ಜಿ. ಪರಮೇಶ್ವರ್ 
ಜಿಲ್ಲಾ ಸುದ್ದಿ

ಪರಮೇಶ್ವರ್ -ಮಾರುತಿ ಮಾನ್ಪಡೆ ಮಾತಿನ ಚಕಮಕಿ

ಬಡ ಮಹಿಳೆ ಕೊಲೆ ಶಂಕೆ ಬಗ್ಗೆ ಅಹವಾಲು ಸಲ್ಲಿಸಲು ಕಲಬುರ್ಗಿಯಿಂದ ಬಂದಿದ್ದ ರೈತ ನಾಯಕರನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬುಧವಾರ ,,,

ಬೆಂಗಳೂರು: ಬಡ ಮಹಿಳೆ ಕೊಲೆ ಶಂಕೆ ಬಗ್ಗೆ ಅಹವಾಲು ಸಲ್ಲಿಸಲು ಕಲಬುರ್ಗಿಯಿಂದ ಬಂದಿದ್ದ ರೈತ ನಾಯಕರನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬುಧವಾರ ಗಂಟೆಗಟ್ಟಲೇ ಕಾಯಿಸಿ ರೇಜಿಗೆ ಮೂಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರೈತ ನಾಯಕ ಮಾರುತಿ ಮಾನ್ಪಡೆ ಮತ್ತು ಪರಮೇಶ್ವರ್ ನಡುವೆ ಮಾತಿನ ಚಕಮಕಿಯೂ ಸಂಭವಿಸಿದೆ.

ಗೃಹ ಸಚಿವರ ಈ ನಡೆ ರೈತರ ಸಂಘದ ನಾಯಕ ಮಾರುತಿ ಮಾನ್ಪಡೆ ಮತ್ತು ರೈತರನ್ನು ಸಿಟ್ಟಿಗೇಳುವಂತೆ ಮಾಡಿದೆ. ಅದರಲ್ಲೂ ಗೃಹ ಸಚಿವರು ಅಹವಾಲು ಸಲ್ಲಿಸಲು ಹೋದವರನ್ನು ಕಾಂಗ್ರೆಸ್ ಕಚೇರಿಗೆ ಬರಹೇಳಿದ್ದು, ರೈತರನ್ನು ಕೆರಳುವಂತೆ ಮಾಡಿದೆ. ಇರಿಂದ ಗದ್ದಲ ಉಂಟಾಗಿತ್ತು. ಅಂತಿಮವಾಗಿ ಮಾರುತಿ ಮಾನ್ಪಡೆ ಸಚಿವರಿಗೆ ಘೇರಾವ್ ಹಾಕುವುದಾಗಿ ಹೇಳಿದ ಮೇಲೆ ಸಚಿವ ಪರಮೇಶ್ವರ್ ಅನ್ಯ ದಾರಿ ಇಲ್ಲದೆ ಅಹವಾಲು ಕೇಳಿದರು.

ಏನಿದು ಗಲಾಟೆ?: ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಒಡಲು ಗ್ರಾಮದ ರೈತ ಮಹಿಳೆ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದನ್ನು ಆತ್ಮಹತ್ಯೆ ಎಂದು ಕೇಸು ದಾಖಲಿಸಲಾಗಿತ್ತು. ಆದರೆ ಮಹಿಳೆಯ ಪೊಷಕರು ಕೊಲೆ ಎಂದು ಶಂಕಿಸಿದ್ದರು. ಈ ಸಂಬಂಧ ಗೃಹ ಸಚಿವ ಪರಮೇಶ್ವರ್ ಬಳಿ ಅಹವಾಲು ಸಲ್ಲಿಸಲು ರೈತ ನಾಯಕ ಮಾರುತಿ ಮಾನ್ಪಡೆ ಸಚಿವರ ಮನೆಯಲ್ಲಿ ವಿಚಾರಿಸಿದ್ದರು. ಆದರೆ ಸಚಿವರು ಕಚೇರಿಯಲ್ಲಿ ಸಿಗುತ್ತಾರೆ ಹೋಗಿ ಎಂಬ ಉತ್ತರ ಸಿಕ್ಕಿತ್ತು. ಅದರಂತೆ ಮಾನ್ಪಡೆ ಮತ್ತು ನೊಂದ ರೈತ ಕುಟುಂಬದವರು ಬೆಳಗ್ಗೆ 11ಗಂಟೆವರೆಗೂ ವಿಕಾಸಸೌಧದ ಸಚಿವರ ಕಚೇರಿಗೆ ಬಂದು ಕಾದು ಕುಳಿದತು. ಮಧ್ಯಾಹ್ನವಾದರೂ ಸಚಿವರು ಮಾನ್ಪಡೆ ಅವರನ್ನು ಕರೆಯಲಿಲ್ಲ. ಕೊನೆಗೆ ಸಚಿವರು ಕಚೇರಿಯಿಂದ ಹೊರ ಹೋಗುತ್ತಿದ್ದಾಗ ಮಾನ್ಪಡೆ ಅವರು ಆಕ್ಷೇಪಿಸಿದರು. ತಮ್ಮ ಅಹವಾಲು ಕೇಳಿ ಎಂದು ವಿನಂತಿಸಿದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಪರಮೇಶ್ವರ್ ಈಗ ಸಮಯವಿಲ್ಲರೀ. ಈಗ ಕೇಳುವುದಕ್ಕೆ ಆಗುವುದಿಲ್ಲ,'' ಎಂದರು.
ಇದರಿಂದ ಬೇಸರಗೊಂಡ ಮಾನ್ಪಡೆ ಅವರು, ``ನಾವು ಕಲಬುರ್ಗಿಯಿಂದ 600ಕಿ.ಮೀ. ಪ್ರಯಾಣ ಮಾಡಿ ಬಂದು ಕಾಯುತ್ತಿದ್ದೇವೆ. ಇದು ವೈಯಕ್ತಿಕವಲ್ಲ. ಕೇವಲ 2 ನಿಮಿಷ ನಮ್ಮ ಸಮಸ್ಯೆ ಕೇಳಿ ಸರ್ ಎಂದು ಮಾನ್ಪಡೆ ವಿನಂತಿಸಿದರು. ಆಗ ಪರಮೇಶ್ವರ್, ``ನನಗೆ
ಸಮಯ ಇಲ್ಲ. ಬೇಕಿದ್ದರೆ ಕೆಪಿಸಿಸಿ ಕಚೇರಿಗೆ ಬನ್ರಿ,'' ಎಂದರು. ಇದರಿಂದ ಸಿಟ್ಟಿಗೆದ್ದ ಮಾನ್ಪಡೆ. ನೀವು ಗೃಹ ಸಚಿವರು ಅದಕ್ಕೆ ಇಲ್ಲಿ ಬಂದಿದ್ದೇವೆ. ಬೇಕಿದ್ದರೆ ನಿಮ್ಮ ಮನೆಗೇ ಬಂದು ಕಾಯುತ್ತೇವೆ,'' ಎಂದು ಹೇಳಿದರು. ಅಷ್ಟೊತ್ತಿಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗದ್ದಲ ಉಂಟಾಗಿತ್ತು. ಅಂತಿಮವಾಗಿ ಅಲ್ಲಿದ್ದವರು ಸಮಾಧಾನಕ್ಕೆ ಯತ್ನಿಸಿದ ಸಚಿವರು ಅಹವಾಲು ಸ್ವೀಕರಿಸುವಂತೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT