ಜಿಲ್ಲಾ ಸುದ್ದಿ

ಕಡಲೆಕಾಯಿ ಪರಿಷೆಗೆ ತಟ್ಟಿತು ಪರಿಷತ್ ಸಂಹಿತೆ ಬಿಸಿ

Sumana Upadhyaya

ಬೆಂಗಳೂರು: ಮೇಲ್ಮನೆ ಚುನಾವಣೆ ನೀತಿ ಸಂಹಿತೆಯ ಬಿಸಿ ಕಡಲೆಕಾಯಿ ಪರಿಷೆಗೂ  ತಟ್ಟಿದೆ. ಕಾರ್ತಿಕ ಸೋಮವಾರ ಅಂಗವಾಗಿ ದೊಡ್ಡಗಣಪತಿ ದೇವಸ್ಥಾನದಲ್ಲಿ ಸೋಮವಾರ  ಅಧಿಕೃತವಾಗಿ ಪ್ರಾರಂಭವಾಗಬೇಕಿದ್ದ ಕಡಲೆಕಾಯಿ ಪರಿಷೆ ಸ್ಥಗಿತಗೊಂಡಿದೆ. ದೊಡ್ಡಗಣಪತಿ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ, ಮೇಯರ್,  ಕೇಂದ್ರ ಸಚಿವರು, ಸ್ಥಳೀಯ ನಗರ ಪಾಲಿಕಾ ಸದಸ್ಯರು ಕಡಲೆಕಾಯಿ ಪರಿಷೆ ಕಾರ್ಯಕ್ರಮ  ಉದ್ಘಾಟಿಸಬೇಕಿತ್ತು.

ಆದರೆ ನೀತಿ ಸಂಹಿತೆ ಕಾರಣದಿಂದಾಗಿ ಸೋಮವಾರ ಯಾವುದೇ ಸರ್ಕಾರಿ ಪ್ರತಿನಿಧಿಗಳು  ಭಾಗವಹಿಸುವಂತಿಲ್ಲ. ಉಳಿದಂತೆ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಭಾನುವಾರ ಬೆಳಗ್ಗೆ  ಕ್ವಿಂಟಾಲ್ ಕಡಲೆಕಾಯಿಯ ಅಭಿಷೇಕ, ಬೆಣ್ಣೆ ಅಲಂಕಾರ ನಡೆಯಿತು.

SCROLL FOR NEXT