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಘಟನೆ ಮಂಗಳೂರಿನಲ್ಲಿ

ಮಂಗಳೂರು: ಹಿಂದು ಸಂಘಟನೆಗೆ ಸೇರಿದ ಗುಂಪು ಯುವಕನೊಬ್ಬನನ್ನು ನಗ್ನಗೊಳಿಸಿ, ಜನನಿಬಿಡ ಪ್ರದೇಶದಲ್ಲಿ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 
ಎಸ್ ಯು ವಿ ಒಂದರಲ್ಲಿ ತೆರಳುತ್ತಿದ್ದ ಯುವ ಜೋಡಿಯ ಬೆನ್ನಟ್ಟಿದ ಹಿಂದು ಸಂಘಟನೆಯ ಗುಂಪೊಂದು ಕಾರನ್ನು ಅಡ್ಡಗಟ್ಟಿ ಈ ಅಮಾನವೀಯ ಕೃತ್ಯವೆಸಗಿದೆ. ಆ ಸಂಗಾತಿಗಳು ಎರಡು ಕೋಮಿಗೆ ಸೇರಿದ್ದರು ಎಂದು ತಿಳಿಯಲಾಗಿದೆ. 
ಥಳಿತಕ್ಕೆ ಒಳಗಾಗಿರುವ ಸಂತ್ರಸ್ತನನ್ನು ಅಲಿ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. 
ಮೂಲಗಳ ಪ್ರಕಾರ ಅತ್ತಾವರದ ಸೂಪರ್ ಮಾರ್ಕೆಟ್ ನ ನೌಕರ ಅಲಿ(೩೦). ಚಿಕ್ಕಮಗಳೂರಿನ ಮೂಡಿಗೆರೆಯ ತನ್ನ ಸಹದ್ಯೋಗಿಯೊಂದಿಗೆ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನು ಗಮನಿಸಿದ ಹಿಂದು ಸಂಘಟನೆಯ ಗುಂಪೊಂದು ಅತ್ತಾವರದ ಬಾಬುಗುಡ್ಡದ ಬಳಿ ಕಾರನ್ನು ಅಡ್ಡಗಟ್ಟಿ, ಇಬ್ಬರನ್ನೂ ಹೊರಗೆಳೆದು, ಅಲಿ ಮೇಲೆ ಹಲ್ಲೆ ನಡೆಸಿದ್ದಾರೆ. 
ಹುಡುಗಿ ಅಲ್ಲಿಂದ ತಪ್ಪಿಸ್ಕೊಳ್ಳಲು ಯಶಸ್ವಿಯಾಗಿದ್ದು, ಆದರೆ ಆ ಗುಂಪು ಅಲಿಯನ್ನು ನಗ್ನಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ವಿಷಯ ಪಾಂಡೇಶ್ವರ್ ಪೊಲೀಸರಿಗೆ ತಿಳಿದು ಅವರು ಸ್ಥಳಕ್ಕೆ ಧಾವಿಸಿ ಅಲಿಯನ್ನು ರಕ್ಷಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಿ ಪ್ರಶ್ನಿಸಲಾಗುತ್ತಿದೆ. ಆ ಯುವತಿಯ ಜೊತೆ ಯಾವುದೇ ಅಕ್ರಮ ಸಂಬಂಧ ಹೊಂದಿಲ್ಲ ಎಂದು ಅಲಿ ತಿಳಿಸಿರುವುದಾಗಿ ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT