ಜೂಜು ಅಡ್ಡೆ(ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ಜೂಜು ಅಡ್ಡೆ ಮೇಲೆ ದಾಳಿ: 1.64 ಲಕ್ಷ ನಗದು, ರೂ.7.24 ಲಕ್ಷ ಮೌಲ್ಯದ ಪರಿಕರಗಳ ವಶಪಡಿಸಿಕೊಂಡ ಸಿಸಿಬಿ

ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಅನುಪಮ (23), ಕಿಶೋರ್ (23), ವೈಕುಂಟಯ್ಯ (27), ವೀರಭದ್ರೇಶ್ವರ ಶೆಟ್ಟಿ (42), ರೂಪೇಶ (23), ನಾಯಕ ( 29), ಭಾಸ್ಕರ (24), ಯೋಗೇಶ್ (25), ಅಬ್ಜಲ್ (24), ಅಬ್ಜಲ್ ಪಾಷಾ (33), ಮಧುಸೂದನ್(25), ಮಂಜುನಾಥ (24) ಮುನ್ನಾ( 34), ರಂಜಿತ್ (23), ಅರ್ಜುನ್(28), ಪ್ರಭಾಕರ್ (38), ವಿಜಯ್ (22) ಹಾಗೂ ಚೇತನ್ (28) ಬಂಧಿತರು.

ಡಿ.5ರಂದು ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿಯ ಕಟ್ಟಡವೊಂದರ ನೆಲಮಹಡಿಯಲ್ಲಿರುವ ಹರಿರಾಜ್ ಶೆಟ್ಟಿ ಮಾಲೀಕತ್ವದ ರಾಜೇಶ್ವರಿ ರಿಕ್ರಿಯೇಷನ್ಸ್ ಅಸೋಸಿಯೇಷನ್ಸ್ ಎಂಬ ಕ್ಲಬ್‍ನಲ್ಲಿ ಆರೋಪಿಗಳು ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.

ಈ ವೇಳೆ ರೂ.1.64 ಲಕ್ಷ ನಗದು ರೂ.7.24 ಲಕ್ಷ ಮೌಲ್ಯದ ವಿವಿಧ ಮುಖಬೆಲೆಯ 1583 ಟೋಕನ್ ಗಳು, ರೂ ೧ ಸಾವಿರ ಮುಖಬೆಲೆಯ 278, ರೂ. 500 ಮುಖಬೆಲೆಯ 618, ಹಾಗೂ ರೂ.200  ಮುಖ ಬೆಲೆಯ 687, 3 ಡೈಸ್ ಡಾರ್ಟ್ ಪಿನ್‍ಗಳು ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಕ್ಲಬ್‍ನ ಮಾಲೀಕ ಹರಿರಾಜ್ ಶೆಟ್ಟಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಅಂದರ್-ಬಾಹರ್:
ಇದೇವೇಳೆ ಅಂದರ್-ಬಾಹರ್ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ರೂ.62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಲೋಕೇಶ್(21), ಪ್ಯಾರೇಜಾನ್ (48), ನವೀನ್(23), ರಾಜು(37), ದಯಾನಂದ (29), ಶಶಿಕಾಂತ(30) ಹಾಗೂ ಸೂರ್ಯಕಾಂತ(30) ಬಂಧಿತರು. ಡಿ.6ರಂದು ಎಲೆಕ್ಟ್ರಾನಿಕ್ ಸಿಟಿ ಪಟೇಲಮ್ಮ ದೇವಸ್ಥಾನ ಮುಂಭಾಗದ ಸಂಗಸಂದ್ರದ ಮನೆಯೊಂದರಲ್ಲಿ ಹಣವನ್ನು ಪಟವಾಗಿ ಕಟ್ಟಿ ಅಂದರ್-ಬಾಹರ್ ಜೂಜಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ರೂ62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಜೂಜು ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ  ನಿತ್ಯಾ ತಲೆಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT