ಕೆ.ಆರ್.ಮಾರುಕಟ್ಟೆ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಅಡಮಾನ ಮುಕ್ತ ಮಾಡಲು ತೀರ್ಮಾನ

ಬಿಬಿಎಂಪಿಯು ಕೆ.ಆರ್.ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನ ಮಾಡಿ ಹುಡ್ಕೋದಿಂದ ಪಡೆದಿರುವ ರು.1251 ಕೋಟಿಗಳಿಗೆ ಈ ಎರಡೂ ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಲು ತೀರ್ಮಾನಿಸಿದೆ...

ಬೆಂಗಳೂರು: ಬಿಬಿಎಂಪಿಯು ಕೆ.ಆರ್.ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನ ಮಾಡಿ ಹುಡ್ಕೋದಿಂದ ಪಡೆದಿರುವ ರು.1251 ಕೋಟಿಗಳಿಗೆ ಈ ಎರಡೂ ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಲು ತೀರ್ಮಾನಿಸಿದೆ.

ನಗರದ ಕೆ.ಆರ್ ಮಾರುಕಟ್ಟೆಯನ್ನು ರು.500 ಕೋಟಿಗೆ ಅಡಮಾನ ಇಡಲಾಗಿತ್ತು. ಕಟ್ಟಡದ ಮಾರುಕಟ್ಟೆ ಮೌಲ್ಯ ಸುಮಾರು ರು.837 ಕೋಟಿಯಾಗಿದ್ದು, 2027ರವರೆಗೆ ಬಡ್ಡಿ ಹಾಗೂ ಅಸಲು ಸೇರಿ ರು.965 ಕೋಟಿ ಸಾಲ ಪಾವತಿಸಬೇಕಿತ್ತು. ಅದೇ ರೀತಿ ರು.974 ಕೋಟಿ ಮೌಲ್ಯದ ಯುಟಿಲಿಟಿ ಕಟ್ಟಡವನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ರು.751 ಕೋಟಿಗೆ ಅಡಮಾನವಿಡಲಾಗಿತ್ತು. ಈ ಎರಡೂ ಕಟ್ಟಡಗಳಿಂದ ಸುಮಾರು ರು.1251 ಕೋಟಿ ಸಾಲದ ಜತೆಗೆ ಕೋಟ್ಯಂತರ ಬಡ್ಡಿಯನ್ನು ದೀರ್ಘಾವಧಿಗೆ ಪಾವತಿಸಬೇಕಿತ್ತು.

ವಿವಿಧ ಕಾಲಿಕ ಸಾಲ ಮರುಪಾವತಿಯಿಂದ ಪಾಲಿಕೆ ಖಜಾನೆಗೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂಬುದನ್ನು ಮನಗಂಡ ಬಿಬಿಎಂಪಿ ಇದೀಗ ಕೆ.ಆರ್ ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನದಿಂದ ಬಿಡಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT