ಹರಿಣಿಶ್ರೀ ವಿನ್ಯಾಸ ಮಾಡಿರುವ ಪ್ರಶಸ್ತಿ ವಿಜೇತ ಪದಕ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಅಂತಾರಾಷ್ಟ್ರೀಯ ನಾಣ್ಯ ವಿನ್ಯಾಸ ಕಲಾ ಸ್ಪರ್ಧೆಯಲ್ಲಿ ಬೆಂಗಳೂರು ವಿದ್ಯಾರ್ಥಿನಿಗೆ ಬಹುಮಾನ

ಜಪಾನ್‍ನಲ್ಲಿ ನಡೆದ ಅಂತಾ ರಾಷ್ಟ್ರೀಯ ನಾಣ್ಯ ವಿನ್ಯಾಸ ಸ್ಪರ್ಧೆಯಲ್ಲಿ ನಗರದ ಮೌಂಟ್ ಕಾರ್ಮಲ್ ಕಾಲೇಜಿ..

ಬೆಂಗಳೂರು: ಜಪಾನ್‍ನಲ್ಲಿ ನಡೆದ ಅಂತಾ ರಾಷ್ಟ್ರೀಯ ನಾಣ್ಯ ವಿನ್ಯಾಸ ಸ್ಪರ್ಧೆಯಲ್ಲಿ ನಗರದ ಮೌಂಟ್ ಕಾರ್ಮಲ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಬಿ.ಟಿ.ಹರಿಣಿಶ್ರೀ ಅವರು ನಾಲ್ಕನೇ ಬಹುಮಾನ ಹಾಗೂ ಸ್ಪೆಷಲ್ ಜ್ಯೂರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಐದು ದೇಶಗಳ ಒಟ್ಟು 187 ಕಲಾಕೃತಿಗಳ ಪೈಕಿ ಸಂಸ್ಥೆಯ 14 ವಿದ್ಯಾರ್ಥಿಗಳು ಕಳುಹಿಸಿದ್ದ 33 ಕಲಾಕೃತಿಗಳಲ್ಲಿ ಹರಿಣಿ ಅವರ `ಕಾಸ್ಮಿಕ್ ಡ್ಯಾನ್ಸರ್' ಎಂಬ ಶಿವನ ಕಲಾಕೃತಿ ವಿಶೇಷ ಮನ್ನಣೆಗೆ ಪಾತ್ರ ವಾಗಿದೆ ಎಂದು ಲಲಿತಕಲಾ ಸೆಂಟರ್ ಫಾರ್ ವಿಶುಯಲ್ ಆರ್ಟ್ಸ್ ಸಂಸ್ಥೆ ಅಧ್ಯಕ್ಷ ಎಸ್.ಜಯವಿನು ಕುಮಾರ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಸ್ಪರ್ಧೆಯಲ್ಲಿ ಒಟ್ಟು 4 ಉತ್ತಮ ಕಲಾಕೃತಿಯನ್ನು ಗುರುತಿಸಲಾಗಿದ್ದು, ಹರಿಣಿ ಅವರ ಕಲಾಕೃತಿಗೆ 418 ಡಾಲರ್ (ಸುಮಾರು 25 ಸಾವಿರ ರುಪಾಯಿ) ನಗದು ಬಹುಮಾನ ಸಿಕ್ಕಿದೆ. `ಜಗದ ನರ್ತಕ ನಟರಾಜ' ಎಂಬ ಶೀರ್ಷಿಕೆಯಡಿ ನಾಣ್ಯದ ಎರಡು ಮುಖಗಳನ್ನು ವಿನ್ಯಾಸಗೊಳಿಸಿ ಕಲಾಕೃತಿ ರಚಿಸಿದ್ದ ಹರಿಣಿ, ಭರತನಾಟ್ಯ, ಕಥಕ್ ನೃತ್ಯಗಾರ್ತಿಯೂ ಆಗಿದ್ದು, ಈ ಪ್ರಶಸ್ತಿ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದೆ ಬಿ.ಟಿ.ಹರಿಣಿಶ್ರೀ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT