ಉಪಲೋಕಾಯುಕ್ತ ಸುಭಾಷ ಅಡಿ 
ಜಿಲ್ಲಾ ಸುದ್ದಿ

ಮಜಗೆ ಒಂದು ವರ್ಷ ಸುಮ್ಮನಿದ್ದಿದ್ದೇಕೆ? ಉಪಲೋಕಾಯುಕ್ತ ಸುಭಾಷ ಅಡಿ ಪ್ರಶ್ನೆ

`ಉಪಲೋಕಾಯುಕ್ತ ಎಸ್.ಬಿ. ಮಜಗೆ ನಿವೃತ್ತಿಯ ಕಾಲಕ್ಕೆ ನನ್ನ ಮೇಲೆ ಯಾವ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ನಾನು ಅಧಿಕಾರಕ್ಕೆ ಬಂದಾಗಿನಿಂದ ಲೋಕಾಯುಕ್ತಕ್ಕೆ ಬಂದಿರುವ ಎಲ್ಲ ಪತ್ರಗಳನ್ನು, ದಾಖಲೆಗಳನ್ನು ಜೋಪಾನವಾಗಿಟ್ಟಿದ್ದೇನೆ...

ಹುಬ್ಬಳ್ಳಿ: `ಉಪಲೋಕಾಯುಕ್ತ ಎಸ್.ಬಿ. ಮಜಗೆ ನಿವೃತ್ತಿಯ ಕಾಲಕ್ಕೆ ನನ್ನ ಮೇಲೆ ಯಾವ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ನಾನು ಅಧಿಕಾರಕ್ಕೆ ಬಂದಾಗಿನಿಂದ ಲೋಕಾಯುಕ್ತಕ್ಕೆ ಬಂದಿರುವ ಎಲ್ಲ ಪತ್ರಗಳನ್ನು, ದಾಖಲೆಗಳನ್ನು ಜೋಪಾನವಾಗಿಟ್ಟಿದ್ದೇನೆ. ಮಜಗೆ ಸೇರಿದಂತೆ ಯಾರೇ ಬೇಕಾದರೂ ಕಡತಗಳನ್ನು ಪರಿಶೀಲಿಸಬಹುದು' ಎಂದು ಉಪಲೋಕಾಯುಕ್ತ ಸುಭಾಷ ಅಡಿ ಹೇಳಿದ್ದಾರೆ.

ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, `ನ್ಯಾಯಮೂರ್ತಿಯಾಗಿ ಮಾಧ್ಯಮದ ಮುಂದೆ ಹೋಗಿ ಮಾತನಾಡುವುದು ಸರಿಯಲ್ಲ. ಮಜಗೆಯವರು ಮಾಧ್ಯಮಕ್ಕೆ ಹೇಳಿಕೆ ನೀಡುವ ಬದಲು ನನ್ನ ಕಚೇರಿಗೆ ಬಂದು ಕಡತ ಪರಿಶೀಲನೆ ಮಾಡಲಿ' ಎಂದರು. ಡಾ. ಶೀಲಾ ಪಾಟೀಲ್ ಎಂಬವರ ಪ್ರಕರಣವನ್ನು ಮುಚ್ಚಿ ಹಾಕಿದ್ದೇನೆ ಎಂದು ಮಜಗೆ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ 2014ರ ಕಡತ ಮಾಯವಾಗಿದೆ ಎಂದು ದೂರಿದ್ದಾರೆ. ಒಂದು ವರ್ಷ ಕಾಲ ಮಜಗಿ ಯವರು ಸುಮ್ಮನೇ ಕುಳಿತುಕೊಂಡಿದ್ದು ಏಕೆ? ಇನ್ನೂ ಕಾಲ ಮಿಂಚಿಲ್ಲ, ಬೇಕಿದ್ದರೆ ಮಜಗಿ ಕಡತ ಪರಿಶೀಲಿಸಲಿ ಎಂದು ಸವಾಲು ಹಾಕಿದರು. ಲೋಕಾಯುಕ್ತ ಸಂಸ್ಥೆಯಲ್ಲಿ ಯಾರೇ ಭ್ರಷ್ಟಾಚಾರವೆಸಗಿದ ಮಾತ್ರಕ್ಕೆ ಸಂಸ್ಥೆಗೆ ಕೆಟ್ಟ ಹೆಸರು ಬರುವುದಿಲ್ಲ. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು. ಲೋಕಾಯುಕ್ತ ಸಂಸ್ಥೆ ಯಾರೇ ಒಬ್ಬರಿಂದ ನಡೆಯುವುದೂ ಇಲ್ಲ. ಸಂಸ್ಥೆಯ ಹೆಸರು ಕೆಡಬಾರದು ಎನ್ನುವ ಕಳಕಳಿ ಅದರಡಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಇರಬೇಕು. ಕೆಲಸದಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳಬೇಕು, ಪ್ರಾಮಾಣಿಕತೆ ತೋರ್ಪಡಿಸಬೇಕು. ಇದೀಗ ಕಪ್ಪು ಚುಕ್ಕೆ ಬಂದಿದ್ದು ವ್ಯಕ್ತಿಗೇ ಹೊರತು ಸಂಸ್ಥೆಗಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT