ಜೂಜು ಅಡ್ಡೆ(ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ಜೂಜು ಅಡ್ಡೆ ಮೇಲೆ ದಾಳಿ: 1.64 ಲಕ್ಷ ನಗದು, ರೂ.7.24 ಲಕ್ಷ ಮೌಲ್ಯದ ಪರಿಕರಗಳ ವಶಪಡಿಸಿಕೊಂಡ ಸಿಸಿಬಿ

ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಅನುಪಮ (23), ಕಿಶೋರ್ (23), ವೈಕುಂಟಯ್ಯ (27), ವೀರಭದ್ರೇಶ್ವರ ಶೆಟ್ಟಿ (42), ರೂಪೇಶ (23), ನಾಯಕ ( 29), ಭಾಸ್ಕರ (24), ಯೋಗೇಶ್ (25), ಅಬ್ಜಲ್ (24), ಅಬ್ಜಲ್ ಪಾಷಾ (33), ಮಧುಸೂದನ್(25), ಮಂಜುನಾಥ (24) ಮುನ್ನಾ( 34), ರಂಜಿತ್ (23), ಅರ್ಜುನ್(28), ಪ್ರಭಾಕರ್ (38), ವಿಜಯ್ (22) ಹಾಗೂ ಚೇತನ್ (28) ಬಂಧಿತರು.

ಡಿ.5ರಂದು ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿಯ ಕಟ್ಟಡವೊಂದರ ನೆಲಮಹಡಿಯಲ್ಲಿರುವ ಹರಿರಾಜ್ ಶೆಟ್ಟಿ ಮಾಲೀಕತ್ವದ ರಾಜೇಶ್ವರಿ ರಿಕ್ರಿಯೇಷನ್ಸ್ ಅಸೋಸಿಯೇಷನ್ಸ್ ಎಂಬ ಕ್ಲಬ್‍ನಲ್ಲಿ ಆರೋಪಿಗಳು ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.

ಈ ವೇಳೆ ರೂ.1.64 ಲಕ್ಷ ನಗದು ರೂ.7.24 ಲಕ್ಷ ಮೌಲ್ಯದ ವಿವಿಧ ಮುಖಬೆಲೆಯ 1583 ಟೋಕನ್ ಗಳು, ರೂ ೧ ಸಾವಿರ ಮುಖಬೆಲೆಯ 278, ರೂ. 500 ಮುಖಬೆಲೆಯ 618, ಹಾಗೂ ರೂ.200  ಮುಖ ಬೆಲೆಯ 687, 3 ಡೈಸ್ ಡಾರ್ಟ್ ಪಿನ್‍ಗಳು ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಕ್ಲಬ್‍ನ ಮಾಲೀಕ ಹರಿರಾಜ್ ಶೆಟ್ಟಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಅಂದರ್-ಬಾಹರ್:
ಇದೇವೇಳೆ ಅಂದರ್-ಬಾಹರ್ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ರೂ.62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಲೋಕೇಶ್(21), ಪ್ಯಾರೇಜಾನ್ (48), ನವೀನ್(23), ರಾಜು(37), ದಯಾನಂದ (29), ಶಶಿಕಾಂತ(30) ಹಾಗೂ ಸೂರ್ಯಕಾಂತ(30) ಬಂಧಿತರು. ಡಿ.6ರಂದು ಎಲೆಕ್ಟ್ರಾನಿಕ್ ಸಿಟಿ ಪಟೇಲಮ್ಮ ದೇವಸ್ಥಾನ ಮುಂಭಾಗದ ಸಂಗಸಂದ್ರದ ಮನೆಯೊಂದರಲ್ಲಿ ಹಣವನ್ನು ಪಟವಾಗಿ ಕಟ್ಟಿ ಅಂದರ್-ಬಾಹರ್ ಜೂಜಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ರೂ62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಜೂಜು ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ  ನಿತ್ಯಾ ತಲೆಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT