ಅಕ್ಕಿ ಚೀಲ( ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ನದಿಯೊಳಗೆ ಸಿಕ್ಕಿತು ಅಕ್ಕಿ!

ಯಲ್ಲಾಪುರ ಮತ್ತು ಶಿರಸಿ ತಾಲೂಕಿನ ಗಡಿ ಭಾಗವಾದ ತಡಗುಣಿ ನದಿ ಸೇತುವೆ ಬಳಿ ಸುಮಾರು 20 ಚೀಲದಷ್ಟು ಅಕ್ಕಿ ಚೆಲ್ಲಿರುವುದು ಪತ್ತೆಯಾಗಿದೆ.

ಯಲ್ಲಾಪುರ: ಯಲ್ಲಾಪುರ ಮತ್ತು ಶಿರಸಿ ತಾಲೂಕಿನ ಗಡಿ ಭಾಗವಾದ ತಡಗುಣಿ ನದಿ ಸೇತುವೆ ಬಳಿ ಸುಮಾರು 20 ಚೀಲದಷ್ಟು ಅಕ್ಕಿ ಚೆಲ್ಲಿರುವುದು ಪತ್ತೆಯಾಗಿದೆ.

ಈ ಅಕ್ಕಿಯನ್ನು ಎರಡು ದಿನಗಳ ಹಿಂದೆ ಎಸೆದಿರಬಹುದೆಂದು ಅಂದಾಜಿಸಲಾಗಿದ್ದು, ಹರಿದ ಚೀಲಗಳು ನದಿ ತಟದಲ್ಲಿ ಲಭ್ಯವಾಗಿವೆ.

ನದಿಯಲ್ಲಿ ಸುಮಾರು ನಾಲ್ಕೈದು ಅಡಿ ನೀರಿನಲ್ಲಿ ಎರಡು ಅಡಿಗೂ ಹೆಚ್ಚು ಎತ್ತರಕ್ಕೆ ಅಕ್ಕಿ ರಾಶಿ ಬಿದ್ದಿದೆ. 50 ಕೆ.ಜಿಯ 20 ಹರಿದ ಖಾಲಿ ಗೋಣಿಚೀಲ ದೊರೆತಿದ್ದು, ಅದರ ಮೇಲೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಪಂಜಾಬ್ ರೈಸ್ ಎಂದು ಬರೆಯಲಾಗಿದೆ. ಸಂಗೂರ್ ಜಿಲ್ಲೆಯ ಮಲ್ಲಾರ್ ಕೋಟ್ಲಾದ ಎ.ಕೆ ರೈಸ್ ಮಿಲ್ ನಲ್ಲಿ ಮಿಲ್ಲಿಂಗ್ ಆಗಿದ್ದು ಎ ಗ್ರೇಡ್ ರಾ ರೈಸ್ ಎಂದು ಬರೆಯಲಾಗಿದೆ. 2014 -15 ರ ವೇಳೆಯ ಬೆಳೆಯಾಗಿದ್ದು ತೂಕ 50 ಕೆ.ಜೆ ಎಂದು ಲೇಬಲ್ ನಲ್ಲಿ ನಮೂದಿಸಲಾಗಿದೆ. ಈ ಕುರಿತು ಆಹಾರ್ ಶಿರಸ್ತೆದಾರ್ ಜಿ.ಎಸ್ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದು ಇದುವರೆಗೆ ತಮಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಬೃಹತ್ ಪ್ರಮಾಣದ ಅಕ್ಕಿ ಚೆಲ್ಲಿರುವುದು ಕುತೂಹಲಕ್ಕೆ ಕಾರಣವಾಗಿದೆ.      
  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

SCROLL FOR NEXT