ಕಿತ್ತುಹೋದ ಹಳಿ ಸರಿಪಡಿಸುತ್ತಿರುವ ರೈಲ್ವೆ ಸಿಬ್ಬಂದಿ 
ಜಿಲ್ಲಾ ಸುದ್ದಿ

ಹಳಿ ತಪ್ಪಿದ ಪ್ರಶಾಂತಿ ಎಕ್ಸ್ ಪ್ರೆಸ್

ಭುವನೇಶ್ವರದಿಂದ ಆಗಮಿಸಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲು ನಗರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಪ್ರವೇಶಿಸುತ್ತಿದ್ದ ವೇಳೆ ಹಳಿ ತಪ್ಪಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಘಟನೆಯಿಂದ ನಗರದಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ನಾಲ್ಕೈದು ರೈಲುಗಳ...

ಬೆಂಗಳೂರು: ಭುವನೇಶ್ವರದಿಂದ ಆಗಮಿಸಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲು ನಗರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಪ್ರವೇಶಿಸುತ್ತಿದ್ದ ವೇಳೆ ಹಳಿ ತಪ್ಪಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಘಟನೆಯಿಂದ ನಗರದಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ನಾಲ್ಕೈದು ರೈಲುಗಳ ತಡವಾಗಿ ಸಂಚರಿಸಿದವು.

ಮಧ್ಯಾಹ್ನ 12 ಗಂಟೆಗೆ ಆಗಮಿಸಬೇಕಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲು ಸುಮಾರು 15 ನಿಮಿಷ ವಿಳಂಬವಾಗಿ ನಗರ ರೈಲು ನಿಲ್ದಾಣ ಪ್ರವೇಶಿಸಿತ್ತು. ನಿಲ್ದಾಣದ ಮೂರನೇ ಪ್ಲಾಟ್ ಫಾರ್ಮ್ ನಲ್ಲಿ ನಿಲ್ಲಬೇಕಿದ್ದ ರೈಲು ನಿಧಾನವಾಗಿ ಸಂಚರಿಸುತ್ತಿದ್ದ ವೇಳೆ ರೈಲಿನ ಎಂಜಿನ್ ಹಾಗೂ ಎಂಜಿನ್ ಹಿಂಭಾಗದ ಎಸ್ಎಲ್ಆರ್ ಕೋಚ್ ಗಳು ಹಳಿ ತಪ್ಪಿವೆ. ಆದರೆ, ಘಟನೆಯಲ್ಲಿ ಲೋಕೋ ಪೈಲಟ್ ಗಳಿಗಾಗಲಿ ಕೋಚ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

ಏಕಾಏಕಿ ನಿಲುಗಡೆ: ಪ್ಲಾಟ್ ಫಾರ್ಮ್ ನಲ್ಲಿ ರೈಲು ನಿಧಾನವಾಗಿ ನಿಲುಗಡೆಯಾಗುತ್ತದೆ. ಆದರೆ, ಇಂದು ಮಾತ್ರ ಏಕಾಏಕಿ ನಿಂತು ಹೋಯಿತು. ಅಲ್ಲದೇ ಅಸಹಜವಾದ ಸದ್ದು ಕೇಳಿತು. ರೈಲಿನಿಂದ ಕೆಳಗಿಳಿದು ನೋಡಿದಾಗಲೇ ಎಂಜಿನ್ ಹಾಗೂ ಮತ್ತೊಂದು ಬೋಗಿ ಹಳಿ ತಪ್ಪಿರುವುದು ಗೊತ್ತಾಯಿತು ಎಂದು ಪ್ರಯಾಣಿಕರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ರೈಲು ಹಳಿ ತಪ್ಪಿರುವ ಸುದ್ದಿ ತಿಳಿದು ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಹಳಿ ಸರಿಪಡಿಸುವ ಕೆಲಸ ಮಾಡಿದರು. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಹಳಿ ಸರಿಪಡಿಸುವ ಕಾರ್ಯ ನಡೆದ ಕಾರಣ ಪ್ಲಾಟ್ ಫಾರ್ಮ್ 3ರಿಂದ ಹೊರಡಬೇಕಿದ್ದ ಬೃಂದಾವನ ಎಕ್ಸ್ ಪ್ರೆಸ್, ಕುರ್ಲಾ ಎಕ್ಸ್ ಪ್ರೆಸ್, ಭುವನೇಶ್ವರ್ ಎಕ್ಸ್ ಪ್ರೆಸ್ ಸೇರಿದಂತೆ ಇದರೆ ರೈಲುಗಳು ಸುಮಾರು 1 ತಾಸು ತಡವಾಗಿ ಸಂಚರಿಸಿದವು. ರೈಲು ಹಳಿ ತಪ್ಪಿರುವ ಬಗ್ಗೆ ಸುರಕ್ಷತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT