ಜೂಜು ಅಡ್ಡೆ(ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ಜೂಜು ಅಡ್ಡೆ ಮೇಲೆ ದಾಳಿ: 1.64 ಲಕ್ಷ ನಗದು, ರೂ.7.24 ಲಕ್ಷ ಮೌಲ್ಯದ ಪರಿಕರಗಳ ವಶಪಡಿಸಿಕೊಂಡ ಸಿಸಿಬಿ

ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಅನುಪಮ (23), ಕಿಶೋರ್ (23), ವೈಕುಂಟಯ್ಯ (27), ವೀರಭದ್ರೇಶ್ವರ ಶೆಟ್ಟಿ (42), ರೂಪೇಶ (23), ನಾಯಕ ( 29), ಭಾಸ್ಕರ (24), ಯೋಗೇಶ್ (25), ಅಬ್ಜಲ್ (24), ಅಬ್ಜಲ್ ಪಾಷಾ (33), ಮಧುಸೂದನ್(25), ಮಂಜುನಾಥ (24) ಮುನ್ನಾ( 34), ರಂಜಿತ್ (23), ಅರ್ಜುನ್(28), ಪ್ರಭಾಕರ್ (38), ವಿಜಯ್ (22) ಹಾಗೂ ಚೇತನ್ (28) ಬಂಧಿತರು.

ಡಿ.5ರಂದು ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿಯ ಕಟ್ಟಡವೊಂದರ ನೆಲಮಹಡಿಯಲ್ಲಿರುವ ಹರಿರಾಜ್ ಶೆಟ್ಟಿ ಮಾಲೀಕತ್ವದ ರಾಜೇಶ್ವರಿ ರಿಕ್ರಿಯೇಷನ್ಸ್ ಅಸೋಸಿಯೇಷನ್ಸ್ ಎಂಬ ಕ್ಲಬ್‍ನಲ್ಲಿ ಆರೋಪಿಗಳು ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.

ಈ ವೇಳೆ ರೂ.1.64 ಲಕ್ಷ ನಗದು ರೂ.7.24 ಲಕ್ಷ ಮೌಲ್ಯದ ವಿವಿಧ ಮುಖಬೆಲೆಯ 1583 ಟೋಕನ್ ಗಳು, ರೂ ೧ ಸಾವಿರ ಮುಖಬೆಲೆಯ 278, ರೂ. 500 ಮುಖಬೆಲೆಯ 618, ಹಾಗೂ ರೂ.200  ಮುಖ ಬೆಲೆಯ 687, 3 ಡೈಸ್ ಡಾರ್ಟ್ ಪಿನ್‍ಗಳು ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಕ್ಲಬ್‍ನ ಮಾಲೀಕ ಹರಿರಾಜ್ ಶೆಟ್ಟಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಅಂದರ್-ಬಾಹರ್:
ಇದೇವೇಳೆ ಅಂದರ್-ಬಾಹರ್ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ರೂ.62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಲೋಕೇಶ್(21), ಪ್ಯಾರೇಜಾನ್ (48), ನವೀನ್(23), ರಾಜು(37), ದಯಾನಂದ (29), ಶಶಿಕಾಂತ(30) ಹಾಗೂ ಸೂರ್ಯಕಾಂತ(30) ಬಂಧಿತರು. ಡಿ.6ರಂದು ಎಲೆಕ್ಟ್ರಾನಿಕ್ ಸಿಟಿ ಪಟೇಲಮ್ಮ ದೇವಸ್ಥಾನ ಮುಂಭಾಗದ ಸಂಗಸಂದ್ರದ ಮನೆಯೊಂದರಲ್ಲಿ ಹಣವನ್ನು ಪಟವಾಗಿ ಕಟ್ಟಿ ಅಂದರ್-ಬಾಹರ್ ಜೂಜಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ರೂ62.5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಜೂಜು ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ  ನಿತ್ಯಾ ತಲೆಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT