ಜಿಲ್ಲಾ ಸುದ್ದಿ

2013- ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಟಕವಾಗಿದ್ದು, ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಹಜ್ ಪ್ರಶಸ್ತಿ ಪಡೆದಿದೆ.

ಬೆಂಗಳೂರು: 2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಟಕವಾಗಿದ್ದು, ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಹಜ್ ಪ್ರಶಸ್ತಿ ಪಡೆದಿದೆ.

ಹಜ್ ಚಿತ್ರದ ನಾಯಕ ನಟ ನಿಖಿಲ್ ಮಂಜೂಗೆ ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಿಸೆಂಬರ್ 1 ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟಿ ನಿವೇದಿತ ಅತ್ಯುತ್ತಮ ನಟಿಯಾಗಿ ಆಯ್ಕೆಗೊಂಡಿದ್ದಾರೆ.

ಅತ್ಯುತ್ತಮ ಚಿತ್ರಗಳು
ಪ್ರಥಮ ಅತ್ಯುತ್ತಮ ಚಿತ್ರ - ಹಜ್
ದ್ವಿತೀಯ ಅತ್ಯುತ್ತಮ ಚಿತ್ರ - ಜಟ್ಟ
ತೃತೀಯ ಅತ್ಯುತ್ತಮ ಚಿತ್ರ - ಪ್ರಕೃತಿ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಇಂಗಳೆ ಮಾರ್ಗ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ- ಚಾರ್‍ಮಿನಾರ್ 
ಅತ್ಯುತ್ತಮ ಮಕ್ಕಳ ಚಿತ್ರ- ಹಾಡು ಹಕ್ಕಿ ಹಾಡು 
ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ- ಅಗಸಿ ಪಾರ್ಲರ್ 
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ರಿಕ್ಷಾ ಡ್ರೈವರ್ ( ತುಳು )

2013ರ ಜೀವಮಾನ ಸಾಧನೆ ಪ್ರಶಸ್ತಿಗಳು

ಡಾಃ ರಾಜ್‍ಕುಮಾರ್ ಪ್ರಶಸ್ತಿ- ಶ್ರೀನಾಥ್, ಹಿರಿಯ ಚಲನಚಿತ್ರ ನಟರು
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ- ಪಿ.ಹೆಚ್. ವಿಶ್ವನಾಥ್, ಚಲನಚಿತ್ರ ನಿರ್ದೇಶಕರು   
ಡಾ. ವಿಷ್ಣುವರ್ಧನ್ ಪ್ರಶಸ್ತಿ- ಕೆ.ವಿ. ಗುಪ್ತ, ಚಲನಚಿತ್ರ ವಿತರಕರು  ಹಾಗೂ ನಿರ್ಮಾಪಕರು
   
ಅತ್ಯುತ್ತಮ ಪೋಷಕ ನಟ(ಕೆ.ಎಸ್.ಅಶ್ವಥ್ ಪ್ರಶಸ್ತಿ)- ಶ್ರೀ ಶರತ್ ಲೋಹಿತಾಶ್ವ
ಚಿತ್ರ : ಮತ್ತೆ ಸತ್ಯಾಗ್ರಹ
   
ಅತ್ಯುತ್ತಮ ಪೋಷಕ ನಟಿ- ಶ್ರೀಮತಿ ಭಾಗೀರಥಿ ಬಾಯಿ ಕದಂ
ಚಿತ್ರ : ಅಗಸಿ ಪಾರ್ಲರ್   

ಅತ್ಯುತ್ತಮ ಕತೆ- ಶ್ರೀಲಲಿತೆ
ಚಿತ್ರ  : ಹಜ್   

ಅತ್ಯುತ್ತಮ ಚಿತ್ರಕತೆ- ಜಯತೀರ್ಥ
ಚಿತ್ರ : ಟೋನಿ   

ಅತ್ಯುತ್ತಮ ಸಂಭಾಷಣೆ- ನಾಗಶೇಖರ್
ಚಿತ್ರ : ಮೈನಾ   

ಅತ್ಯುತ್ತಮ ಛಾಯಾಗ್ರಹಣ- ಪಿ.ಕೆ.ಹೆಚ್. ದಾಸ್
ಚಿತ್ರ : ಚಂದ್ರ

ಅತ್ಯುತ್ತಮ ಸಂಗೀತ ನಿರ್ದೇಶನ- ಪೂರ್ಣಚಂದ್ರ ತೇಜಸ್ವಿ
ಚಿತ್ರ : ಲೂಸಿಯಾ   

ಅತ್ಯುತ್ತಮ ಸಂಕಲನ- ಕೆ.ಎಂ. ಪ್ರಕಾಶ್
ಚಿತ್ರ : ಟೋನಿ   

ಅತ್ಯುತ್ತಮ ಬಾಲ ನಟ- ಮಾಸ್ಟರ್ ಪ್ರದ್ಯುಮ್ನ
ಚಿತ್ರ : ಕರಿಯಾ ಕಣ್‍ಬಿಟ್ಟ   

ಅತ್ಯುತ್ತಮ ಬಾಲ ನಟಿ- ಬೇಬಿ  ಶ್ರೇಯಾ
ಚಿತ್ರ: ಅತಿ ಅಪರೂಪ   

ಅತ್ಯುತ್ತಮ ಕಲಾ ನಿರ್ದೇಶನ- ರವಿ
ಚಿತ್ರ : ಭಜರಂಗಿ

ಅತ್ಯುತ್ತಮ ಗೀತ ರಚನೆ- ಅರಸು ಅಂತಾರೆ
ಗೀತೆ :  ಮಳೆ ಹನಿಯೇ ಕಣ್ಣೀರ ಹಾಕಿದಂತೆ....ಮದರಂಗಿ
   
ಅತ್ಯುತ್ತಮ  ಹಿನ್ನಲೆ ಗಾಯಕ- ನವೀನ್ ಸಜ್ಜು
ಹಾಡು :  ಎದೆಯೊಳಗೆ ತಮತಮ ತಮಟೆ.....ಲೂಸಿಯಾ
   
ಅತ್ಯುತ್ತಮ ಹಿನ್ನಲೆ ಗಾಯಕಿ- ಸಚಿನಾ ಹೆಗ್ಗಾರ್
ಗೀತೆ :  ಹೆದರ್‍ಬ್ಯಾಡ್ರಿ ಅಂತ ...... ಕಡ್ಡಿಪುಡಿ



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT