ಕೆ.ಆರ್.ಮಾರುಕಟ್ಟೆ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಅಡಮಾನ ಮುಕ್ತ ಮಾಡಲು ತೀರ್ಮಾನ

ಬಿಬಿಎಂಪಿಯು ಕೆ.ಆರ್.ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನ ಮಾಡಿ ಹುಡ್ಕೋದಿಂದ ಪಡೆದಿರುವ ರು.1251 ಕೋಟಿಗಳಿಗೆ ಈ ಎರಡೂ ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಲು ತೀರ್ಮಾನಿಸಿದೆ...

ಬೆಂಗಳೂರು: ಬಿಬಿಎಂಪಿಯು ಕೆ.ಆರ್.ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನ ಮಾಡಿ ಹುಡ್ಕೋದಿಂದ ಪಡೆದಿರುವ ರು.1251 ಕೋಟಿಗಳಿಗೆ ಈ ಎರಡೂ ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಲು ತೀರ್ಮಾನಿಸಿದೆ.

ನಗರದ ಕೆ.ಆರ್ ಮಾರುಕಟ್ಟೆಯನ್ನು ರು.500 ಕೋಟಿಗೆ ಅಡಮಾನ ಇಡಲಾಗಿತ್ತು. ಕಟ್ಟಡದ ಮಾರುಕಟ್ಟೆ ಮೌಲ್ಯ ಸುಮಾರು ರು.837 ಕೋಟಿಯಾಗಿದ್ದು, 2027ರವರೆಗೆ ಬಡ್ಡಿ ಹಾಗೂ ಅಸಲು ಸೇರಿ ರು.965 ಕೋಟಿ ಸಾಲ ಪಾವತಿಸಬೇಕಿತ್ತು. ಅದೇ ರೀತಿ ರು.974 ಕೋಟಿ ಮೌಲ್ಯದ ಯುಟಿಲಿಟಿ ಕಟ್ಟಡವನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ರು.751 ಕೋಟಿಗೆ ಅಡಮಾನವಿಡಲಾಗಿತ್ತು. ಈ ಎರಡೂ ಕಟ್ಟಡಗಳಿಂದ ಸುಮಾರು ರು.1251 ಕೋಟಿ ಸಾಲದ ಜತೆಗೆ ಕೋಟ್ಯಂತರ ಬಡ್ಡಿಯನ್ನು ದೀರ್ಘಾವಧಿಗೆ ಪಾವತಿಸಬೇಕಿತ್ತು.

ವಿವಿಧ ಕಾಲಿಕ ಸಾಲ ಮರುಪಾವತಿಯಿಂದ ಪಾಲಿಕೆ ಖಜಾನೆಗೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂಬುದನ್ನು ಮನಗಂಡ ಬಿಬಿಎಂಪಿ ಇದೀಗ ಕೆ.ಆರ್ ಮಾರುಕಟ್ಟೆ ಹಾಗೂ ಯುಟಿಲಿಟಿ ಕಟ್ಟಡಗಳನ್ನು ಅಡಮಾನದಿಂದ ಬಿಡಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ