ಜಿಲ್ಲಾ ಸುದ್ದಿ

ಸಿಗ್ನಲ್ ಫ್ರೀ ನಿಯಮ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ: ಸಚಿವರ ಆದೇಶ

Srinivas Rao BV

ಬೆಂಗಳೂರು: ರಾಜ್ಯ ಗೃಹ ಸಚಿವರ ಸಿಗ್ನಲ್ ಫ್ರೀ ನಿಯಮ ಇನ್ನುಮುಂದೆ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ! ಹೌದು. ಇದು ಸ್ವತಃ ಸಚಿವರೇ ನೀಡಿರುವ ಆದೇಶ. ಗೃಹ ಸಚಿವರು ಸಂಚರಿಸುವಾಗ ನಿಯಮದಂತೆ ಸಿಗ್ನಲ್  ಫ್ರೀ ಮಾಡಲಾಗುತ್ತದೆ. ಆಗ ಎಲ್ಲಾ ವಾಹನಗಳು ಒಟ್ಟಿಗೆ ನಿಲ್ಲಬೇಕಾಗುತ್ತದೆ. ನಂತರ ಸಚಿವರ ವಾಹನಗಳು ತೆರಳಿದ ನಂತರವಷ್ಟೇ ಇತರ ವಾಹನಗಳು ಸಾಗಬೇಕು. ಇಂಥ ಸಮಯದಲ್ಲಿ ಆಂಬುಲೆನ್ಸ್ ಗಳು ಕೂಡ ಸಚಿವರ ವಾಹನ ಸಾಗಿ ಹೋಗುವವರೆಗೂ ಕಾಯಬೇಕಿತ್ತು. ಆದರೆ ಇನ್ನು ಮುಂದೆ ಆ ಪರಿಸ್ಥಿತಿ ಬೇಡ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. 
ಚಾಲುಕ್ಯ ವೃತ್ತದಲ್ಲಿ ತೆರಳುತ್ತಿದ್ದಾಗ ಪೊಲೀಸರು ವಿಧಿಸಿದ್ದ ಸಿಗ್ನಲ್ ಫ್ರೀ ಸಮಯದಲ್ಲಿ ಆಂಬುಲೆನ್ಸ್ ವಾಹನಗಳ ಮಧ್ಯೆ ಸಿಲುಕಿರುವುದನ್ನು ಸಚಿವರು ಗಮನಿಸಿ ಆದೇಶ.  ಹೊರಡಿಸಿದ್ದಾರೆ. 

SCROLL FOR NEXT