(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಗುಂಡಿ ಮುಚ್ಚಿಸಲು ವಿಭಿನ್ನ ಹಾದಿ ಹಿಡಿದ ನಾಗರಿಕ

ಹದಗೆಟ್ಟ ರಸ್ತೆಗಳಲ್ಲಿನ ಗುಂಡಿ ನೋಡಿ ನಾಗರಿಕರು ಸರ್ಕಾರವನ್ನು ಬೈಯ್ಯುವುದನ್ನು ದಿನನಿತ್ಯ ಕೇಳುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಿಬಿಎಂಪಿಗೆ ಬುದ್ಧಿ ಕಲಿಸಲು ವಿಭಿನ್ನ ದಾರಿ ಅನುಸರಿಸಿದ್ದಾರೆ...

ಬೆಂಗಳೂರು: ಹದಗೆಟ್ಟ ರಸ್ತೆಗಳಲ್ಲಿನ ಗುಂಡಿ ನೋಡಿ ನಾಗರಿಕರು ಸರ್ಕಾರವನ್ನು ಬೈಯ್ಯುವುದನ್ನು ದಿನನಿತ್ಯ ಕೇಳುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಿಬಿಎಂಪಿಗೆ ಬುದ್ಧಿ ಕಲಿಸಲು ವಿಭಿನ್ನ ದಾರಿ ಅನುಸರಿಸಿದ್ದಾರೆ. `ನಾನು ದುಡ್ಡು ಕೊಡ್ತಿನಿ, ಮೊದಲು ಗುಂಡಿ ಮುಚ್ಚಿಸಿ' ಎಂದು ರು.2000 ಡಿಡಿ ತೆಗೆಸಿ ಪಾಲಿಕೆಗೆ ಕೊಟ್ಟಿದ್ದಾರೆ.

ಈ ರೀತಿ ಬಿಬಿಎಂಪಿಯ ಬೇಜವಾಬ್ದಾರಿತನವನ್ನು ಖಂಡಿಸಿದವರು ಡಾಲರ್ಸ್ ಕಾಲನಿ ನಿವಾಸಿ ಗಣೇಶ್‍ಬಾಬು. ಗಾಂಧಿನಗರದಲ್ಲಿ ವ್ಯಾಪಾರ ಮಾಡುವ ಗಣೇಶ್ ಗಾಂಧಿನಗರದಲ್ಲಿನ ರಸ್ತೆಯಲ್ಲಿನ ಬೃಹತ್ ಗುಂಡಿಯನ್ನು ನೋಡಿ ರೋಸಿ ಹೋದವರು. ಶುಕ್ರವಾರ ರಾತ್ರಿಯಂತೂ ಆ ಗುಂಡಿಯಲ್ಲಿ ಅವರ ಕಾರು ಏಕಾಏಕಿ ಇಳಿದಿದ್ದರಿಂದ ಒಂದು ಕ್ಷಣ ಅವರ ಕಾರಿನೊಳಗೆ ಅಲ್ಲೋಲ ಕಲ್ಲೋಲವೇ ಆಗಿ ಹೋಗಿತ್ತು. ಕಾರನ್ನು ಗುಂಡಿಯಿಂದ ಮೇಲೆತ್ತಲು ಹರಸಾಹಸ ಪಟ್ಟರು. ಅಲ್ಲಿ ಗುಂಡಿ ತಪ್ಪಿಸಲು ಬೇರೆ ವಾಹನಗಳು ಸರ್ಕಸ್ ಮಾಡಿ ಹೋಗೋದನ್ನು ಖುದ್ದು
ನೋಡಿದರು. ಹೇಗಾದರೂ ಮಾಡಿ ಬಿಬಿಎಂಪಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ ಗಣೇಶ್ ಅವತ್ತು ರಾತ್ರಿಯೆಲ್ಲ ವಿಚಾರ ಮಾಡಿದರು. ಈ ಬಗ್ಗೆ ಹಿಂದೆ ಬಿಬಿಎಂಪಿಗೆ ದೂರು
ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಪಾಲಿಕೆಯನ್ನು ದೂರುತ್ತಾ ಕಾಲಹರಣ ಮಾಡುವುದಕ್ಕಿಂತ ಆ ಗುಂಡಿ ಮುಚ್ಚಿಸಲು ತಾನೇ ಜವಾಬ್ದಾರಿ ತೆಗೆದುಕೊಂಡರೆ ಹೇಗೆ ಎಂದು ನಿರ್ಧರಿಸಿದ ಗಣೇಶ್, ಬೆಳಗ್ಗೆ ಎದ್ದ ತಕ್ಷಣವೇ ಬ್ಯಾಂಕ್‍ಗೆ ಹೋಗಿ ಬಿಬಿಎಂಪಿ ಹೆಸರಲ್ಲಿ ರು.2000 ಡಿಡಿ ಮಾಡಿಸಿದರು. ನೇರ ಪಾಲಿಕೆ ಕಚೇರಿಗೆ ತೆರಳಿ ಮೇಯರ್ ಗೆ ಭೇಟಿಯಾಗಲು ಹೋದರು. ಆದ್ರೆ ಮೇಯರ್ ಇರಲಿಲ್ಲ. ಆಯುಕ್ತ ಕುಮಾರ್ ನಾಯಕ್ ಸಹ ಯಾವುದೋ ಸಭೆಯಲ್ಲಿ ಬಿಜಿಯಾಗಿದ್ದರು. ನಂತರ ಉಪಮೇಯರ್ ಹೇಮಲತಾರನ್ನು ಭೇಟಿ ಮಾಡಿ ಡಿಡಿ ಕೊಟ್ಟು ರಸ್ತೆಗುಡಿ ಸರಿಪಡಿಸುವಂತೆ ಮನವಿ ಮಾಡಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

T20 ವಿಶ್ವಕಪ್ 2026: ಶಿವಂ ದುಬೆ ಸ್ಫೋಟಕ ಅರ್ಧಶತಕ, ನೆದರ್ಲೆಂಡ್ ಗೆ ಗೆಲ್ಲಲು 194 ರನ್ ಗುರಿ ನೀಡಿದ ಭಾರತ

Video: ಲೈವ್ ಸ್ಟ್ರೀಮಿಂಗ್ ವೇಳೆ ಕೈ ಕೊಟ್ಟ Filter, ಸೌಂದರ್ಯ ಬಟಾ ಬಯಲು..: 1.4 ಲಕ್ಷ ಫಾಲೋವರ್ಸ್ ಕಳೆದುಕೊಂಡ Insta 'ಸುಂದರಿ'!

News wrap 18-02-2026| ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ; ಫೆ.19 ರಂದು ಸಾರಿಗೆ ನೌಕರರ ಮುಷ್ಕರ; KSRTC, BMTC ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ; ಬೆಂಗಳೂರಿನಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ; ಬಿಜೆಪಿ ವಿರುದ್ಧ DKS ಗರಂ

T20 World Cup 2026: ಸತತ 3ನೇ ಬಾರಿಗೆ ಡಕೌಟ್; ಕೋಚ್ ಗಂಭೀರ್ ದಾಖಲೆ ಸರಿಗಟ್ಟಿದ Abhishek Sharma!

SCROLL FOR NEXT