ಕಬ್ಬು ಬೆಳೆ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಬೆಳೆಗೆ ಬೆಂಕಿ ಇಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರು

ತಾವೇ ಬೆಳೆದ ಕಬ್ಬು ಬೆಳೆಗೆ ಬೆಂಕಿ ಇಟ್ಟು, ಅದರೊಳಗೇ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ವರು ರೈತ ಮಹಿಳೆಯರು ಯತ್ನಿಸಿರುವ...

ಮಂಡ್ಯ: ತಾವೇ ಬೆಳೆದ ಕಬ್ಬು ಬೆಳೆಗೆ ಬೆಂಕಿ ಇಟ್ಟು, ಅದರೊಳಗೇ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ವರು ರೈತ ಮಹಿಳೆಯರು ಯತ್ನಿಸಿರುವ ಘಟನೆ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ. ಎಚ್.ಮಲ್ಲಿಗೆ ಗ್ರಾಮದ ಸುನಂದಾ, ಜಯಂತಿ, ಕಣ್ಣಮ್ಮ ಹಾಗೂ ಪಾರ್ವ ತಮ್ಮ ಆತ್ಮಹತ್ಯೆಗೆ ಯತ್ನಿಸಿದವರು. ಇನ್ನೂ ಕಾರ್ಯಾರಂಭವಾಗದ ಸಕ್ಕರೆ ಕಾರ್ಖಾನೆಗಳು ಮತ್ತು ಆಲೆಮನೆ ಮಾಲೀಕರು ಕಬ್ಬು  ಖರೀದಿಸಲು ಹಿಂದೇಟು ಹಾಕಿದ್ದರಿಂದ ಈ ನಿರ್ಧಾರಕ್ಕೆ ಮುಂದಾಗಿದ್ದರು. ಆದರೆ, ಅಲ್ಲೇ ಇದ್ದ ಕುರಿಗಾಹಿಗಳು ಮಹಿಳೆ ಯರನ್ನು ರಕ್ಷಿಸಿದ್ದಾರೆ.ಸುದ್ದಿ ತಿಳಿದೊಡನೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಕಬ್ಬಿನಗದ್ದೆಯಲ್ಲಿ ಬೆಂಕಿ  ನಂದಿಸಿದ್ದಾರೆ. ಸುಮಾರು ಆರು ಎಕರೆಗೂ ಹೆಚ್ಚು ಕಬ್ಬು ಬೆಳೆಗೆ ಹಾನಿ ಯಾಗಿದೆ. ಪಾರ್ವತಮ್ಮ ಅವರಿಗೆ ಸೇರಿದ 2.5 ಎಕರೆ ಕಬ್ಬು, ಸುನಂದಾರಿಗೆ ಸೇರಿದ 1.6 ಎಕರೆ, ಕಣ್ಣಮ್ಮ ಅವರ 1 ಎಕರೆ ಹಾಗೂ ಜಯಂತಿ ಅವರ 1.5 ಎಕರೆ ಕಬ್ಬು ಬೆಳೆ ಸುಟ್ಟು ಕರಕಲಾಗಿದೆ. ಜಯಂತಿ ಎಂಬುವವರು ರು 4 ಲಕ್ಷ ಸಾಲ ಮಾಡಿ ಕಬ್ಬು ಬೆಳೆದಿದ್ದರು. ಲೇವಾ ದೇವಿದಾರರು ಸಾಲ ವಾಪಸ್ ನೀಡುವಂತೆ ಪೀಡಿಸುತ್ತಿದ್ದರು. ಇದೇ ವೇಳೆ, ಕಟಾವಿಗೆ ಬಂದಿದ್ದ ಕಬ್ಬು ಖರೀದಿಸಲು ಆಲೆಮನೆ ಮಾಲೀಕರೂ ನಿರಾಕರಿಸಿದ್ದರಿಂದ ಬೇಸ ತ್ತಿದ್ದರು. ಇನ್ನು, ಸುನಂದಾ ರು. 3 ಲಕ್ಷ ಪಾರ್ವತಮ್ಮ ರು. 5 ಲಕ್ಷ ಹಾಗೂ ಕಣ್ಣಮ್ಮ ರು.1 ಲಕ್ಷ ಸಾಲ ಮಾಡಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ , ಡಿವೈಎಸ್ಪಿ ಉದೇಶ್ ಅವರು ಭೇಟಿ ನೀಡಿ ಪರಿಶೀಲಿಸಿ, ಮಹಿಳೆಯರಿಗೆ ಸಾಂತ್ವನ ಹೇಳಿದರು.`ಕಬ್ಬು ಬೆಳೆಗೆ ಬೆಂಕಿ ಹಚ್ಚಿದ ನಾಲ್ವರು ಮಹಿಳೆಯರು, ನೋಡನೋಡುತ್ತಲೇ ಅದರೊಳಗೆ ನುಗ್ಗಲು ಯತ್ನಿಸುತ್ತಿದ್ದರು. ಕೂಡಲೇ ನಾನು ಮತ್ತು ನನ್ನ ಜತೆಗಿದ್ದವರು ಅವರನ್ನು ಹೊರಗೆ ಎಳೆತಂದೆವು' ಎಂದು ಶೇಖರ್ ಎಂಬಾತ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ  ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT